ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಈ ಗ್ರಾಮವಿದೆ. ಬಾಳೆ, ತೆಂಗು ಮುಂತಾದ ತೋಟಗಳಿವೆ. ಕಳೆದ 20 ದಿನಗಳಿಂದ ಆನೆಗಳ ದಾಳಿ ನಿರಂತರವಾಗಿದೆ. ಬಾಳೆ ತೋಟದಲ್ಲಿ ಅಳವಡಿಸಿದ್ದ ನೀರಾವರಿ ಪೈಪ್ ಲೈನ್ಗಳನ್ನು ಆನೆಗಳು ಕಿತ್ತೆಸೆದಿವೆ. ಬೆಳೆದು ನಿಂತ ಬಾಳೆಗಿಡಗಳನ್ನು ಕಿತ್ತು ಹಾಕಿವೆ. ತೆಂಗಿನ ಮರಗಳನ್ನು ಉರುಳಿಸಿವೆ ಎಂದು ಸ್ಥಳೀಯರಾದ ರಾಮಚಂದ್ರ ಎಂಬುವರು ದೂರಿದರು.