<p><strong>ಕನಕಪುರ</strong>: ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ್ದ 200 ಮಂದಿ ನಿರಾಶ್ರಿತರು ಮತ್ತು ನಿರ್ಗತಿಕರಿಗೆ ಇಲ್ಲಿನ ಬಸವೇಶ್ವರ ನಗರದ ಶ್ರೀಸಿದ್ದಿವಿನಾಯಕ ಗೆಳೆಯರ ಬಳಗದ ಸದಸ್ಯರು ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟ ವಿತರಿಸುತ್ತಿದ್ದಾರೆ.</p>.<p>ಲಾಕ್ಡೌನ್ ಘೋಷಣೆಯಾದ ದಿನದಿಂದಲೂ ಐವರು ಸದಸ್ಯರು ಮಾರುಕಟ್ಟೆಯಲ್ಲಿ ತರಕಾರಿ, ದಿನಸಿ ಸಾಮಗ್ರಿ ತಂದು ತಮ್ಮ ಮನೆ ಮೇಲೆ ಊಟ ತಯಾರಿಸಿ ಪೊಟ್ಟಣ ಸಿದ್ಧಪಡಿಸಿ ನಿರಾಶ್ರಿತರು, ನಿರ್ಗತಿಕರು ಇರುವ ಜಾಗಕ್ಕೆ ತೆಗೆದುಕೊಂಡು ಹೋಗಿ ಹಂಚಿಕೆ ಮಾಡುತ್ತಾರೆ.</p>.<p>ವಾರದ 7 ದಿನದಲ್ಲಿ ಮೂರು ದಿನ ನಾನ್ವೆಜ್, ಉಳಿದ 4 ದಿನ ಮೊಟ್ಟೆ ಜತೆಗೆ ಬಾಳೆಹಣ್ಣು, ಕುಡಿಯುವ ನೀರಿನ ಬಾಟಲಿ ಕೊಡುತ್ತಿದ್ದಾರೆ. ಎಲ್ಲವನ್ನು ಮನೆಯಲ್ಲೇ ಮಾಡಿಕೊಳ್ಳುತ್ತಿರುವುದರಿಂದ ಸೊಪ್ಪು, ತರಕಾರಿ ಸೇರಿದಂತೆ ಕೆಲವು ಅಗತ್ಯ ವಸ್ತುಗಳನ್ನು ಮಾತ್ರ ಖರೀದಿ ಮಾಡುತ್ತಾರೆ.</p>.<p>ಮಕ್ಕಳು ಮಾಡುವ ಸೇವಾ ಕೆಲಸದಿಂದ ಸಂತೋಷಗೊಂಡಿರುವ ಪೋಷಕರು ಪೂರ್ಣ ಪ್ರಮಾಣದಲ್ಲಿ ಸಹಕರಿಸಿ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಇದರಿಂದ ಯಾವುದೇ ಅಡ್ಡಿ ಇಲ್ಲದೆ ಊಟ ಹಂಚಿಕೆ ಕಾರ್ಯ ಯಶಸ್ವಿಯಾಗಿ ಮುಂದುವರಿದಿದೆ.</p>.<p>ಬಳಗದ ಅಧ್ಯಕ್ಷ ಚರಣ್ ಯಾದವ್ ಊಟ ತಯಾರಿಸುವ ನೇತೃತ್ವವಹಿಸಿದ್ದು ಅದಕ್ಕೆ ದರ್ಶನ್ ಎಸ್.ಜೆ., ಹೇಮಂತ್, ಅಭಿಷೇಕ್, ಪ್ರಶಾಂತ್ ಎಸ್.ಕೆ. ಬೆಂಬಲವಾಗಿನಿಂತಿದ್ದಾರೆ.</p>.<p>‘ನಾವು ಕಾಲೇಜಿನಲ್ಲಿ ಒಟ್ಟಿಗೆ ಓದುತ್ತಿದ್ದೆವು. ನಮ್ಮ ಏರಿಯಾದಲ್ಲಿ ಗಣೇಶನ ಮೂರ್ತಿ ಕೂರಿಸಲು ಒಟ್ಟಾದೆವು. ಈ ವರ್ಷ ಕೊರೊನಾ ಬಂದಿದ್ದರಿಂದ ಕಷ್ಟದಲ್ಲಿರುವ ಮತ್ತು ಯಾರಿಗೆ ಊಟದ ಅವಶ್ಯಕತೆ ಇದೆಯೋ ಅವರಿಗೆ ಹಸಿವು ನೀಗಿಸಲು ಈ ಕೆಲಸ ಮಾಡುತ್ತಿದ್ದೇವೆ’ ಎಂದು ಚರಣ್ ಯಾದವ್ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ</strong>: ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ್ದ 200 ಮಂದಿ ನಿರಾಶ್ರಿತರು ಮತ್ತು ನಿರ್ಗತಿಕರಿಗೆ ಇಲ್ಲಿನ ಬಸವೇಶ್ವರ ನಗರದ ಶ್ರೀಸಿದ್ದಿವಿನಾಯಕ ಗೆಳೆಯರ ಬಳಗದ ಸದಸ್ಯರು ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟ ವಿತರಿಸುತ್ತಿದ್ದಾರೆ.</p>.<p>ಲಾಕ್ಡೌನ್ ಘೋಷಣೆಯಾದ ದಿನದಿಂದಲೂ ಐವರು ಸದಸ್ಯರು ಮಾರುಕಟ್ಟೆಯಲ್ಲಿ ತರಕಾರಿ, ದಿನಸಿ ಸಾಮಗ್ರಿ ತಂದು ತಮ್ಮ ಮನೆ ಮೇಲೆ ಊಟ ತಯಾರಿಸಿ ಪೊಟ್ಟಣ ಸಿದ್ಧಪಡಿಸಿ ನಿರಾಶ್ರಿತರು, ನಿರ್ಗತಿಕರು ಇರುವ ಜಾಗಕ್ಕೆ ತೆಗೆದುಕೊಂಡು ಹೋಗಿ ಹಂಚಿಕೆ ಮಾಡುತ್ತಾರೆ.</p>.<p>ವಾರದ 7 ದಿನದಲ್ಲಿ ಮೂರು ದಿನ ನಾನ್ವೆಜ್, ಉಳಿದ 4 ದಿನ ಮೊಟ್ಟೆ ಜತೆಗೆ ಬಾಳೆಹಣ್ಣು, ಕುಡಿಯುವ ನೀರಿನ ಬಾಟಲಿ ಕೊಡುತ್ತಿದ್ದಾರೆ. ಎಲ್ಲವನ್ನು ಮನೆಯಲ್ಲೇ ಮಾಡಿಕೊಳ್ಳುತ್ತಿರುವುದರಿಂದ ಸೊಪ್ಪು, ತರಕಾರಿ ಸೇರಿದಂತೆ ಕೆಲವು ಅಗತ್ಯ ವಸ್ತುಗಳನ್ನು ಮಾತ್ರ ಖರೀದಿ ಮಾಡುತ್ತಾರೆ.</p>.<p>ಮಕ್ಕಳು ಮಾಡುವ ಸೇವಾ ಕೆಲಸದಿಂದ ಸಂತೋಷಗೊಂಡಿರುವ ಪೋಷಕರು ಪೂರ್ಣ ಪ್ರಮಾಣದಲ್ಲಿ ಸಹಕರಿಸಿ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಇದರಿಂದ ಯಾವುದೇ ಅಡ್ಡಿ ಇಲ್ಲದೆ ಊಟ ಹಂಚಿಕೆ ಕಾರ್ಯ ಯಶಸ್ವಿಯಾಗಿ ಮುಂದುವರಿದಿದೆ.</p>.<p>ಬಳಗದ ಅಧ್ಯಕ್ಷ ಚರಣ್ ಯಾದವ್ ಊಟ ತಯಾರಿಸುವ ನೇತೃತ್ವವಹಿಸಿದ್ದು ಅದಕ್ಕೆ ದರ್ಶನ್ ಎಸ್.ಜೆ., ಹೇಮಂತ್, ಅಭಿಷೇಕ್, ಪ್ರಶಾಂತ್ ಎಸ್.ಕೆ. ಬೆಂಬಲವಾಗಿನಿಂತಿದ್ದಾರೆ.</p>.<p>‘ನಾವು ಕಾಲೇಜಿನಲ್ಲಿ ಒಟ್ಟಿಗೆ ಓದುತ್ತಿದ್ದೆವು. ನಮ್ಮ ಏರಿಯಾದಲ್ಲಿ ಗಣೇಶನ ಮೂರ್ತಿ ಕೂರಿಸಲು ಒಟ್ಟಾದೆವು. ಈ ವರ್ಷ ಕೊರೊನಾ ಬಂದಿದ್ದರಿಂದ ಕಷ್ಟದಲ್ಲಿರುವ ಮತ್ತು ಯಾರಿಗೆ ಊಟದ ಅವಶ್ಯಕತೆ ಇದೆಯೋ ಅವರಿಗೆ ಹಸಿವು ನೀಗಿಸಲು ಈ ಕೆಲಸ ಮಾಡುತ್ತಿದ್ದೇವೆ’ ಎಂದು ಚರಣ್ ಯಾದವ್ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>