ಕ್ವಾರಂಟೈನ್ನಲ್ಲಿ ಇರುವವರು ನಿಯಮ ಮೀರಿ ಹೊರಗೆ ಓಡಾಡುವ ಸಂಗತಿ ಈಚೆಗೆ ಹೆಚ್ಚು ವರದಿ ಆಗುತಿತ್ತು. ಚನ್ನಪಟ್ಟಣದಲ್ಲೂ ಇದೇ ರೀತಿ ಯುವಕನೊಬ್ಬ ಬೀದಿಯಲ್ಲಿ ಓಡಾಡಿದ್ದು, ಆತನ ವಿರುದ್ಧ ಪೊಲೀಸರು ಪ್ರಕಟಣ ದಾಖಲಿಸಿದ್ದರು. ಇಂತಹ ಚಟುವಟಿಕೆಗಳನ್ನು ತಪ್ಪಿಸುವ ಸಲುವಾಗಿ ಸರ್ಕಾರ ಈ ನಿಯಮವನ್ನು ಕಡ್ಡಾಯ ಮಾಡಿದೆ. ಇದರಿಂದಾಗಿ ಅಂತಹ ವ್ಯಕ್ತಿಗಳ ಓಡಾಟದ ಮೇಲೆ ನಿಗಾ ವಹಿಸುವುದು ಸಾಧ್ಯ ಆಗಲಿದೆ. ಒಂದು ವೇಳೆ ಸೆಲ್ಫಿ ತೆಗೆದು ಅಪ್ಲೋಡ್ ಮಾಡದೇ ಹೋದಲ್ಲಿ ಅದನ್ನು ಲೋಪ ಎಂದು ಪರಿಗಣಿಸಿ ಅಂತಹವರನ್ನು ಗೃಹ ನಿರ್ಬಂಧನದಿಂದ ತೆಗೆದು ಸಮೂಹ ನಿರ್ಬಂಧನಕ್ಕೆ ಒಳಪಡಿಸುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ.