ರಾಮದೇವರ ಜಾತ್ರೋತ್ಸವದ ಅಂಗವಾಗಿ ಛತ್ರದ ಬೀದಿಯಲ್ಲಿ ಗೃಹಬಳಕೆ, ಆಟಿಕೆ ಸಾಮಗ್ರಿಗಳು ಸೇರಿದಂತೆ ವಿವಿಧ ಮಾರಾಟ ಮಳಿಗೆಗಳು, ಆಹಾರ ಮಳಿಗೆಗಳು ಜನರನ್ನು ಕೈಬೀಸಿ ಕರೆಯುತ್ತಿದ್ದವು. ಚಿಕ್ಕ ಮಕ್ಕಳು ಆಟಿಕೆ ಸಾಮಗ್ರಿಗಳಿಗಾಗಿ ಪಾಲಕರನ್ನು ಪೀಡಿಸುತ್ತಿರುವುದು ಸಾಮಾನ್ಯವಾಗಿತ್ತು. ಉರಿ ಬಿಸಿಲಲ್ಲೂ ಭಕ್ತರು ದೇವರ ದರ್ಶನಕ್ಕೆ ಬಂದು, ಪಾನಕ ಮತ್ತು ಮಜ್ಜಿಗೆ ಸೇವಿಸುವ ಮೂಲಕ ದಣಿವಾರಿಸಿಕೊಂಡರು.