<p><strong>ಬಿಡದಿ (ರಾಮನಗರ):</strong> ಹೋಬಳಿಯ ನಂಜೇಗೌಡನದೊಡ್ಡಿ, ಸುತ್ತಲಿನ ಅರಣ್ಯ ಪ್ರದೇಶದಲ್ಲಿ 2 ಜಿಂಕೆ ಹಾಗೂ 2 ಕಾಡುಹಂದಿ ಬೇಟೆಯಾಡಿ, ಬೆಂಗಳೂರಿಗೆ ಸಾಗಿಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆಯ ಬೆಂಗಳೂರಿನ ಅಪರಾಧ ನಿಯಂತ್ರಣ ಕೋಶ ಮತ್ತು ಜಾಗೃತ ದಳ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ, ಬಿಡದಿ ಸಮೀಪ ಶುಕ್ರವಾರ ನಸುಕಿನಲ್ಲಿ ಬಂಧಿಸಿದೆ.</p>.<p>ಬೆಂಗಳೂರಿನ ತೋಟದಗುಡ್ಡನಹಳ್ಳಿ ಶ್ರೀನಿವಾಸ್ (47), ನೆಲಮಂಗಲ ತಾಲ್ಲೂಕು ಪಾದನಕುಂಟೆ ಗ್ರಾಮದ ಹನುಮಂತರಾಜು (44), ರಾಮನಗರ ತಾಲ್ಲೂಕು ನಂಜೇಗೌಡನ<br>ದೊಡ್ಡಿ ಗ್ರಾಮದ ಮುನಿರಾಜು (38) ಬಂಧಿತರು.</p>.<p>ಆರೋಪಿಗಳಿಂದ ಥಾರ್ ವಾಹನ, ಪ್ರಾಣಿಗಳ ಕಳೇಬರ, ಸಿಂಗಲ್ ಬ್ಯಾರೆಲ್ ರೈಫಲ್, ಏರ್ಗನ್, ಬುಲೆಟ್ಗಳು, 3 ಮೊಬೈಲ್, ಬ್ಯಾಟರಿಗಳು, ಚಾಕು ವಶಪಡಿಸಿಕೊಳ್ಳಲಾಗಿದೆ.</p>.<p>ಶ್ರೀನಿವಾಸ್ ಮತ್ತು ಹನುಮಂತರಾಜು, ಸ್ಥಳೀಯನಾದ ಮುನಿರಾಜು ಪರಿಚಯ ಮಾಡಿಕೊಂಡಿದ್ದರು. ನಂಜೇಗೌಡನದೊಡ್ಡಿ ಹಾಗೂ ಸುತ್ತಲಿನ ಭಾಗದಲ್ಲಿ ಕಾಡುಹಂದಿ ಮತ್ತು ಜಿಂಕೆ ಓಡಾಡುವುದರ ಮಾಹಿತಿ ಪಡೆದಿದ್ದ ಇಬ್ಬರೂ, ಮುನಿರಾಜು ಸಹಕಾರದೊಂದಿಗೆ ಬೇಟೆಯಾಡುತ್ತಿದ್ದರು ಎಂದು ಇಲಾಖೆಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಪ್ರಾಣಿಗಳ ಮಾಂಸ ಭಕ್ಷಣೆ ಜೊತೆಗೆ, ಇತರರಿಗೂ ಮಾರುತ್ತಿದ್ದರು. ಆರೋಪಿಗಳು ಗುರುವಾರ (ಜ. 9) ರಾತ್ರಿ ನಂಜೇಗೌಡನದೊಡ್ಡಿಗೆ ಬೇಟೆಗೆ ಬಂದಿರುವ ಖಚಿತ ಆಧರಿಸಿ ಕಾರ್ಯಾಚರಣೆ ಬಿಡದಿ ಸಮೀಪದ ಚಿಕ್ಕಕುಂಟನಹಳ್ಳಿ ಬಳಿ ಬಂಧಿಸಲಾಯಿತು ಎಂದು ತಿಳಿಸಿದರು.</p>.<p>ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಂಚಾರಿ ಜಾಗೃತ ದಳದ ಡಿಸಿಎಫ್ ಸುನೀತಾ ಬಾಯಿ, ಅಪರಾಧ ನಿಯಂತ್ರಣ ಕೋಶದ ಆರ್ಎಫ್ಒ ರಮೇಶ್, ನೇತೃತ್ವದಲ್ಲಿ ಡಿಆರ್ಎಫ್ಒಗಳಾದ ಅಮೃತ ದೇಸಾಯಿ, ಸಿದ್ದರಾಜು, ರಾಜು, ಫಾರೆಸ್ಟ್ ಗಾರ್ಡ್ ಅಶ್ವಿನ್, ಚಾಲಕ ಸುರೇಶ್ ಅವರಿದ್ದ ತಂಡ ಕಾರ್ಯಾಚರಣೆ ನಡೆಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಡದಿ (ರಾಮನಗರ):</strong> ಹೋಬಳಿಯ ನಂಜೇಗೌಡನದೊಡ್ಡಿ, ಸುತ್ತಲಿನ ಅರಣ್ಯ ಪ್ರದೇಶದಲ್ಲಿ 2 ಜಿಂಕೆ ಹಾಗೂ 2 ಕಾಡುಹಂದಿ ಬೇಟೆಯಾಡಿ, ಬೆಂಗಳೂರಿಗೆ ಸಾಗಿಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆಯ ಬೆಂಗಳೂರಿನ ಅಪರಾಧ ನಿಯಂತ್ರಣ ಕೋಶ ಮತ್ತು ಜಾಗೃತ ದಳ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ, ಬಿಡದಿ ಸಮೀಪ ಶುಕ್ರವಾರ ನಸುಕಿನಲ್ಲಿ ಬಂಧಿಸಿದೆ.</p>.<p>ಬೆಂಗಳೂರಿನ ತೋಟದಗುಡ್ಡನಹಳ್ಳಿ ಶ್ರೀನಿವಾಸ್ (47), ನೆಲಮಂಗಲ ತಾಲ್ಲೂಕು ಪಾದನಕುಂಟೆ ಗ್ರಾಮದ ಹನುಮಂತರಾಜು (44), ರಾಮನಗರ ತಾಲ್ಲೂಕು ನಂಜೇಗೌಡನ<br>ದೊಡ್ಡಿ ಗ್ರಾಮದ ಮುನಿರಾಜು (38) ಬಂಧಿತರು.</p>.<p>ಆರೋಪಿಗಳಿಂದ ಥಾರ್ ವಾಹನ, ಪ್ರಾಣಿಗಳ ಕಳೇಬರ, ಸಿಂಗಲ್ ಬ್ಯಾರೆಲ್ ರೈಫಲ್, ಏರ್ಗನ್, ಬುಲೆಟ್ಗಳು, 3 ಮೊಬೈಲ್, ಬ್ಯಾಟರಿಗಳು, ಚಾಕು ವಶಪಡಿಸಿಕೊಳ್ಳಲಾಗಿದೆ.</p>.<p>ಶ್ರೀನಿವಾಸ್ ಮತ್ತು ಹನುಮಂತರಾಜು, ಸ್ಥಳೀಯನಾದ ಮುನಿರಾಜು ಪರಿಚಯ ಮಾಡಿಕೊಂಡಿದ್ದರು. ನಂಜೇಗೌಡನದೊಡ್ಡಿ ಹಾಗೂ ಸುತ್ತಲಿನ ಭಾಗದಲ್ಲಿ ಕಾಡುಹಂದಿ ಮತ್ತು ಜಿಂಕೆ ಓಡಾಡುವುದರ ಮಾಹಿತಿ ಪಡೆದಿದ್ದ ಇಬ್ಬರೂ, ಮುನಿರಾಜು ಸಹಕಾರದೊಂದಿಗೆ ಬೇಟೆಯಾಡುತ್ತಿದ್ದರು ಎಂದು ಇಲಾಖೆಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಪ್ರಾಣಿಗಳ ಮಾಂಸ ಭಕ್ಷಣೆ ಜೊತೆಗೆ, ಇತರರಿಗೂ ಮಾರುತ್ತಿದ್ದರು. ಆರೋಪಿಗಳು ಗುರುವಾರ (ಜ. 9) ರಾತ್ರಿ ನಂಜೇಗೌಡನದೊಡ್ಡಿಗೆ ಬೇಟೆಗೆ ಬಂದಿರುವ ಖಚಿತ ಆಧರಿಸಿ ಕಾರ್ಯಾಚರಣೆ ಬಿಡದಿ ಸಮೀಪದ ಚಿಕ್ಕಕುಂಟನಹಳ್ಳಿ ಬಳಿ ಬಂಧಿಸಲಾಯಿತು ಎಂದು ತಿಳಿಸಿದರು.</p>.<p>ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಂಚಾರಿ ಜಾಗೃತ ದಳದ ಡಿಸಿಎಫ್ ಸುನೀತಾ ಬಾಯಿ, ಅಪರಾಧ ನಿಯಂತ್ರಣ ಕೋಶದ ಆರ್ಎಫ್ಒ ರಮೇಶ್, ನೇತೃತ್ವದಲ್ಲಿ ಡಿಆರ್ಎಫ್ಒಗಳಾದ ಅಮೃತ ದೇಸಾಯಿ, ಸಿದ್ದರಾಜು, ರಾಜು, ಫಾರೆಸ್ಟ್ ಗಾರ್ಡ್ ಅಶ್ವಿನ್, ಚಾಲಕ ಸುರೇಶ್ ಅವರಿದ್ದ ತಂಡ ಕಾರ್ಯಾಚರಣೆ ನಡೆಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>