<p><strong>ಚನ್ನಪಟ್ಟಣ (ರಾಮನಗರ):</strong> ಮುಸ್ಲಿಂ ಉದ್ಯಮಿಯೊಬ್ಬರು ಇಲ್ಲಿನ ಮಂಗಳವಾರಪೇಟೆಯಲ್ಲಿ ಸುಮಾರು ₹2 ಕೋಟಿ ವೆಚ್ಚದಲ್ಲಿ ಹಿಂದೂ ದೇವಾಲಯದ ಜೀರ್ಣೋದ್ಧಾರ ಮಾಡಿದ್ದಾರೆ. ದೇವರು – ಧರ್ಮದ ಹೆಸರಿನಲ್ಲಿ ಕಿತ್ತಾಟದ ರಾಜಕಾರಣದ ಈ ಹೊತ್ತಿನಲ್ಲಿ, ಎಸ್.ಕೆ. ಗ್ರೂಪ್ಸ್ ಮಾಲೀಕ ಸಾಹುಕಾರ್ ಎಸ್.ಕೆ. ಸೈಯದ್ ಸಾದತ್ಉಲ್ಲಾ ಸಖಾಫ್ ಅವರು ದೇವಸ್ಥಾನ ನಿರ್ಮಿಸಿ ಸಾಮರಸ್ಯದ ಸಂದೇಶ ಸಾರಿದ್ದಾರೆ.</p><p>ಶಿಥಿಲಾವಸ್ಥೆ ತಲುಪಿದ್ದ ಹಳೆಯ ದೇವಸ್ಥಾನದ ಜಾಗದಲ್ಲಿ ತಲೆ ಎತ್ತಿರುವ ಕಲ್ಲಿನಿಂದ ನಿರ್ಮಿಸಿರುವ ಈ ಭವ್ಯ ದೇವಸ್ಥಾನ, ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲೇ ಲೋಕಾರ್ಪಣೆಗೊಂಡಿದೆ. ಸ್ಥಳೀಯ ಶ್ರೀ ಬಸವೇಶ್ವರ ವಿನಾಯಕ ಯುವಕರ ಬಳಗದ ನೇತೃತ್ವದಲ್ಲಿ ನಡೆದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ, ವಿವಿಧ ಸಮುದಾಯಗಳ ಸ್ವಾಮೀಜಿಗಳು ಸಾಕ್ಷಿಯಾಗಿ ಹರಿಸಿದ್ದಾರೆ.</p><p><strong>ತ.ನಾಡಿನಿಂದ ಬಂತು ಕಲ್ಲು:</strong> ದೇವಾಲಯಕ್ಕೆ ಅಗತ್ಯವಿರುವ ಕಲ್ಲುಗಳನ್ನು ತಮಿಳುನಾಡಿನ ಮಹಾಬಲೇಶ್ವರನಿಂದ ತರಿಸಲಾಗಿದೆ. ನುರಿತ ಶಿಲ್ಪ ಕಲಾವಿದರನ್ನು ಕರೆಯಿಸಿ, ದೇವಸ್ಥಾನದ ವಿನ್ಯಾಸಕ್ಕೆ ಅನುಗುಣವಾಗಿ ಆವರಣದಲ್ಲೇ ಕಲ್ಲುಗಳನ್ನು ಕೆತ್ತಿಸಲಾಗಿದೆ. ದೇವಾಲಯದ ಮೂರ್ತಿ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಲಶೋತ್ಸವ ಪ್ರತಿಷ್ಠಾಪನೆ ಕಾರ್ಯದಲ್ಲಿ ಸಖಾಫ್ ಅವರು ಭಾಗಿಯಾಗಿದ್ದಾರೆ.</p><p>‘ಬಸವನ ಗುಡಿ’ ಎಂದೇ ಪ್ರಸಿದ್ಧಿಯಾಗಿರುವ ಮಂಗಳವಾರಪೇಟೆಯ ಬಸವೇಶ್ವರ ದೇವಾಲಯ ಪಟ್ಟಣದ ಪ್ರಮುಖ ಸ್ಥಳವಾಗಿದೆ. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರವಣಿಗೆ, ಪ್ರತಿಭಟನಾ ಮೆರವಣಿಗೆ, ರಾಜಕೀಯ ಪಕ್ಷಗಳ ರ್ಯಾಲಿಗಳು ಈ ದೇವಾಲಯದ ಆವರಣದಿಂದಲೇ ಆರಂಭವಾಗುತ್ತವೆ.</p><p>ಸನ್ಮಾನ: ಶಿಥಿಲಾವಸ್ಥೆ ತಲುಪಿದ್ದ ದೇವಾಲಯದ ಜೀರ್ಣೋದ್ಧಾರ ಮಾಡಬೇಕೆಂಬ ಸ್ಥಳೀಯರ ಒತ್ತಾಸೆಗೆ ಸಯ್ಯದ್ ಅವರು ಕೈ ಜೋಡಿಸಿದ್ದಾರೆ. ಅದಕ್ಕೆ ಅಗತ್ಯವಿದ್ದ ಸುಮಾರು ₹2 ಕೋಟಿ ಮೊತ್ತವನ್ನು ಭರಿಸಿದ್ದಾರೆ. ದೇವಾಲಯ ಲೋಕಾರ್ಪಣೆ ದಿನ ಸ್ಥಳೀಯರು ಸಯ್ಯದ್ ಅವರಿಗೆ ಅಭಿಮಾನದ ಸನ್ಮಾನ ಮಾಡಿದರು.</p>.<p><strong>ಹಿಂದೆಯೂ ನಿರ್ಮಿಸಿದ್ದರು</strong></p><p>ಬೀಡಿ ಸೇರಿದಂತೆ ವಿವಿಧ ಉದ್ಯಮಗಳನ್ನು ಹೊಂದಿರುವ ಸಯ್ಯದ್ ಅವರು ಯಾವುದೇ ಜಾತಿ–ಧರ್ಮ ನೋಡದೆ ದಾನ ಮಾಡುವುದರಲ್ಲಿ ಎತ್ತಿದ ಕೈ. 2010ರಲ್ಲಿ ತಾಲ್ಲೂಕಿನ ಎಸ್.ಎಂ. ಹಳ್ಳಿ ಗ್ರಾಮದಲ್ಲಿದ್ದ ದರ್ಗಾದ ಜೊತೆಗೆ ಶಿಥಿಲಾವಸ್ಥೆಯಲ್ಲಿದ್ದ ವೀರಭದ್ರೇಶ್ವರ ದೇವಾಲಯವನ್ನು ಸಹ ಜೀರ್ಣೋದ್ದಾರ ಮಾಡಿದ್ದರು ಎಂದು ಸ್ಥಳೀಯರು ನೆನೆದರು.</p><p>‘ಜಾತಿ ಮತ್ತು ಧರ್ಮಕ್ಕಿಂತ ಪ್ರೀತಿ ಮತ್ತು ಸೌಹಾರ್ದ ಮುಖ್ಯ. ಸಾಹುಕಾರ್ ಸಖಾಫ್ ಅವರು ಹಿಂದೂ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಮೂಲಕ ಅಂತಹ ಸೌಹಾರ್ದವನ್ನು ಬೆಸೆಯುವ ಕೆಲಸ ಮಾಡಿದ್ದಾರೆ. ಅವರಿಗೆ ನಾವೆಲ್ಲರೂ ಆಭಾರಿಗಳಾಗಿರುತ್ತೇವೆ’ ಎಂದು ಸ್ಥಳೀಯರಾದ ಬೋರಯ್ಯ ಹೇಳಿದರು.</p>.<div><blockquote>ಬಸವೇಶ್ವರ ದೇವಾಲಯನ್ನು ನಾನು ನಿರ್ಮಿಸಬೇಕು ಎಂಬುದು ಆ ಶಿವನ ಇಚ್ಛೆಯಾಗಿತ್ತು. ಇದರಲ್ಲಿ ನನ್ನದೇನೂ ಇಲ್ಲ. ಎಲ್ಲರೂ ಪ್ರೀತಿಯಿಂದ ಸೋದರರಾಗಿ ಬಾಳಬೇಕು. ಜಾತಿ, ಧರ್ಮಕ್ಕಿಂತ ಪ್ರೀತಿ ದೊಡ್ಡದು <br>ಎಸ್.ಕೆ. ಸಯ್ಯದ್ ಸಾದತ್ಉಲ್ಲಾ ಸಖಾಫ್, ಉದ್ಯಮಿ</blockquote><span class="attribution"></span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ (ರಾಮನಗರ):</strong> ಮುಸ್ಲಿಂ ಉದ್ಯಮಿಯೊಬ್ಬರು ಇಲ್ಲಿನ ಮಂಗಳವಾರಪೇಟೆಯಲ್ಲಿ ಸುಮಾರು ₹2 ಕೋಟಿ ವೆಚ್ಚದಲ್ಲಿ ಹಿಂದೂ ದೇವಾಲಯದ ಜೀರ್ಣೋದ್ಧಾರ ಮಾಡಿದ್ದಾರೆ. ದೇವರು – ಧರ್ಮದ ಹೆಸರಿನಲ್ಲಿ ಕಿತ್ತಾಟದ ರಾಜಕಾರಣದ ಈ ಹೊತ್ತಿನಲ್ಲಿ, ಎಸ್.ಕೆ. ಗ್ರೂಪ್ಸ್ ಮಾಲೀಕ ಸಾಹುಕಾರ್ ಎಸ್.ಕೆ. ಸೈಯದ್ ಸಾದತ್ಉಲ್ಲಾ ಸಖಾಫ್ ಅವರು ದೇವಸ್ಥಾನ ನಿರ್ಮಿಸಿ ಸಾಮರಸ್ಯದ ಸಂದೇಶ ಸಾರಿದ್ದಾರೆ.</p><p>ಶಿಥಿಲಾವಸ್ಥೆ ತಲುಪಿದ್ದ ಹಳೆಯ ದೇವಸ್ಥಾನದ ಜಾಗದಲ್ಲಿ ತಲೆ ಎತ್ತಿರುವ ಕಲ್ಲಿನಿಂದ ನಿರ್ಮಿಸಿರುವ ಈ ಭವ್ಯ ದೇವಸ್ಥಾನ, ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲೇ ಲೋಕಾರ್ಪಣೆಗೊಂಡಿದೆ. ಸ್ಥಳೀಯ ಶ್ರೀ ಬಸವೇಶ್ವರ ವಿನಾಯಕ ಯುವಕರ ಬಳಗದ ನೇತೃತ್ವದಲ್ಲಿ ನಡೆದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ, ವಿವಿಧ ಸಮುದಾಯಗಳ ಸ್ವಾಮೀಜಿಗಳು ಸಾಕ್ಷಿಯಾಗಿ ಹರಿಸಿದ್ದಾರೆ.</p><p><strong>ತ.ನಾಡಿನಿಂದ ಬಂತು ಕಲ್ಲು:</strong> ದೇವಾಲಯಕ್ಕೆ ಅಗತ್ಯವಿರುವ ಕಲ್ಲುಗಳನ್ನು ತಮಿಳುನಾಡಿನ ಮಹಾಬಲೇಶ್ವರನಿಂದ ತರಿಸಲಾಗಿದೆ. ನುರಿತ ಶಿಲ್ಪ ಕಲಾವಿದರನ್ನು ಕರೆಯಿಸಿ, ದೇವಸ್ಥಾನದ ವಿನ್ಯಾಸಕ್ಕೆ ಅನುಗುಣವಾಗಿ ಆವರಣದಲ್ಲೇ ಕಲ್ಲುಗಳನ್ನು ಕೆತ್ತಿಸಲಾಗಿದೆ. ದೇವಾಲಯದ ಮೂರ್ತಿ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಲಶೋತ್ಸವ ಪ್ರತಿಷ್ಠಾಪನೆ ಕಾರ್ಯದಲ್ಲಿ ಸಖಾಫ್ ಅವರು ಭಾಗಿಯಾಗಿದ್ದಾರೆ.</p><p>‘ಬಸವನ ಗುಡಿ’ ಎಂದೇ ಪ್ರಸಿದ್ಧಿಯಾಗಿರುವ ಮಂಗಳವಾರಪೇಟೆಯ ಬಸವೇಶ್ವರ ದೇವಾಲಯ ಪಟ್ಟಣದ ಪ್ರಮುಖ ಸ್ಥಳವಾಗಿದೆ. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರವಣಿಗೆ, ಪ್ರತಿಭಟನಾ ಮೆರವಣಿಗೆ, ರಾಜಕೀಯ ಪಕ್ಷಗಳ ರ್ಯಾಲಿಗಳು ಈ ದೇವಾಲಯದ ಆವರಣದಿಂದಲೇ ಆರಂಭವಾಗುತ್ತವೆ.</p><p>ಸನ್ಮಾನ: ಶಿಥಿಲಾವಸ್ಥೆ ತಲುಪಿದ್ದ ದೇವಾಲಯದ ಜೀರ್ಣೋದ್ಧಾರ ಮಾಡಬೇಕೆಂಬ ಸ್ಥಳೀಯರ ಒತ್ತಾಸೆಗೆ ಸಯ್ಯದ್ ಅವರು ಕೈ ಜೋಡಿಸಿದ್ದಾರೆ. ಅದಕ್ಕೆ ಅಗತ್ಯವಿದ್ದ ಸುಮಾರು ₹2 ಕೋಟಿ ಮೊತ್ತವನ್ನು ಭರಿಸಿದ್ದಾರೆ. ದೇವಾಲಯ ಲೋಕಾರ್ಪಣೆ ದಿನ ಸ್ಥಳೀಯರು ಸಯ್ಯದ್ ಅವರಿಗೆ ಅಭಿಮಾನದ ಸನ್ಮಾನ ಮಾಡಿದರು.</p>.<p><strong>ಹಿಂದೆಯೂ ನಿರ್ಮಿಸಿದ್ದರು</strong></p><p>ಬೀಡಿ ಸೇರಿದಂತೆ ವಿವಿಧ ಉದ್ಯಮಗಳನ್ನು ಹೊಂದಿರುವ ಸಯ್ಯದ್ ಅವರು ಯಾವುದೇ ಜಾತಿ–ಧರ್ಮ ನೋಡದೆ ದಾನ ಮಾಡುವುದರಲ್ಲಿ ಎತ್ತಿದ ಕೈ. 2010ರಲ್ಲಿ ತಾಲ್ಲೂಕಿನ ಎಸ್.ಎಂ. ಹಳ್ಳಿ ಗ್ರಾಮದಲ್ಲಿದ್ದ ದರ್ಗಾದ ಜೊತೆಗೆ ಶಿಥಿಲಾವಸ್ಥೆಯಲ್ಲಿದ್ದ ವೀರಭದ್ರೇಶ್ವರ ದೇವಾಲಯವನ್ನು ಸಹ ಜೀರ್ಣೋದ್ದಾರ ಮಾಡಿದ್ದರು ಎಂದು ಸ್ಥಳೀಯರು ನೆನೆದರು.</p><p>‘ಜಾತಿ ಮತ್ತು ಧರ್ಮಕ್ಕಿಂತ ಪ್ರೀತಿ ಮತ್ತು ಸೌಹಾರ್ದ ಮುಖ್ಯ. ಸಾಹುಕಾರ್ ಸಖಾಫ್ ಅವರು ಹಿಂದೂ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಮೂಲಕ ಅಂತಹ ಸೌಹಾರ್ದವನ್ನು ಬೆಸೆಯುವ ಕೆಲಸ ಮಾಡಿದ್ದಾರೆ. ಅವರಿಗೆ ನಾವೆಲ್ಲರೂ ಆಭಾರಿಗಳಾಗಿರುತ್ತೇವೆ’ ಎಂದು ಸ್ಥಳೀಯರಾದ ಬೋರಯ್ಯ ಹೇಳಿದರು.</p>.<div><blockquote>ಬಸವೇಶ್ವರ ದೇವಾಲಯನ್ನು ನಾನು ನಿರ್ಮಿಸಬೇಕು ಎಂಬುದು ಆ ಶಿವನ ಇಚ್ಛೆಯಾಗಿತ್ತು. ಇದರಲ್ಲಿ ನನ್ನದೇನೂ ಇಲ್ಲ. ಎಲ್ಲರೂ ಪ್ರೀತಿಯಿಂದ ಸೋದರರಾಗಿ ಬಾಳಬೇಕು. ಜಾತಿ, ಧರ್ಮಕ್ಕಿಂತ ಪ್ರೀತಿ ದೊಡ್ಡದು <br>ಎಸ್.ಕೆ. ಸಯ್ಯದ್ ಸಾದತ್ಉಲ್ಲಾ ಸಖಾಫ್, ಉದ್ಯಮಿ</blockquote><span class="attribution"></span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>