ಮಾಗಡಿ ತಾಲ್ಲೂಕಿನ ಸೋಲೂರಿನಲ್ಲಿ ರೈತರಾದ ಸಂಜೀವೆಗೌಡ, ಉಗ್ರಪ್ಪ ಎಂಬುವರ ಶ್ರೀಗಂಧದ ಫಾರ್ಮ್ ಹೌಸ್ ಗೆ ಸಚಿವರು ಭೇಟಿ ನೀಡಿದರು. 'ಶ್ರೀಗಂಧದ ಬೀಡು ಕರ್ನಾಟಕದಲ್ಲಿ ಗಂಧದ ಅರಣ್ಯ ಕೃಷಿ ಮಾಡಲು ನರೇಗಾ ಯೋಜನೆಯ ಅಡಿ ಹೆಚ್ಚಿನ ಸವಲತ್ತು ನೀಡಲಾಗುವುದು. ರೇಷ್ಮೆ, ಹೈನುಗಾರಿಕೆ, ಕೋಳಿ ಸಾಕಣೆಗೆ ರೈತರು ನರೇಗಾ ಯೋಜನೆಯನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.