<p><strong>ರಾಮನಗರ</strong>: ‘ಪದವೀಧರರ ಪ್ರತಿನಿಧಿಯಾಗಿ ನಾನು ಆಯ್ಕೆಯಾದರೆ ಆರೋಗ್ಯ, ಶಿಕ್ಷಣ, ಉದ್ಯೋಗ ಭದ್ರತೆ, ಸರ್ಕಾರಿ ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ಗುತ್ತಿಗೆ ನೇಮಕಾತಿಗಳನ್ನು ಕ್ರಮಬದ್ಧಗೊಳಿಸುವ ನಿಟ್ಟಿನಲ್ಲಿ ವಿಧಾನ ಪರಿಷತ್ನಲ್ಲಿ ಹೋರಾಟ ನಡೆಸುತ್ತೇನೆ’ ಎಂದು ಬೆಂಗಳೂರು ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ. ಭಾನುಪ್ರಕಾಶ್ ಹೇಳಿದರು.</p>.<p>‘ಸಮಾಜದಲ್ಲಿ ಪದವೀಧರರ ಪಾತ್ರ ಮಹತ್ತರವಾದುದು. ಅಂತಹವರ ಪ್ರತಿನಿಧಿಯಾದವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಬೇಕು. ಇದುವರೆಗೆ ಪ್ರತಿನಿಧಿಸಿದವರು ಆ ಕೆಲಸ ಮಾಡಿಲ್ಲ. ಕರ್ಮ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿರುವ ನಾನು, ಪದವೀಧರರ ಸೇವಾಕಾಂಕ್ಷಿಯಾಗಿ ರಾಜಕೀಯ ಪ್ರವೇಶಿಸಿದ್ದೇನೆ’ ಎಂದು ನಗರದ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಹಿಂದಿಗಿಂತಲೂ ಈ ಸಲದ ಚುನಾವಣೆಯು ಹೆಚ್ಚಿನ ಬಿರುಸು ಪಡೆದಿದ್ದು, ಜಿದ್ದಾಜಿದ್ದಿಯಿಂದ ಕೂಡಿದೆ. ದೊಡ್ಡ ರಾಜಕೀಯ ನಾಯಕರೇ ತಮ್ಮ ಅಭ್ಯರ್ಥಿ ಪರವಾಗಿ ಪ್ರಚಾರಕ್ಕಿಳಿದಿದ್ದಾರೆ. ಸ್ಥಳೀಯ ಮುಖಂಡರ ನೇತೃತ್ವದಲ್ಲಿ ನೋಂದಣಿ ನಡೆದಿರುವುದರಿಂದ ಈ ಸಲ ಮತದಾರರ ಸಂಖ್ಯೆ ಹಿಗ್ಗಿದೆ. ಬೆಂಗಳೂರಿನಲ್ಲಿ ಪದವೀಧರರಲ್ಲದವರು ಸಹ ನೋಂದಣಿಯಾಗಿದ್ದು, ಕೆಲ ಅಭ್ಯರ್ಥಿಗಳು ಗೆಲುವಿಗಾಗಿ ಅಡ್ಡದಾರಿ ಹಿಡಿದಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಇದರಲ್ಲಿ ಅಧಿಕಾರಿಗಳ ಲೋಪವೂ ಇದೆ’ ಎಂದು ಆರೋಪಿಸಿದರು.</p>.<p>‘ಈ ಚುನಾವಣೆಯು ಪ್ರಾಶಸ್ತ್ಯ ಮತದ ಆಧಾರದ ಮೇಲೆ ನಡೆಯಲಿದೆ. ಕೇವಲ ಒಬ್ಬರಿಗಷ್ಟೇ ಅಲ್ಲದೆ, ಉಳಿದ ಅಭ್ಯರ್ಥಿಗಳಿಗೂ ಮತ ನೀಡುವ ಹಕ್ಕು ಮತದಾರನಿಗಿದೆ. ಪದವೀಧರರನ್ನು ಇದನ್ನು ಅರಿತುಕೊಂಡು ಮತ ಚಲಾಯಿಸಬೇಕಿದೆ’ ಎಂದರು.</p>.<p>ರಂಗಕರ್ಮಿ ಗೋವಿಂದಸ್ವಾಮಿ ಹಾಗೂ ಮುಖಂಡ ರವಿಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ</strong>: ‘ಪದವೀಧರರ ಪ್ರತಿನಿಧಿಯಾಗಿ ನಾನು ಆಯ್ಕೆಯಾದರೆ ಆರೋಗ್ಯ, ಶಿಕ್ಷಣ, ಉದ್ಯೋಗ ಭದ್ರತೆ, ಸರ್ಕಾರಿ ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ಗುತ್ತಿಗೆ ನೇಮಕಾತಿಗಳನ್ನು ಕ್ರಮಬದ್ಧಗೊಳಿಸುವ ನಿಟ್ಟಿನಲ್ಲಿ ವಿಧಾನ ಪರಿಷತ್ನಲ್ಲಿ ಹೋರಾಟ ನಡೆಸುತ್ತೇನೆ’ ಎಂದು ಬೆಂಗಳೂರು ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ. ಭಾನುಪ್ರಕಾಶ್ ಹೇಳಿದರು.</p>.<p>‘ಸಮಾಜದಲ್ಲಿ ಪದವೀಧರರ ಪಾತ್ರ ಮಹತ್ತರವಾದುದು. ಅಂತಹವರ ಪ್ರತಿನಿಧಿಯಾದವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಬೇಕು. ಇದುವರೆಗೆ ಪ್ರತಿನಿಧಿಸಿದವರು ಆ ಕೆಲಸ ಮಾಡಿಲ್ಲ. ಕರ್ಮ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿರುವ ನಾನು, ಪದವೀಧರರ ಸೇವಾಕಾಂಕ್ಷಿಯಾಗಿ ರಾಜಕೀಯ ಪ್ರವೇಶಿಸಿದ್ದೇನೆ’ ಎಂದು ನಗರದ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಹಿಂದಿಗಿಂತಲೂ ಈ ಸಲದ ಚುನಾವಣೆಯು ಹೆಚ್ಚಿನ ಬಿರುಸು ಪಡೆದಿದ್ದು, ಜಿದ್ದಾಜಿದ್ದಿಯಿಂದ ಕೂಡಿದೆ. ದೊಡ್ಡ ರಾಜಕೀಯ ನಾಯಕರೇ ತಮ್ಮ ಅಭ್ಯರ್ಥಿ ಪರವಾಗಿ ಪ್ರಚಾರಕ್ಕಿಳಿದಿದ್ದಾರೆ. ಸ್ಥಳೀಯ ಮುಖಂಡರ ನೇತೃತ್ವದಲ್ಲಿ ನೋಂದಣಿ ನಡೆದಿರುವುದರಿಂದ ಈ ಸಲ ಮತದಾರರ ಸಂಖ್ಯೆ ಹಿಗ್ಗಿದೆ. ಬೆಂಗಳೂರಿನಲ್ಲಿ ಪದವೀಧರರಲ್ಲದವರು ಸಹ ನೋಂದಣಿಯಾಗಿದ್ದು, ಕೆಲ ಅಭ್ಯರ್ಥಿಗಳು ಗೆಲುವಿಗಾಗಿ ಅಡ್ಡದಾರಿ ಹಿಡಿದಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಇದರಲ್ಲಿ ಅಧಿಕಾರಿಗಳ ಲೋಪವೂ ಇದೆ’ ಎಂದು ಆರೋಪಿಸಿದರು.</p>.<p>‘ಈ ಚುನಾವಣೆಯು ಪ್ರಾಶಸ್ತ್ಯ ಮತದ ಆಧಾರದ ಮೇಲೆ ನಡೆಯಲಿದೆ. ಕೇವಲ ಒಬ್ಬರಿಗಷ್ಟೇ ಅಲ್ಲದೆ, ಉಳಿದ ಅಭ್ಯರ್ಥಿಗಳಿಗೂ ಮತ ನೀಡುವ ಹಕ್ಕು ಮತದಾರನಿಗಿದೆ. ಪದವೀಧರರನ್ನು ಇದನ್ನು ಅರಿತುಕೊಂಡು ಮತ ಚಲಾಯಿಸಬೇಕಿದೆ’ ಎಂದರು.</p>.<p>ರಂಗಕರ್ಮಿ ಗೋವಿಂದಸ್ವಾಮಿ ಹಾಗೂ ಮುಖಂಡ ರವಿಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>