ಎತ್ತರಿಸಿದ್ದು ಏಕೆ?: ವಿವೇಕಾನಂದ ನಗರದಲ್ಲಿ 300ಕ್ಕೂ ಹೆಚ್ಚು ಮನೆಗಳಿವೆ. ಹೊಸತಾಗಿ ನಿರ್ಮಿಸಿದ ರಸ್ತೆ ಕಾಂಪೌಂಡಿಗೆ ಅಂಟಿಕೊಂಡಿದೆ. ಒಳಚರಂಡಿ ವ್ಯವಸ್ಥೆ ಸೂಕ್ತವಾಗಿಲ್ಲ. ಈ ಮನೆ ಹಳ್ಳದಲ್ಲಿದ್ದ ಕಾರಣ ಚರಂಡಿ ನೀರು ಸೇರಿ ಕೊಳಕಾಗಿತ್ತು. ಮನೆಯ ಮಾಲೀಕರಾದ ರಾಂಪುರ ವೆಂಕಟೇಶ್ 16 ವರ್ಷಗಳ ಹಿಂದೆ ಈ ಮನೆ ನಿರ್ಮಿಸಿದ್ದು, ಇಲ್ಲಿನ ಅನೈರ್ಮಲ್ಯದಿಂದ ಮನೆಯ ಆಸೆಯನ್ನೇ ಬಿಟ್ಟಿದ್ದರು. ಬಾಗಿಲಿಗೆ ಬೀಗ ಜಡಿದು ಇದನ್ನು ಮಾರುವ ನಿರ್ಧಾರಕ್ಕೂ ಬಂದಿದ್ದರು. ಆದರೆ ಇದೀಗ ಈ ಹಳ್ಳದಲ್ಲಿನ ಮನೆ ತಳಪಾಯದಿಂದ ಮೂರು ಅಡಿಗಳಷ್ಟು ಮೇಲಕ್ಕೆ ಏಳುತ್ತಿದ್ದು, ಸಮಸ್ಯೆ ಬಗೆಹರಿಯತೊಡಗಿದೆ.