ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ರಾಜಕಾರಣ ಆಪರೇಷನ್ ಮಾಡಿದ ಹಾಗಲ್ಲ: ಮಂಜುನಾಥ್‌ ಸ್ಪರ್ಧೆ ಬಗ್ಗೆ ಬಾಲಕೃಷ್ಣ ವ್ಯಂಗ್ಯ

Published : 1 ಮಾರ್ಚ್ 2024, 4:39 IST
Last Updated : 1 ಮಾರ್ಚ್ 2024, 4:39 IST
ಫಾಲೋ ಮಾಡಿ
Comments
‘ಬಿಜೆಪಿಯನ್ನು ಬೀದಿಗೆ ತಂದ ಎಚ್‌ಡಿಕೆ’
‘ಎಚ್‌.ಡಿ. ಕುಮಾರಸ್ವಾಮಿ ಅವರು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಚುನಾವಣೆಯಲ್ಲಿ ಸಂಖ್ಯೆ ಆಧಾರದ ಮೇಲೆ ಕಾಂಗ್ರೆಸ್‌ ಮೂರು ಸ್ಥಾನ ಹಾಗೂ ಬಿಜೆಪಿ ಒಂದು ಸ್ಥಾನ ಗೆಲ್ಲುವುದು ಖಚಿತವಾಗಿತ್ತು. ಹೀಗಿದ್ದರೂ ಕೇವಲ 19 ಶಾಸಕರನ್ನು ಇಟ್ಟುಕೊಂಡಿರುವ ಕುಮಾರಸ್ವಾಮಿ ಅವರು ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸುತ್ತಾರೆಂದರೆ ಏನೆನ್ನಬೇಕೊ? ಚುನಾವಣೆಯಲ್ಲಿ ಬಿಜೆಪಿಯವರು ಅಡ್ಡಮತ ಹಾಕಿದರೆಂದು ದೇಶದಲ್ಲಿ ಚರ್ಚೆಯಾಯಿತು. ಕುಮಾರಸ್ವಾಮಿ ಅವರಿಂದಾಗಿ ಬಿಜೆಪಿಯವರು ಮುಖಭಂಗ ಅನುಭವಿಸುವಂತಾಯಿತು’ ಎಂದು ಬಾಲಕೃಷ್ಣ ಹೇಳಿದರು. ‘ಎಚ್‌ಡಿಕೆ ಎಂದಿಗೂ ಮೈತ್ರಿಯಲ್ಲಿ ಇರುವುದಿಲ್ಲ. ಅವರ ಗರಡಿಯಲ್ಲಿ ಪಳಗಿರುವ ನಮಗಿದು ಚೆನ್ನಾಗಿ ಗೊತ್ತು. ಒಂದು ಕಡೆ ನೆಲೆ ನಿಲ್ಲದ ಅವರು ಅವರನ್ನು ಬಿಟ್ಟು ಇವರ‍್ಯಾರು ಎಂದು ಬೇರೆ ಬೇರೆ ಸ್ನೇಹಿತರನ್ನು ಹುಡುಕಿಕೊಂಡು ಹೋಗುತ್ತಿರುತ್ತಾರೆ’ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT