<p><strong>ರಾಮನಗರ</strong>: ಕಳೆದ ಆರು ತಿಂಗಳ ಹಿಂದೆ ಸರ್ಕಾರಕ್ಕೆ ಬೆಂಬಲ ಬೆಲೆ ಅಡಿ ರಾಗಿ ಮಾರಾಟ ಮಾಡಿದ್ದ ಜಿಲ್ಲೆಯ ರೈತರ ಪೈಕಿ ಇನ್ನೂ ಕೆಲವರಿಗೆ ಹಣ ತಲುಪಿಲ್ಲ. ಇದರಿಂದಾಗಿ ಕೃಷಿಕರು ಕಂಗಾಲಾಗಿದ್ಧಾರೆ.</p>.<p>ಒಂದು ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಬೆಂಬಲ ಬೆಲೆ ಅಡಿ ರಾಗಿ ನೀಡಿದ್ದ ರೈತರ ಪೈಕಿ ಶೇ ೨೦ರಷ್ಟು ಮಂದಿಗೆ ಇನ್ನೂ ಸರ್ಕಾರ ಹಣ ನೀಡಿಲ್ಲ. ಬಿಡುಗಡೆಯಾದ ಹಣವೂ ಕೆಲವೆಡೆ ಅರ್ಹ ಫಲಾನುಭವಿಗೆ ತಲುಪದೇ ಸಮಸ್ಯೆಯಾಗಿದೆ. ಜಿಲ್ಲೆಯಲ್ಲಿ ಈ ವರ್ಷ ಖರೀದಿ ಕೇಂದ್ರಗಳ ಮೂಲಕ 1.69 ಲಕ್ಷ ಕ್ವಿಂಟಲ್ ರಾಗಿ ಖರೀದಿ ಮಾಡಲಾಗಿತ್ತು. 4 ತಾಲೂಕುಗಳಲ್ಲಿ ಖರೀದಿ ಕೇಂದ್ರ ತೆರೆದಿದ್ದ ಸರ್ಕಾರ ಫೆಬ್ರವರಿ, ಮಾರ್ಚ್ ನಲ್ಲಿ ರಾಗಿ ಖರೀದಿ ಮಾಡಿತ್ತು. ಪ್ರತಿ ಕ್ವಿಂಟಲ್ಗೆ ₨3,150 ಬೆಲೆ ನಿಗದಿಯಾಗಿತ್ತು.</p>.<p>"ಜಿಲ್ಲೆಯಲ್ಲಿ ಎಲ್ಲರಿಗು ಹಣ ಪಾವತಿಯಾಗಿದೆ. ಆದರೆ, 80-90 ರೈತರಿಗೆ ಮಾತ್ರ ಹಣ ಬಿಡುಗಡೆಯಾಗಿಲ್ಲ. ಕೆಲವರ ಆಧಾರ್ ಖಾತೆಗಳು ಬ್ಯಾಂಕ್ ಜೊತೆ ಲಿಂಕ್ ಆಗದ ಕಾರಣ ಸಮಸ್ಯೆ ಆಗಿದೆ. ಅಂತಹವರಿಗೆ ನೇರ ಹಾಗು ಡಿವಿಡಿ ವ್ಯವಸ್ಥೆ ಮಾಡುತ್ತಿದ್ದೇವೆ’ ಎಂಬುದು ಅಧಿಕಾರಿಗಳ ಸಬೂಬು.</p>.<p>ಆದರೆ ರೈತರು ಇದನ್ನು ಒಪ್ಪುವುದಿಲ್ಲ. ನಮ್ಮ ಖಾತೆಗಳು ಈಗಾಗಲೇ ಆಧಾರ್ ಜೊತೆ ಲಿಂಕ್ ಆಗಿವೆ. ಕೊರೊನಾ ಕಾರಣಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದೆ ಎನ್ನುವುದು ರೈತರ ಆರೋಪ.</p>.<p>***</p>.<p><strong>ಅಧಿಕಾರಿಗಳ ಯಡವಟ್ಟು</strong></p>.<p>ಚನ್ನಪಟ್ಟಣದ ನಿವಾಸಿ ಜಗದೀಶ್ ಕಳೆದ ಮಾರ್ಚ್ 10ರಂದು ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಿದ್ದರು. 6 ತಿಂಗಳು ಅವರ ಖಾತೆಗೆ ಹಣ ಸೇರಿಲ್ಲ. ಕೃಷಿ ಇಲಾಖೆಯಲ್ಲಿ ವಿಚಾರಿಸಿದಾಗ ಅವರಿಗೆ ಬರಬೇಕಾದ 96,807 ಪಕ್ಕದ ಮನೆ ನಿವಾಸಿಗೆ ಸಂದಾಯ ಆಗಿರುವುದು ಬಂದಿತು. ಪಕ್ಕದ ಮನೆಯ ನಿವಾಸಿಯ ಹೆಸರು ಸಹ ಜಗದೀಶ್ ಆಗಿರುವುದರಿಂದ ಈ ಎಡವಟ್ಟು ಆಗಿದೆ ಎನ್ನುವುದು ಕೃಷಿ ಇಲಾಖೆ ಅಧಿಕಾರಿಗಳ ವಾದ. ಬಳಿಕ ಕೃಷಿ ಇಲಾಖೆ ಅಧಿಕಾರಿಗಳು ಪಕ್ಕದ ಮನೆ ನಿವಾಸಿಯ ಮನವೊಲಿಸಿ ಅಷ್ಟು ಹಣವನ್ನು ಇಲಾಖೆಗೆ ವಾಪಸ್ಸು ಪಡೆದಿದ್ದಾರೆ. ಆದರೆ, ರಾಗಿ ಮಾರಾಟ ಮಾರಿರುವ ರೈತನಿಗೆ ಹಣ ಬಿಡುಗಡೆಯಾಗಿಲ್ಲ.</p>.<p>***<br /><strong>ಖಾತೆ ಸಮಸ್ಯೆಯಿಂದಾಗಿ ಕೆಲವು ರೈತರಿಗೆ ಹಣ ಬಂದಿಲ್ಲ. ಈ ಬಗ್ಗೆ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದು, ಶೀಘ್ರ ಬಿಡುಗಡೆ ಆಗಲಿದೆ<br />-ಜಯಪ್ಪ ಡಿಎಂ, ಕೆಎಫ್ಸಿಎಸ್ಸಿ</strong></p>.<p>***</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ</strong>: ಕಳೆದ ಆರು ತಿಂಗಳ ಹಿಂದೆ ಸರ್ಕಾರಕ್ಕೆ ಬೆಂಬಲ ಬೆಲೆ ಅಡಿ ರಾಗಿ ಮಾರಾಟ ಮಾಡಿದ್ದ ಜಿಲ್ಲೆಯ ರೈತರ ಪೈಕಿ ಇನ್ನೂ ಕೆಲವರಿಗೆ ಹಣ ತಲುಪಿಲ್ಲ. ಇದರಿಂದಾಗಿ ಕೃಷಿಕರು ಕಂಗಾಲಾಗಿದ್ಧಾರೆ.</p>.<p>ಒಂದು ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಬೆಂಬಲ ಬೆಲೆ ಅಡಿ ರಾಗಿ ನೀಡಿದ್ದ ರೈತರ ಪೈಕಿ ಶೇ ೨೦ರಷ್ಟು ಮಂದಿಗೆ ಇನ್ನೂ ಸರ್ಕಾರ ಹಣ ನೀಡಿಲ್ಲ. ಬಿಡುಗಡೆಯಾದ ಹಣವೂ ಕೆಲವೆಡೆ ಅರ್ಹ ಫಲಾನುಭವಿಗೆ ತಲುಪದೇ ಸಮಸ್ಯೆಯಾಗಿದೆ. ಜಿಲ್ಲೆಯಲ್ಲಿ ಈ ವರ್ಷ ಖರೀದಿ ಕೇಂದ್ರಗಳ ಮೂಲಕ 1.69 ಲಕ್ಷ ಕ್ವಿಂಟಲ್ ರಾಗಿ ಖರೀದಿ ಮಾಡಲಾಗಿತ್ತು. 4 ತಾಲೂಕುಗಳಲ್ಲಿ ಖರೀದಿ ಕೇಂದ್ರ ತೆರೆದಿದ್ದ ಸರ್ಕಾರ ಫೆಬ್ರವರಿ, ಮಾರ್ಚ್ ನಲ್ಲಿ ರಾಗಿ ಖರೀದಿ ಮಾಡಿತ್ತು. ಪ್ರತಿ ಕ್ವಿಂಟಲ್ಗೆ ₨3,150 ಬೆಲೆ ನಿಗದಿಯಾಗಿತ್ತು.</p>.<p>"ಜಿಲ್ಲೆಯಲ್ಲಿ ಎಲ್ಲರಿಗು ಹಣ ಪಾವತಿಯಾಗಿದೆ. ಆದರೆ, 80-90 ರೈತರಿಗೆ ಮಾತ್ರ ಹಣ ಬಿಡುಗಡೆಯಾಗಿಲ್ಲ. ಕೆಲವರ ಆಧಾರ್ ಖಾತೆಗಳು ಬ್ಯಾಂಕ್ ಜೊತೆ ಲಿಂಕ್ ಆಗದ ಕಾರಣ ಸಮಸ್ಯೆ ಆಗಿದೆ. ಅಂತಹವರಿಗೆ ನೇರ ಹಾಗು ಡಿವಿಡಿ ವ್ಯವಸ್ಥೆ ಮಾಡುತ್ತಿದ್ದೇವೆ’ ಎಂಬುದು ಅಧಿಕಾರಿಗಳ ಸಬೂಬು.</p>.<p>ಆದರೆ ರೈತರು ಇದನ್ನು ಒಪ್ಪುವುದಿಲ್ಲ. ನಮ್ಮ ಖಾತೆಗಳು ಈಗಾಗಲೇ ಆಧಾರ್ ಜೊತೆ ಲಿಂಕ್ ಆಗಿವೆ. ಕೊರೊನಾ ಕಾರಣಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದೆ ಎನ್ನುವುದು ರೈತರ ಆರೋಪ.</p>.<p>***</p>.<p><strong>ಅಧಿಕಾರಿಗಳ ಯಡವಟ್ಟು</strong></p>.<p>ಚನ್ನಪಟ್ಟಣದ ನಿವಾಸಿ ಜಗದೀಶ್ ಕಳೆದ ಮಾರ್ಚ್ 10ರಂದು ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಿದ್ದರು. 6 ತಿಂಗಳು ಅವರ ಖಾತೆಗೆ ಹಣ ಸೇರಿಲ್ಲ. ಕೃಷಿ ಇಲಾಖೆಯಲ್ಲಿ ವಿಚಾರಿಸಿದಾಗ ಅವರಿಗೆ ಬರಬೇಕಾದ 96,807 ಪಕ್ಕದ ಮನೆ ನಿವಾಸಿಗೆ ಸಂದಾಯ ಆಗಿರುವುದು ಬಂದಿತು. ಪಕ್ಕದ ಮನೆಯ ನಿವಾಸಿಯ ಹೆಸರು ಸಹ ಜಗದೀಶ್ ಆಗಿರುವುದರಿಂದ ಈ ಎಡವಟ್ಟು ಆಗಿದೆ ಎನ್ನುವುದು ಕೃಷಿ ಇಲಾಖೆ ಅಧಿಕಾರಿಗಳ ವಾದ. ಬಳಿಕ ಕೃಷಿ ಇಲಾಖೆ ಅಧಿಕಾರಿಗಳು ಪಕ್ಕದ ಮನೆ ನಿವಾಸಿಯ ಮನವೊಲಿಸಿ ಅಷ್ಟು ಹಣವನ್ನು ಇಲಾಖೆಗೆ ವಾಪಸ್ಸು ಪಡೆದಿದ್ದಾರೆ. ಆದರೆ, ರಾಗಿ ಮಾರಾಟ ಮಾರಿರುವ ರೈತನಿಗೆ ಹಣ ಬಿಡುಗಡೆಯಾಗಿಲ್ಲ.</p>.<p>***<br /><strong>ಖಾತೆ ಸಮಸ್ಯೆಯಿಂದಾಗಿ ಕೆಲವು ರೈತರಿಗೆ ಹಣ ಬಂದಿಲ್ಲ. ಈ ಬಗ್ಗೆ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದು, ಶೀಘ್ರ ಬಿಡುಗಡೆ ಆಗಲಿದೆ<br />-ಜಯಪ್ಪ ಡಿಎಂ, ಕೆಎಫ್ಸಿಎಸ್ಸಿ</strong></p>.<p>***</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>