ತಾಲ್ಲೂಕಿನ ನೇರಳೆಕೆರೆ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿ ಭಾನುವಾರ ಮುಹೂರ್ತದ ನಂತರ ಮಾತನಾಡಿದ ರೇವಣ್ಣ, ‘ಡಾ.ರಾಜ್ಕುಮಾರ್ ವಂಶದ ಕುಡಿ ಧನ್ಯಾ ರಾಮ್ ಕುಮಾರ್ ಅವರೊಂದಿಗೆ ಅನೂಪ್ ನಟಿಸುತ್ತಿದ್ದಾರೆ. ಪುನೀತ್ ನಾಗರಾಜು, ರಾಮಣ್ಣ ಸಹ ನಿರ್ಮಾಪಕರಾಗಿದ್ದಾರೆ. ಮಾಗಡಿ ಸೀಮೆಯ ಸುಂದರ ಗುಡ್ಡಗಾಡು ಪ್ರದೇಶದಲ್ಲಿ ಚಿತ್ರೀಕರಣ ನಡೆಯಲಿದೆ. ತಾಲ್ಲೂಕಿನ ಚಾರಿತ್ರಿಕ ಸ್ಮಾರಕ, ಜಲಾಶಯ, ನಿಸರ್ಗ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ’ ಎಂದು ತಿಳಿಸಿದರು. ಎಂ.ಕೆ.ಧನಂಜಯ, ಕೆ.ಎಚ್.ಶಿವರಾಜ್, ಗಜೇಂದ್ರ, ದೇವರಾಜ್ ಶ್ರೇಯಸ್, ಕಾರ್ ಕೇರ್ ಸೆಂಟರ್ ಮಾಲೀಕ ಸಾಯಿರಾಮ್, ಮಂಜುಳಾ ನಾಗರಾಜ್, ಶೋಭಾ, ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್, ಜಯಣ್ಣ, ಹನುಮಂತರಾಜು,ಕಾರ್ತಿಕ್, ಕುಮಾರ್,ಶಂಕರ್, ಹರೀಶ್, ಮುನಿರಾಜು.ಜಿ, ಗೌಡಯ್ಯ, ಗಂಗಯ್ಯ, ನಾಗೇಶ್ ಇದ್ದರು.