<p><strong>ಕನಕಪುರ</strong>: ತಾಲ್ಲೂಕಿನ ಸಾತನೂರಿನ ರೂರಲ್ ಎಜುಕೇಶನ್ ಸೊಸೈಟಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಗುರುವಂದನೆ ಮತ್ತು ರಜತಾ ಮಹೋತ್ಸವ ಭಾನುವಾರ ನಡೆಯಿತು.</p>.<p>ಆರ್ಎಚ್ಎಸ್ ಶಾಲೆಯ 1999-2000ನೇ ಸಾಲಿನ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳಿಗೆ ಗುರುವಂದನೆ ಸಲ್ಲಿಸಿ ಶಾಲೆಯ ರಜತ ಮಹೋತ್ಸವ ಆಚರಿಸಿದರು.</p>.<p>ಶಿಕ್ಷಕರನ್ನು ಬೆಳ್ಳಿ ರಥದಲ್ಲಿ ಸಾತನೂರು ಸಂತೆಮಾಳದ ಸರ್ಕಲ್ನಿಂದ ವೇದಿಕೆ ಕಾರ್ಯಕ್ರಮದವರೆಗೂ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಕರೆತಂದರು. ನಂತರ ಗುರುಗಳನ್ನು ಸನ್ಮಾನಿಸಿದರು.</p>.<p>ಆರ್ಇಎಸ್ ಅಧ್ಯಕ್ಷ ಎಚ್.ಕೆ.ಶ್ರೀಕಂಠ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಶಿಕ್ಷಣ ದೊರಕಿಸಬೇಕೆಂಬ ಉದ್ದೇಶದಿಂದ ಆರ್ಇಎಸ್ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ನಂತರ ಶಾಲೆಯಿಂದ ಪಿಯು, ಪದವಿವರೆಗೂ ವಿಸ್ತರಿಸಲಾಗಿದೆ ಎಂದರು.</p>.<p>ಆರ್ಇಎಸ್ ಸಂಸ್ಥೆಯಲ್ಲಿ 1999–2000ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಪ್ರಮುಖ ಹುದ್ದೆಗಳಲ್ಲಿರುವುದು ಸಂತಸದ ವಿಷಯ ಎಂದರು.</p>.<p>ಕರಿಯಪ್ಪ ಗ್ರಾಮಾಂತರ ಪ್ರೌಢಶಾಲೆಯಲ್ಲಿ 25 ವರ್ಷಗಳ ಹಿಂದೆ ವ್ಯಾಸಂಗ ಮಾಡುತ್ತಿದ್ದ 280 ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಮೂಲಕ ಎಲ್ಲರೂ ಒಂದೆಡೆ ಸೇರಿ ಹಿಂದಿನ ನೆನಪುಗಳನ್ನು ಮರುಕಳಿಸಿದರು.</p>.<p>ಸಾತನೂರು ನಾಗರಾಜು, ಸಾತನೂರು ಚಂದ್ರು, ಕಾಡಳ್ಳಿ ರಮೇಶ್, ಕೆ.ಪಾಳ್ಯ ಸುರೇಶ್ ಚಾರ್, ದೇವಿರಮ್ಮನ ದೊಡ್ಡಿ ಯೋಗೇಶ್, ಸಾತನೂರು ಗಣೇಶ್, ಕೆಮ್ಮಾಳೆ ರಘು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ</strong>: ತಾಲ್ಲೂಕಿನ ಸಾತನೂರಿನ ರೂರಲ್ ಎಜುಕೇಶನ್ ಸೊಸೈಟಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಗುರುವಂದನೆ ಮತ್ತು ರಜತಾ ಮಹೋತ್ಸವ ಭಾನುವಾರ ನಡೆಯಿತು.</p>.<p>ಆರ್ಎಚ್ಎಸ್ ಶಾಲೆಯ 1999-2000ನೇ ಸಾಲಿನ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳಿಗೆ ಗುರುವಂದನೆ ಸಲ್ಲಿಸಿ ಶಾಲೆಯ ರಜತ ಮಹೋತ್ಸವ ಆಚರಿಸಿದರು.</p>.<p>ಶಿಕ್ಷಕರನ್ನು ಬೆಳ್ಳಿ ರಥದಲ್ಲಿ ಸಾತನೂರು ಸಂತೆಮಾಳದ ಸರ್ಕಲ್ನಿಂದ ವೇದಿಕೆ ಕಾರ್ಯಕ್ರಮದವರೆಗೂ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಕರೆತಂದರು. ನಂತರ ಗುರುಗಳನ್ನು ಸನ್ಮಾನಿಸಿದರು.</p>.<p>ಆರ್ಇಎಸ್ ಅಧ್ಯಕ್ಷ ಎಚ್.ಕೆ.ಶ್ರೀಕಂಠ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಶಿಕ್ಷಣ ದೊರಕಿಸಬೇಕೆಂಬ ಉದ್ದೇಶದಿಂದ ಆರ್ಇಎಸ್ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ನಂತರ ಶಾಲೆಯಿಂದ ಪಿಯು, ಪದವಿವರೆಗೂ ವಿಸ್ತರಿಸಲಾಗಿದೆ ಎಂದರು.</p>.<p>ಆರ್ಇಎಸ್ ಸಂಸ್ಥೆಯಲ್ಲಿ 1999–2000ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಪ್ರಮುಖ ಹುದ್ದೆಗಳಲ್ಲಿರುವುದು ಸಂತಸದ ವಿಷಯ ಎಂದರು.</p>.<p>ಕರಿಯಪ್ಪ ಗ್ರಾಮಾಂತರ ಪ್ರೌಢಶಾಲೆಯಲ್ಲಿ 25 ವರ್ಷಗಳ ಹಿಂದೆ ವ್ಯಾಸಂಗ ಮಾಡುತ್ತಿದ್ದ 280 ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಮೂಲಕ ಎಲ್ಲರೂ ಒಂದೆಡೆ ಸೇರಿ ಹಿಂದಿನ ನೆನಪುಗಳನ್ನು ಮರುಕಳಿಸಿದರು.</p>.<p>ಸಾತನೂರು ನಾಗರಾಜು, ಸಾತನೂರು ಚಂದ್ರು, ಕಾಡಳ್ಳಿ ರಮೇಶ್, ಕೆ.ಪಾಳ್ಯ ಸುರೇಶ್ ಚಾರ್, ದೇವಿರಮ್ಮನ ದೊಡ್ಡಿ ಯೋಗೇಶ್, ಸಾತನೂರು ಗಣೇಶ್, ಕೆಮ್ಮಾಳೆ ರಘು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>