<p><strong>ಮರಳವಾಡಿ (ಕನಕಪುರ):</strong> ಇಲ್ಲಿನ ಮರಳವಾಡಿ ಹೋಬಳಿ ದುನ್ನಸಂದ್ರ ಗ್ರಾಮದಲ್ಲಿ ಮನೆಯ ಹಿಂಬದಿಯ ಕೊಟ್ಟಿಗೆಯಲ್ಲಿದ್ದ ಕುರಿ ಮತ್ತು ಮೇಕೆಗಳನ್ನು ಕಳವು ಮಾಡಲಾಗಿದೆ.</p>.<p>ದುನ್ನಸಂದ್ರ ಗ್ರಾಮದ ಗೌರಮ್ಮ ಕೆಂಪೇಗೌಡ ಎಂಬುವರಿಗೆ ಸೇರಿದ ಸುಮಾರು ₹ 50 ಸಾವಿರ ಬೆಲೆಬಾಳುವ ಕುರಿ ಮೇಕೆಗಳು ಕಳ್ಳತನವಾಗಿವೆ. ರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ಕೊಟ್ಟಿಗೆ ಮನೆಯ ಬೀಗ ಒಡೆದು ಟೆಂಪೋದಲ್ಲಿ ಕುರಿ ಮೇಕೆಗಳನ್ನು ಸಾಗಿಸಿದ್ದಾರೆ.</p>.<p>ಬೆಳಿಗ್ಗೆ ಪ್ರಕರಣ ಗೊತ್ತಾಗಿದೆ. ಗೌರಮ್ಮ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.</p>.<p>ದುನ್ನಸಂದ್ರ ಗ್ರಾಮವಲ್ಲದೆ ಗುತ್ತಲಹುಣಸೆದೊಡ್ಡಿ, ಯಲಚವಾಡಿ, ತೋಕಸಂದ್ರ ಮೊದಲಾದ ಗ್ರಾಮಗಳಲ್ಲೂ ಇದೇ ಮಾದರಿಯಲ್ಲಿ ಕಳ್ಳರು ಕುರಿ ಮೇಕೆಗಳನ್ನು ಅಪಹರಿಸಿದ್ದಾರೆ.</p>.<p>‘ಮರಳವಾಡಿ ಮತ್ತು ಹಾರೋಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಕುರಿ ಮೇಕೆ ಕಳ್ಳತನ ವ್ಯವಸ್ಥಿತವಾಗಿ ನಡೆಯುತ್ತಿದೆ’ ಎಂದು ರಾಮನಗರ ಜಿಲ್ಲಾ ಕುರಿ, ಉಣ್ಣೆ ಮತ್ತು ಮೇಕೆ ಸಾಕಾಣಿಕೆದಾರರ ಸಂಘದ ಅಧ್ಯಕ್ಷ ಟಿ.ಸಿ. ಚೂಡಲಿಂಗೇಗೌಡ ಆರೋಪಿಸಿದ್ದಾರೆ.</p>.<p>‘ಗೌರಮ್ಮ ಕೆಂಪೇಗೌಡ ಅವರು ತೀರ ಬಡವರಾಗಿದ್ದು ಕಡಿಮೆ ಜಮೀನು ಹೊಂದಿರುವುದರಿಂದ ಜೀವನಕ್ಕೆ ಆಧಾರವಾಗಿ ಕುರಿ ಮೇಕೆಗಳನ್ನು ಸಾಕಾಣಿಕೆ ಮಾಡುತ್ತಿದ್ದರು. ಆಧಾರವಾಗಿದ್ದು ಅವುಗಳನ್ನೇ ಕಳ್ಳರು ಕದ್ದೊಯ್ದಿರುವುದರಿಂದ ಅವರ ಜೀವನ ಸಂಕಷ್ಟಕ್ಕೆ ಸಿಲುಕಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮರಳವಾಡಿ (ಕನಕಪುರ):</strong> ಇಲ್ಲಿನ ಮರಳವಾಡಿ ಹೋಬಳಿ ದುನ್ನಸಂದ್ರ ಗ್ರಾಮದಲ್ಲಿ ಮನೆಯ ಹಿಂಬದಿಯ ಕೊಟ್ಟಿಗೆಯಲ್ಲಿದ್ದ ಕುರಿ ಮತ್ತು ಮೇಕೆಗಳನ್ನು ಕಳವು ಮಾಡಲಾಗಿದೆ.</p>.<p>ದುನ್ನಸಂದ್ರ ಗ್ರಾಮದ ಗೌರಮ್ಮ ಕೆಂಪೇಗೌಡ ಎಂಬುವರಿಗೆ ಸೇರಿದ ಸುಮಾರು ₹ 50 ಸಾವಿರ ಬೆಲೆಬಾಳುವ ಕುರಿ ಮೇಕೆಗಳು ಕಳ್ಳತನವಾಗಿವೆ. ರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ಕೊಟ್ಟಿಗೆ ಮನೆಯ ಬೀಗ ಒಡೆದು ಟೆಂಪೋದಲ್ಲಿ ಕುರಿ ಮೇಕೆಗಳನ್ನು ಸಾಗಿಸಿದ್ದಾರೆ.</p>.<p>ಬೆಳಿಗ್ಗೆ ಪ್ರಕರಣ ಗೊತ್ತಾಗಿದೆ. ಗೌರಮ್ಮ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.</p>.<p>ದುನ್ನಸಂದ್ರ ಗ್ರಾಮವಲ್ಲದೆ ಗುತ್ತಲಹುಣಸೆದೊಡ್ಡಿ, ಯಲಚವಾಡಿ, ತೋಕಸಂದ್ರ ಮೊದಲಾದ ಗ್ರಾಮಗಳಲ್ಲೂ ಇದೇ ಮಾದರಿಯಲ್ಲಿ ಕಳ್ಳರು ಕುರಿ ಮೇಕೆಗಳನ್ನು ಅಪಹರಿಸಿದ್ದಾರೆ.</p>.<p>‘ಮರಳವಾಡಿ ಮತ್ತು ಹಾರೋಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಕುರಿ ಮೇಕೆ ಕಳ್ಳತನ ವ್ಯವಸ್ಥಿತವಾಗಿ ನಡೆಯುತ್ತಿದೆ’ ಎಂದು ರಾಮನಗರ ಜಿಲ್ಲಾ ಕುರಿ, ಉಣ್ಣೆ ಮತ್ತು ಮೇಕೆ ಸಾಕಾಣಿಕೆದಾರರ ಸಂಘದ ಅಧ್ಯಕ್ಷ ಟಿ.ಸಿ. ಚೂಡಲಿಂಗೇಗೌಡ ಆರೋಪಿಸಿದ್ದಾರೆ.</p>.<p>‘ಗೌರಮ್ಮ ಕೆಂಪೇಗೌಡ ಅವರು ತೀರ ಬಡವರಾಗಿದ್ದು ಕಡಿಮೆ ಜಮೀನು ಹೊಂದಿರುವುದರಿಂದ ಜೀವನಕ್ಕೆ ಆಧಾರವಾಗಿ ಕುರಿ ಮೇಕೆಗಳನ್ನು ಸಾಕಾಣಿಕೆ ಮಾಡುತ್ತಿದ್ದರು. ಆಧಾರವಾಗಿದ್ದು ಅವುಗಳನ್ನೇ ಕಳ್ಳರು ಕದ್ದೊಯ್ದಿರುವುದರಿಂದ ಅವರ ಜೀವನ ಸಂಕಷ್ಟಕ್ಕೆ ಸಿಲುಕಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>