‘ಈ ವೃತ್ತಿಯಿಂದ ನಾವು ಕುಟುಂಬ ನಿರ್ವಹಣೆ ಮಾಡುತ್ತಿರುವುದು
ಬಹಳ ಕಷ್ಟಕರವಾಗಿದೆ. ಜೊತೆಗೆ ನಾವು ಹೂ ಖರೀದಿ ಮಾಡಲು ಪಟ್ಟಣಕ್ಕೆ ಹೋಗಲು
ಸಾಧ್ಯವಾಗುತ್ತಿಲ್ಲ. ಸ್ಥಳೀಯರಿಂದ ಹೂ ಖರೀದಿ ಮಾಡಿ ಜೀವನ ನಡೆಸುವುದಕ್ಕೆ ಆಗುವುದಿಲ್ಲ. ನಮಗೆ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಜೀವನ ನಡೆಸಲು ಕಷ್ಟಕರವಾಗಿದೆ. ಕೂಡಲೇ ಸರ್ಕಾರ ನಮಗೆ ವಿಶೇಷ ಭತ್ಯೆಯನ್ನು ಘೋಷಿಸಬೇಕು’ ಎಂದು ಒತ್ತಾಯಿಸಿದರು.