<p><strong>ಕನಕಪುರ: </strong>ತಾಲ್ಲೂಕಿನ ಸಾತನೂರು ಹೋಬಳಿಯ ಅಚ್ಚಲು ಗ್ರಾಮದಲ್ಲಿ ಬುಧವಾರ ರಾತ್ರಿ ಸುರಿದ ಮಳೆ ಮತ್ತು ಬಿರುಗಾಳಿಗೆ ಕೆಲವು ಮನೆಗಳ ಮೇಲ್ಚಾವಣಿ ಹಾರಿ ಹೋಗಿದ್ದು, ಅಪಾರ ನಷ್ಟವಾಗಿದೆ.</p>.<p>ಅಚ್ಚಲು ಗ್ರಾಮದ ಲಕ್ಷ್ಮಿ ಮತ್ತು ನಾಗಮ್ಮ ಎಂಬುವರ ಮನೆಗಳು ಹಾನಿಗೀಡಾಗಿವೆ. ಮನೆಯ ಮೇಲ್ಚಾವಣಿ ಹಾರಿ ಹೋಗಿರುವುದು ಒಂದೆಡೆಯಾದರೆ, ಮೇಲ್ಚಾವಣಿ ಇಲ್ಲದೆ ಮನೆಯೊಳಗಿನ ಧವಸ ಧಾನ್ಯ ಮಳೆಗೆ ಸಿಲುಕಿ ನಾಶವಾಗಿವೆ.</p>.<p>ಪ್ರಕೃತಿ ವಿಕೋಪಕ್ಕೆ ಸಿಲುಕಿ ನಷ್ಟ ಅನುಭವಿಸಿರುವ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಅಚ್ಚಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.</p>.<p>ಮರಕ್ಕೆ ಸಿಡಿಲು ಬಡಿದು ಹಾನಿ: ತಾಲ್ಲೂಕಿನ ಬರಡನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಸಿಡಿಲು ಬಡಿದು ಮರವೊಂದು ನೂರಾರು ಚೂರುಗಳಾಗಿದ್ದು, ನೂರೈವತ್ತು ಮೀಟರ್ ದೂರಕ್ಕೆ ಹೋಗಿ ಬಿದ್ದಿವೆ.</p>.<p>ಬರಡನಹಳ್ಳಿ ಗ್ರಾಮದ ಬಿ.ಎಸ್. ಪರಶಿವಯ್ಯ ಎಂಬುವರಿಗೆ ಸೇರಿದ ಸುಮಾರು 30 ವರ್ಷದ ಸಿಲ್ವರ್ ಮರಕ್ಕೆ ಸಿಡಿಲು ಬಡಿದಿದೆ. ಗುರುವಾರ ಜಮೀನಿನ ಕಡೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ: </strong>ತಾಲ್ಲೂಕಿನ ಸಾತನೂರು ಹೋಬಳಿಯ ಅಚ್ಚಲು ಗ್ರಾಮದಲ್ಲಿ ಬುಧವಾರ ರಾತ್ರಿ ಸುರಿದ ಮಳೆ ಮತ್ತು ಬಿರುಗಾಳಿಗೆ ಕೆಲವು ಮನೆಗಳ ಮೇಲ್ಚಾವಣಿ ಹಾರಿ ಹೋಗಿದ್ದು, ಅಪಾರ ನಷ್ಟವಾಗಿದೆ.</p>.<p>ಅಚ್ಚಲು ಗ್ರಾಮದ ಲಕ್ಷ್ಮಿ ಮತ್ತು ನಾಗಮ್ಮ ಎಂಬುವರ ಮನೆಗಳು ಹಾನಿಗೀಡಾಗಿವೆ. ಮನೆಯ ಮೇಲ್ಚಾವಣಿ ಹಾರಿ ಹೋಗಿರುವುದು ಒಂದೆಡೆಯಾದರೆ, ಮೇಲ್ಚಾವಣಿ ಇಲ್ಲದೆ ಮನೆಯೊಳಗಿನ ಧವಸ ಧಾನ್ಯ ಮಳೆಗೆ ಸಿಲುಕಿ ನಾಶವಾಗಿವೆ.</p>.<p>ಪ್ರಕೃತಿ ವಿಕೋಪಕ್ಕೆ ಸಿಲುಕಿ ನಷ್ಟ ಅನುಭವಿಸಿರುವ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಅಚ್ಚಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.</p>.<p>ಮರಕ್ಕೆ ಸಿಡಿಲು ಬಡಿದು ಹಾನಿ: ತಾಲ್ಲೂಕಿನ ಬರಡನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಸಿಡಿಲು ಬಡಿದು ಮರವೊಂದು ನೂರಾರು ಚೂರುಗಳಾಗಿದ್ದು, ನೂರೈವತ್ತು ಮೀಟರ್ ದೂರಕ್ಕೆ ಹೋಗಿ ಬಿದ್ದಿವೆ.</p>.<p>ಬರಡನಹಳ್ಳಿ ಗ್ರಾಮದ ಬಿ.ಎಸ್. ಪರಶಿವಯ್ಯ ಎಂಬುವರಿಗೆ ಸೇರಿದ ಸುಮಾರು 30 ವರ್ಷದ ಸಿಲ್ವರ್ ಮರಕ್ಕೆ ಸಿಡಿಲು ಬಡಿದಿದೆ. ಗುರುವಾರ ಜಮೀನಿನ ಕಡೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>