ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ ಸರ್ಕಾರಿ ಜಮೀನು ತೆರವು: ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ

Last Updated 20 ಜೂನ್ 2021, 4:57 IST
ಅಕ್ಷರ ಗಾತ್ರ

ಬಿಡದಿ: ಅನಧಿಕೃತವಾಗಿ ಒತ್ತುವರಿಯಾಗಿದ್ದ ಮಂಚನಾಯಕನಹಳ್ಳಿ ವ್ಯಾಪ್ತಿಯ ಬಿಲ್ಲಕೆಂಪ್ಪನಹಳ್ಳಿಯ ಸರ್ವೆ ನಂ. 5ರ ಕೆರೆಯ ಸುಮಾರು 9 ಎಕರೆ ಜಮೀನು ಹಾಗೂ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ಸರ್ವೆ ನಂ. 35ರ 30 ಗುಂಟೆ ಜಾಗವನ್ನು ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ, ಸರ್ವೆ ಇಲಾಖೆಯ ಸಹಯೋಗದೊಂದಿಗೆ ಗುರುತಿಸಿ ತೆರವುಗೊಳಿಸಲಾಯಿತು.

ಅಧ್ಯಕ್ಷ ಸತೀಶ್ ಕುಮಾರ್‌, ಸದಸ್ಯರಾದ ನಂದಪ್ರಭ ಆನಂದ್, ಮಮತಾ ರವಿಕುಮಾರ್, ಮಹೇಶ್, ಬಿಲ್ಲಕೆಂಪ್ಪನಹಳ್ಳಿ ಪಂಚಾಯಿತಿ ಸದಸ್ಯರಾದ ಸತೀಶ್, ಆನಂದ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಸಮ್ಮುಖದಲ್ಲಿ ಜಾಗ ಗುರುತಿಸಿ ತೆರವುಗೊಳಿಸಲಾಯಿತು.

‘ಅಪಾರ ಬೆಲೆ ಬಾಳುವ ಈ ಜಾಗವನ್ನು ಪಂಚಾಯಿತಿಯ ಅಭಿವೃದ್ಧಿಗೆ ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT