ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್, ‘ಜಿಲ್ಲೆಯಲ್ಲಿ ಬೆಟ್ಟಗುಡ್ಡಗಳು, ಹಸಿರು ಹೊದ್ದ ಅರಣ್ಯ, ಜಲಾಶಯಗಳು, ದೇವಾಲಯಗಳು, ನಾನಾ ಬಗೆಯ ತಾಣಗಳು ಇವೆ. ಇವೆಲ್ಲವನ್ನೂ ಬಳಸಿಕೊಂಡು ಇಲ್ಲಿ ಮನೋರಂಜನಾ ಚಟುವಟಿಕೆ, ಸಾಹಸ ಕ್ರೀಡೆ, ಸೈಕ್ಲಿಂಗ್, ಟ್ರಕ್ಕಿಂಗ್, ಮೌಂಟೇನ್ ಕ್ಲೈಬಿಂಗ್, ರೇಷ್ಮೆ ಪ್ರವಾಸ, ವೈನ್ ಪ್ರವಾಸ ಮೊದಲಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅವಕಾಶ ಇದೆ’ ಎಂದರು.