ರಾಮನಗರದ ನಿವಾಸಿ ವೆಂಕಟೇಶ್ (25) ಚಾಕುವಿನಿಂದ ಇರಿದುಕೊಂಡ ಯುವಕ. ಈತ ಚನ್ನಪಟ್ಟಣ ನಗರದ ಸಂಗೀತ ಮೊಬೈಲ್ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದು,ಅಲ್ಲೇ ಕೆಲಸ ಮಾಡುತ್ತಿರುವಕೋಟೆಯ ವರದ ರಾಜಸ್ವಾಮಿ ದೇವಸ್ಥಾನ ರಸ್ತೆಯ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದ. ಆದರೆ, ಇದಕ್ಕೆ ಯುವತಿಯ ಸಮ್ಮತಿ ಇರಲಿಲ್ಲ. ತನ್ನನ್ನು ಪ್ರೀತಿಸುವಂತೆ ಯುವತಿಗೆ ಈತ ಹಲವು ಬಾರಿ ಒತ್ತಾಯಿಸಿದ್ದ. ಹೀಗಾಗಿ ಯುವತಿ ಕೆಲಸ ಬಿಟ್ಟು, ಮನೆಯಲ್ಲೇ ಇದ್ದರು ಎಂದು ತಿಳಿದುಬಂದಿದೆ.