<p><strong>ಕನಕಪುರ</strong>: ತಾಲ್ಲೂಕಿನ ಕೂನೂರು ಬಳಿ ಜೋಡಿ ಆನೆಗಳು ಕಾಣಿಸಿಕೊಂಡು ಭತ್ತ, ರಾಗಿ, ಬಾಳೆ ಗಿಡಗಳನ್ನು ನಾಶಗೊಳಿಸಿವೆ. ಇದು ರೈತರಲ್ಲಿ ಆತಂಕ ಸೃಷ್ಟಿಸಿದೆ.</p>.<p>ಕಳೆದ ಒಂದು ವಾರದಿಂದ ಆನೆಗಳು ಜಮೀನಿನಲ್ಲಿ ಕಾಣಿಸಿಕೊಂಡಿದ್ದು ಕೂನೂರು, ಸಿದ್ದೇಶ್ವರನದೊಡ್ಡಿ, ಹುಲಿಬೆಲೆ ಬೆಕ್ಕೆಗುಡದ ದೊಡ್ಡಿ, ಕರಿರಾಯರದೊಡ್ಡಿ ಭಾಗದಲ್ಲಿ ಓಡಾಡುತ್ತಿವೆ.</p>.<p>ಸಂಜೆ 6ಗಂಟೆ ಆಗುತ್ತಿದ್ದಂತೆ ಜಮೀನು ಕಡೆ ಓಡಾಡುವುದು ಕಷ್ಟವಾಗಿದೆ. ಯಾವ ಸಂದರ್ಭದಲ್ಲಿ ದಾಳಿ ನಡೆಸುತ್ತವೆ ಎಂಬ ಭಯದಲ್ಲಿ ಗ್ರಾಮಸ್ಥರಿದ್ದಾರೆ.</p>.<p>ಶ್ರೀನಿವಾಸನಹಳ್ಳಿ, ತೇರಿನದೊಡ್ಡಿ, ನಿಡಗಲ್ಲು, ಒರಳಗಲ್ಲು ಗ್ರಾಮದಲ್ಲಿ ಆನೆ ದಾಳಿಯಿಂದ ಒಬ್ಬೊಬ್ಬರು ರೈತರು ಸಾವನ್ನಪ್ಪಿದ್ದಾರೆ. ಕೂನೂರು ಬಳಿ ರೈತರು ಒಬ್ಬರ ಮೇಲೆ ಆನೆ ದಾಳಿ ಮಾಡಿ ಕಾಲು ಕೈ ಕಳೆದುಕೊಂಡಿದ್ದಾರೆ.</p>.<p>ಭಾನುವಾರ ರಾತ್ರಿ ಲಕ್ಷ್ಮಮ್ಮ ನಾಗರಾಜು ಅವರ ಭತ್ತದ ಗದ್ದೆ ಹಾಗ ಹುಲಿಬಲೆ ಸಮೀಪದ ಹನುಮಗೌಡ ಅವರ ಜಮೀನಿನಲ್ಲಿ ಭತ್ತದ ಫಲಸು ಹಾಳು ಮಾಡಿವೆ. </p>.<p>ಕಾಡಾನೆಗಳು ನಿರಂತರವಾಗಿ ದಾಳಿ ನಡೆಸಿ ಬೆಳೆಗಳನ್ನು ನಾಶಗೊಳಿಸುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಸಂತ್ರಸ್ತೆ ಲಕ್ಷ್ಮಮ್ಮ ನಾಗರಾಜು ಆರೋಪಿಸಿದರು.</p>.<p>ಸರ್ಕಾರದಿಂದ ಸಿಗುವ ಸಣ್ಣ ಪರಿಹಾರದಿಂದ ರೈತರಿಗೆ ಯಾವುದೇ ಲಾಭ ಸಿಗುತ್ತಿಲ್ಲ. ಅರಣ್ಯ ಇಲಾಖೆ ಕಾಡಾನೆಗಳನ್ನು ಶಾಶ್ವತವಾಗಿ ಅರಣ್ಯಕ್ಕೆ ಓಡಿಸಬೇಕು ಎನ್ನುತ್ತಾರೆ ಹುಲಿಬೆಲೆ ನರಸಿಂಹೇಗೌಡ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ</strong>: ತಾಲ್ಲೂಕಿನ ಕೂನೂರು ಬಳಿ ಜೋಡಿ ಆನೆಗಳು ಕಾಣಿಸಿಕೊಂಡು ಭತ್ತ, ರಾಗಿ, ಬಾಳೆ ಗಿಡಗಳನ್ನು ನಾಶಗೊಳಿಸಿವೆ. ಇದು ರೈತರಲ್ಲಿ ಆತಂಕ ಸೃಷ್ಟಿಸಿದೆ.</p>.<p>ಕಳೆದ ಒಂದು ವಾರದಿಂದ ಆನೆಗಳು ಜಮೀನಿನಲ್ಲಿ ಕಾಣಿಸಿಕೊಂಡಿದ್ದು ಕೂನೂರು, ಸಿದ್ದೇಶ್ವರನದೊಡ್ಡಿ, ಹುಲಿಬೆಲೆ ಬೆಕ್ಕೆಗುಡದ ದೊಡ್ಡಿ, ಕರಿರಾಯರದೊಡ್ಡಿ ಭಾಗದಲ್ಲಿ ಓಡಾಡುತ್ತಿವೆ.</p>.<p>ಸಂಜೆ 6ಗಂಟೆ ಆಗುತ್ತಿದ್ದಂತೆ ಜಮೀನು ಕಡೆ ಓಡಾಡುವುದು ಕಷ್ಟವಾಗಿದೆ. ಯಾವ ಸಂದರ್ಭದಲ್ಲಿ ದಾಳಿ ನಡೆಸುತ್ತವೆ ಎಂಬ ಭಯದಲ್ಲಿ ಗ್ರಾಮಸ್ಥರಿದ್ದಾರೆ.</p>.<p>ಶ್ರೀನಿವಾಸನಹಳ್ಳಿ, ತೇರಿನದೊಡ್ಡಿ, ನಿಡಗಲ್ಲು, ಒರಳಗಲ್ಲು ಗ್ರಾಮದಲ್ಲಿ ಆನೆ ದಾಳಿಯಿಂದ ಒಬ್ಬೊಬ್ಬರು ರೈತರು ಸಾವನ್ನಪ್ಪಿದ್ದಾರೆ. ಕೂನೂರು ಬಳಿ ರೈತರು ಒಬ್ಬರ ಮೇಲೆ ಆನೆ ದಾಳಿ ಮಾಡಿ ಕಾಲು ಕೈ ಕಳೆದುಕೊಂಡಿದ್ದಾರೆ.</p>.<p>ಭಾನುವಾರ ರಾತ್ರಿ ಲಕ್ಷ್ಮಮ್ಮ ನಾಗರಾಜು ಅವರ ಭತ್ತದ ಗದ್ದೆ ಹಾಗ ಹುಲಿಬಲೆ ಸಮೀಪದ ಹನುಮಗೌಡ ಅವರ ಜಮೀನಿನಲ್ಲಿ ಭತ್ತದ ಫಲಸು ಹಾಳು ಮಾಡಿವೆ. </p>.<p>ಕಾಡಾನೆಗಳು ನಿರಂತರವಾಗಿ ದಾಳಿ ನಡೆಸಿ ಬೆಳೆಗಳನ್ನು ನಾಶಗೊಳಿಸುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಸಂತ್ರಸ್ತೆ ಲಕ್ಷ್ಮಮ್ಮ ನಾಗರಾಜು ಆರೋಪಿಸಿದರು.</p>.<p>ಸರ್ಕಾರದಿಂದ ಸಿಗುವ ಸಣ್ಣ ಪರಿಹಾರದಿಂದ ರೈತರಿಗೆ ಯಾವುದೇ ಲಾಭ ಸಿಗುತ್ತಿಲ್ಲ. ಅರಣ್ಯ ಇಲಾಖೆ ಕಾಡಾನೆಗಳನ್ನು ಶಾಶ್ವತವಾಗಿ ಅರಣ್ಯಕ್ಕೆ ಓಡಿಸಬೇಕು ಎನ್ನುತ್ತಾರೆ ಹುಲಿಬೆಲೆ ನರಸಿಂಹೇಗೌಡ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>