ಕಂದಾಯ ವಿಭಾಗದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಅರ್ಜಿಗಳನ್ನು ಹಿರಿತನದ ಆಧಾರಲ್ಲಿ ಪರಿಗಣಿಸುತ್ತಿಲ್ಲ. ಹಣ ಕೊಟ್ಟವರ ಕೆಲಸ ತ್ವರಿತವಾಗಿ ಆಗುತ್ತದೆ. ಪೌತಿಖಾತೆ, ನಿವೇಶಗಳು, ವಾಣಿಜ್ಯ ಆಸ್ತಿಗಳ ಕಂದಾಯ ನಿಗದಿ, ಹೊಸ ಲೇಔಟ್ಗಳಿಗೆ ಅನುಮತಿ, ಕಟ್ಟಡ ಪರವಾನಗಿ ಸೇರಿ ವಿವಿಧ ಕೆಲಸಗಳಿಗೆ ನಿತ್ಯವೂ ಅಲೆಯಬೇಕಿದೆ ಎಂದು ಹಲವರು ಎಸಿಬಿಗೆ ದೂರು ನೀಡಿದ್ದರು.