ವಿವಿಧ ಕಡೆಗಳಲ್ಲಿ ರಾಮ ಭಕ್ತರು ರಾಮನಾಮ ಸಂಕೀರ್ತನೆ, ಭಜನೆ, ವಿಷ್ಣುಸಹಸ್ರನಾಮದ ಪಠಣ, ಪಾರಾಯಣ ನಡೆಸುವ ಮೂಲಕ ತಮ್ಮ ಭಕ್ತಿಯನ್ನು ಮೆರೆದರು. ಶ್ರೀರಾಮ ದೇವಾಲಯ, ಐಜೂರಿನ ಮಾರಮ್ಮ ದೇವಸ್ಥಾನ, ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ, ವಿವೇಕಾನಂದನಗರದ ಆಂಜನೇಯ ದೇವಾಲಯದಲ್ಲಿ ದೇವರಿಗೆ ಮಾಡಿದ್ದ ವಿಶೇಷ ಅಲಂಕಾರ ಗಮನ ಸೆಳೆಯಿತು.