ಚನ್ನಪಟ್ಟಣದಲ್ಲಿ ಶುಕ್ರವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು 'ಬಿಜೆಪಿಯು ಆರ್ ಎಸ್ ಜೊತೆ ಸೇರಿಕೊಂಡು ಕಾಶ್ಮೀರವನ್ನು ಹಾಳು ಮಾಡುತ್ತಿದೆ' ಎಂದು ದೂರಿದರು. ಕೆಲ ದಿನಗಳ ಹಿಂದಷ್ಟೇ ಕಾಶ್ಮೀರದಲ್ಲಿ ಉಗ್ರರು ಶಾಲೆಗೆ ನುಗ್ಗಿ ಶಿಕ್ಷಕರನ್ನು ಕೊಂದು ಹಾಕಿದ್ದಾರೆ. ಈ ವರ್ಷ ಗಡಿಯಲ್ಲಿ ಹೆಚ್ಚು ಸೈನಿಕರ ಸಾವಾಗಿದೆ. ಇದೇನಾ ಆರ್ಎಸ್ಎಸ್ ನಿಮಗೆ ಸರ್ಕಾರ ನಡೆಸುವುದು ಹೇಗೆ ಎಂದು ಹೇಳಿಕೊಟ್ಟಿರುವ ಪಾಠ' ಎಂದು ಪ್ರಶ್ನಿಸಿದರು.