ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು, ತೆಂಗಿನ ತೋಟಕ್ಕೆ ಬೆಂಕಿ

Published 17 ಏಪ್ರಿಲ್ 2024, 7:34 IST
Last Updated 17 ಏಪ್ರಿಲ್ 2024, 7:34 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನ ಬಾಣವಾಡಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಆಲೂರು ದಾಖಲೆ ಕಕ್ಕೆಪಾಳ್ಯದ ಗಂಗಯ್ಯ ಅವರ ಮಾವು ಮತ್ತು ತೆಂಗಿನ ತೋಟಕ್ಕೆ ಸೋಮವಾರ ತಡರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ತೋಟ ಸಂಪೂರ್ಣವಾಗಿ ಸುಟ್ಟುಹೋಗಿದೆ.

‘ತೋಟದಲ್ಲಿದ್ದ, ಕಟಾವಿಗೆ ಬಂದಿದ್ದ 200 ಫಲಭರಿತ ಮಾವಿನ ಮರಗಳು ಮತ್ತು 60 ತೆಂಗಿನ ಮರಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ₹ 15 ಲಕ್ಷ ನಷ್ಟವಾಗಿದೆ’ ಎಂದು ತೋಟದ ಮಾಲೀಕ ಗಂಗಯ್ಯ ತಿಳಿಸಿದ್ದಾರೆ. 

‘ಫಲಭರಿತವಾಗಿ ಬೆಳೆದಿದ್ದ ತೋಟವನ್ನು ನೋಡಿ ಕೆಂಗಣ್ಣು ಬೀರುತ್ತಿದ್ದವರೇ ಬೆಂಕಿ ಹಚ್ಚಿದ್ದಾರೆ. ಸರ್ಕಾರ ನಮ್ಮ ನೆರವಿಗೆ ಮುಂದಾಗಬೇಕು’ ಎಂದು ಗಂಗಯ್ಯ ಅವರ ಪತ್ನಿ ರತ್ನಮ್ಮ, ಮಗ ಶ್ರೀನಿವಾಸ್ ಒತ್ತಾಯಿಸಿದ್ದಾರೆ.

ಕುದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT