<p><strong>ಕನಕಪುರ:</strong> ಇಲ್ಲಿನ ಬೆಂಗಳೂರು ರಸ್ತೆಯ ರೈಸ್ಮಿಲ್ ಬಳಿ ಇರುವ ಟಿಎಪಿಸಿಎಂಎಸ್ನ ನೂತನ ಅಧ್ಯಕ್ಷ ಆಗಿ ಕಾಂಗ್ರೆಸ್ ಬೆಂಬಲಿತ ಚಿಕ್ಕೇನಹಳ್ಳಿ ಡಿ. ವೆಂಕಟೇಶಯ್ಯ, ಉಪಾಧ್ಯಕ್ಷ ಆಗಿ ತುಂಗಣಿ ಕೈಲಾಸ್ ಮೂರ್ತಿ ಅವಿರೋಧವಾಗಿ ಆಯ್ಕೆಯಾದರು.</p>.<p>ಟಿಎಪಿಸಿಎಂಎಸ್ಗೆ ಒಂದು ವಾರದ ಹಿಂದೆ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಯಾಗಿತ್ತು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಮಂಗಳವಾರ ಚುನಾವಣೆ ನಡೆಯಿತು.</p>.<p>ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಡಿ. ವೆಂಕಟೇಶಯ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಕೈಲಾಸಮೂರ್ತಿ ಅವರು ಮಾತ್ರವೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ, ಈ ಇಬ್ಬರು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಸಹಕಾರ ಇಲಾಖೆಯ ಬಿ.ಕೆ. ಮಂಜುನಾಥ್ ಘೋಷಿಸಿದರು. ಎಪಿಸಿಎಂಎಸ್ ಕಾರ್ಯದರ್ಶಿ ಆಶಾ ಸಹಾಯಕ ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.</p>.<p>ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಪಟಾಕಿ ಸಿಡಿಸಿ ಸಿಹಿ ವಿತರಿಸಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು.</p>.<p>ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್, ಪುರುಷೋತ್ತಮ್, ಹರೀಶ್, ಸಾತನೂರು ನಾಗರಾಜು, ಬೇಕುಪ್ಪೆ ಮುತ್ತುರಾಜು, ರಾಯಸಂದ್ರ ರವಿ, ಶಿವಣ್ಣ, ದುರ್ಗೆಗೌಡ ಸೊಂಬಣ್ಣ, ನಿಂಗಣ್ಣ, ರಂಗಸ್ವಾಮಿ, ಶಾಂತರಾಜು, ಚಂದ್ರು, ಮುನುಚ್ಚೇಗೌಡ, ಹರೀಶ್, ನಾಗರಾಜು, ಟಿ ಎ ಪಿ ಸಿ ಎಂ ಎಸ್ ನ ಎಲ್ಲಾ ನಿರ್ದೇಶಕರು, ನೌಕರರು ಸಿಬ್ಬಂದಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.</p>
<p><strong>ಕನಕಪುರ:</strong> ಇಲ್ಲಿನ ಬೆಂಗಳೂರು ರಸ್ತೆಯ ರೈಸ್ಮಿಲ್ ಬಳಿ ಇರುವ ಟಿಎಪಿಸಿಎಂಎಸ್ನ ನೂತನ ಅಧ್ಯಕ್ಷ ಆಗಿ ಕಾಂಗ್ರೆಸ್ ಬೆಂಬಲಿತ ಚಿಕ್ಕೇನಹಳ್ಳಿ ಡಿ. ವೆಂಕಟೇಶಯ್ಯ, ಉಪಾಧ್ಯಕ್ಷ ಆಗಿ ತುಂಗಣಿ ಕೈಲಾಸ್ ಮೂರ್ತಿ ಅವಿರೋಧವಾಗಿ ಆಯ್ಕೆಯಾದರು.</p>.<p>ಟಿಎಪಿಸಿಎಂಎಸ್ಗೆ ಒಂದು ವಾರದ ಹಿಂದೆ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಯಾಗಿತ್ತು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಮಂಗಳವಾರ ಚುನಾವಣೆ ನಡೆಯಿತು.</p>.<p>ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಡಿ. ವೆಂಕಟೇಶಯ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಕೈಲಾಸಮೂರ್ತಿ ಅವರು ಮಾತ್ರವೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ, ಈ ಇಬ್ಬರು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಸಹಕಾರ ಇಲಾಖೆಯ ಬಿ.ಕೆ. ಮಂಜುನಾಥ್ ಘೋಷಿಸಿದರು. ಎಪಿಸಿಎಂಎಸ್ ಕಾರ್ಯದರ್ಶಿ ಆಶಾ ಸಹಾಯಕ ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.</p>.<p>ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಪಟಾಕಿ ಸಿಡಿಸಿ ಸಿಹಿ ವಿತರಿಸಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು.</p>.<p>ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್, ಪುರುಷೋತ್ತಮ್, ಹರೀಶ್, ಸಾತನೂರು ನಾಗರಾಜು, ಬೇಕುಪ್ಪೆ ಮುತ್ತುರಾಜು, ರಾಯಸಂದ್ರ ರವಿ, ಶಿವಣ್ಣ, ದುರ್ಗೆಗೌಡ ಸೊಂಬಣ್ಣ, ನಿಂಗಣ್ಣ, ರಂಗಸ್ವಾಮಿ, ಶಾಂತರಾಜು, ಚಂದ್ರು, ಮುನುಚ್ಚೇಗೌಡ, ಹರೀಶ್, ನಾಗರಾಜು, ಟಿ ಎ ಪಿ ಸಿ ಎಂ ಎಸ್ ನ ಎಲ್ಲಾ ನಿರ್ದೇಶಕರು, ನೌಕರರು ಸಿಬ್ಬಂದಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.</p>