<p><strong>ಬಿಡದಿ</strong>: ಬೆಂಗಳೂರು –ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೋತಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ದಿನನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರು ಹಾಗೂ ಸ್ಥಳೀಯ ಭಕ್ತಾದಿಗಳು ಪೂಜೆ ಸಲ್ಲಿಸುತ್ತಿರುವುದು ವಾಡಿಕೆ. ಕೋವಿಡ್ -19 ನಿಂದ ದೇವಾಲಯಗಳು ಬಾಗಿಲು ಮುಚ್ಚಿರುವುದರಿಂದ ಸುಮಾರು 10 ಮಳಿಗೆಗಳ ಹೂ ಮಾರಾಟಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>‘ಹೂವಿಗೆ ಎಲ್ಲಿಲ್ಲದೆ ಬೇಡಿಕೆ ಇತ್ತು. ಹೂವನ್ನು ದಿನನಿತ್ಯವೂ ಮದುವೆಗಳು, ಸಾರ್ವಜನಿಕ ಸಮಾರಂಭಗಳು, ಹೊಸ ವಾಹನಗಳ ಪೂಜೆ ಕಾರ್ಯಗಳಿಗೆ ದಿನನಿತ್ಯ ₹6 ಸಾವಿರ ವ್ಯವಹಾರ ಮಾಡಿ ಜೀವನ ಸಾಗಿಸುತ್ತಿದ್ದೆವು’ ಎಂದು ವ್ಯಾಪಾರಿಗಳು ಹೇಳಿದರು.</p>.<p>‘ಕೋವಿಡ್ನಿಂದ ಯಾರೂ ಹೂ ಖರೀದಿಸುತ್ತಿಲ್ಲ. ಪೂಜೆ ಕಾರ್ಯಕ್ರಮ ಇಲ್ಲದಿರುವುದರಿಂದ ಹೂ ಖರೀದಿ ಮಾಡಲು ಯಾರು ಮುಂದೆ ಬರುತ್ತಿಲ್ಲ. ಈ ಹೂ ಮಾರಾಟದ ವೃತ್ತಿಯನ್ನು 10 ರಿಂದ 15 ವರ್ಷಗಳಿಂದಲೂ ಮಾಡಿಕೊಂಡು ಜೀವನ ನಡೆಸುತ್ತಿದ್ದವು’ ಎಂದು ಲಕ್ಷ್ಮಮ್ಮ ಅಳಲನ್ನು ತೋಡಿಕೊಂಡರು.</p>.<p>‘ಈ ವೃತ್ತಿಯಿಂದ ನಾವು ಕುಟುಂಬ ನಿರ್ವಹಣೆ ಮಾಡುತ್ತಿರುವುದು<br />ಬಹಳ ಕಷ್ಟಕರವಾಗಿದೆ. ಜೊತೆಗೆ ನಾವು ಹೂ ಖರೀದಿ ಮಾಡಲು ಪಟ್ಟಣಕ್ಕೆ ಹೋಗಲು<br />ಸಾಧ್ಯವಾಗುತ್ತಿಲ್ಲ. ಸ್ಥಳೀಯರಿಂದ ಹೂ ಖರೀದಿ ಮಾಡಿ ಜೀವನ ನಡೆಸುವುದಕ್ಕೆ ಆಗುವುದಿಲ್ಲ. ನಮಗೆ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಜೀವನ ನಡೆಸಲು ಕಷ್ಟಕರವಾಗಿದೆ. ಕೂಡಲೇ ಸರ್ಕಾರ ನಮಗೆ ವಿಶೇಷ ಭತ್ಯೆಯನ್ನು ಘೋಷಿಸಬೇಕು’ ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಡದಿ</strong>: ಬೆಂಗಳೂರು –ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೋತಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ದಿನನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರು ಹಾಗೂ ಸ್ಥಳೀಯ ಭಕ್ತಾದಿಗಳು ಪೂಜೆ ಸಲ್ಲಿಸುತ್ತಿರುವುದು ವಾಡಿಕೆ. ಕೋವಿಡ್ -19 ನಿಂದ ದೇವಾಲಯಗಳು ಬಾಗಿಲು ಮುಚ್ಚಿರುವುದರಿಂದ ಸುಮಾರು 10 ಮಳಿಗೆಗಳ ಹೂ ಮಾರಾಟಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>‘ಹೂವಿಗೆ ಎಲ್ಲಿಲ್ಲದೆ ಬೇಡಿಕೆ ಇತ್ತು. ಹೂವನ್ನು ದಿನನಿತ್ಯವೂ ಮದುವೆಗಳು, ಸಾರ್ವಜನಿಕ ಸಮಾರಂಭಗಳು, ಹೊಸ ವಾಹನಗಳ ಪೂಜೆ ಕಾರ್ಯಗಳಿಗೆ ದಿನನಿತ್ಯ ₹6 ಸಾವಿರ ವ್ಯವಹಾರ ಮಾಡಿ ಜೀವನ ಸಾಗಿಸುತ್ತಿದ್ದೆವು’ ಎಂದು ವ್ಯಾಪಾರಿಗಳು ಹೇಳಿದರು.</p>.<p>‘ಕೋವಿಡ್ನಿಂದ ಯಾರೂ ಹೂ ಖರೀದಿಸುತ್ತಿಲ್ಲ. ಪೂಜೆ ಕಾರ್ಯಕ್ರಮ ಇಲ್ಲದಿರುವುದರಿಂದ ಹೂ ಖರೀದಿ ಮಾಡಲು ಯಾರು ಮುಂದೆ ಬರುತ್ತಿಲ್ಲ. ಈ ಹೂ ಮಾರಾಟದ ವೃತ್ತಿಯನ್ನು 10 ರಿಂದ 15 ವರ್ಷಗಳಿಂದಲೂ ಮಾಡಿಕೊಂಡು ಜೀವನ ನಡೆಸುತ್ತಿದ್ದವು’ ಎಂದು ಲಕ್ಷ್ಮಮ್ಮ ಅಳಲನ್ನು ತೋಡಿಕೊಂಡರು.</p>.<p>‘ಈ ವೃತ್ತಿಯಿಂದ ನಾವು ಕುಟುಂಬ ನಿರ್ವಹಣೆ ಮಾಡುತ್ತಿರುವುದು<br />ಬಹಳ ಕಷ್ಟಕರವಾಗಿದೆ. ಜೊತೆಗೆ ನಾವು ಹೂ ಖರೀದಿ ಮಾಡಲು ಪಟ್ಟಣಕ್ಕೆ ಹೋಗಲು<br />ಸಾಧ್ಯವಾಗುತ್ತಿಲ್ಲ. ಸ್ಥಳೀಯರಿಂದ ಹೂ ಖರೀದಿ ಮಾಡಿ ಜೀವನ ನಡೆಸುವುದಕ್ಕೆ ಆಗುವುದಿಲ್ಲ. ನಮಗೆ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಜೀವನ ನಡೆಸಲು ಕಷ್ಟಕರವಾಗಿದೆ. ಕೂಡಲೇ ಸರ್ಕಾರ ನಮಗೆ ವಿಶೇಷ ಭತ್ಯೆಯನ್ನು ಘೋಷಿಸಬೇಕು’ ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>