ಪಣಕನಹಲ್ಲು, ತಿರುಮಲೆ ಗ್ರಾಮದವರ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡು, ಬಡವರ ಬದುಕು ಬೀದಿಗೆ ಬಿದ್ದಿತ್ತು. ಜಿಲ್ಲಾ ಮಟ್ಟದ ಗಣಿಗಾರಿಕೆ ಮತ್ತು ಪರಿಸರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ, ಕ್ರಷರ್ ಮಾಲೀಕರು ನೀಡುವ ಆಮಿಷಗಳಿಗೆ ಬಲಿಯಾಗಿ ಗ್ರಾಮೀಣ ಜನತೆಯ ಬದುಕನ್ನು ನಾಶ ಮಾಡುತ್ತಿದ್ದಾರೆ. ಪೋಲೋಹಳ್ಳಿ ಬಂಡೆ ಒಡೆಯಲು ಕ್ರಷರ್ ಇಡುವುದನ್ನು ವಿರೋಧಿಸಿ ಹೋರಾಟ ರೂಪಿಸಲಾಗುವುದು ಎಂದರು.
ವಿರೋಧ: ಪೋಲೋಹಳ್ಳಿ ಬೆಟ್ಟಕ್ಕೆ ಕ್ರಷರ್ ಇಡುವುದರಿಂದ ನಮ್ಮ ಬದುಕು ನಾಶವಾಗಲಿದೆ ಎಂದು ಪೋಲೋಹಳ್ಳಿ, ಗುಡ್ಡಹಳ್ಳಿ, ಮರಲಗೊಂಡಲ, ವೆಂಗಳಪ್ಪನತಾಂಡ್ಯ, ರಂಗನಾಥ ಪುರ ಸುತ್ತಲಿನ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.