ಗುಂಪುಗಾರಿಕೆ, ಸಮಾಜದ ಶಾಂತಿಗೆ ಭಂಗ, ನಿಷೇಧಾಜ್ಞೆ ಉಲ್ಲಂಘನೆ ಮೊದಲಾದ ಸಂದರ್ಭದಲ್ಲಿ ಬಲ ಪ್ರಯೋಗಕ್ಕೆ ಅವಕಾಶ ಇದೆ. ಅದನ್ನು ಹೊರತುಪಡಿಸಿ ಎಲ್ಲ ಸಂದರ್ಭಗಳಲ್ಲೂ ಪೊಲೀಸರು ಲಾಠಿ ಹಿಡಿಯಬಾರದು. ಇದರಿಂದ ಸಮಾಜದಲ್ಲಿ ಪೊಲೀಸರ ಬಗೆಗಿನ ಗೌರವ ಕಡಿಮೆ ಆಗಿ, ಅಸಹನೆ ಜಾಸ್ತಿಯಾಗುವ ಸಾಧ್ಯತೆ ಹೆಚ್ಚು ಎಂಬುದು ವಕೀಲರ ಸಲಹೆಯಾಗಿದೆ.