ದರೋಡೆ ಸೇರಿದಂತೆ ನಾಲ್ಕು ಪ್ರಕರಣಗಳಲ್ಲಿ ಆರೋಪಿಯಾಗಿರುವ ರೂಪೇಶ್ (22) ನ್ಯಾಯಲಯದ ವಿಚಾರಣೆಗೆ ಸತತ ಗೈರುಹಾಜರಾಗಿದ್ದ. ನ್ಯಾಯಾಲಯ ಆತನ ವಿರುದ್ಧ ವಾರಂಟ್ ಹೊರಡಿಸಿತ್ತು. ಆರೋಪಿ ಶುಭಮಂಗಳ ಸಭಾ ಭವನದ ಬಳಿ ಇರುವ ಮಾಹಿತಿ ಪಡೆದ ಮುಖ್ಯ ಕಾನ್ಸ್ಟೆಬಲ್ ಮಂಜುನಾಥ್ ಅವರು ವಾರಂಟ್ ಜಾರಿ ಮಾಡಲು ಮುಂದಾಗಿದ್ದಾರೆ. ಅವರನ್ನು ಚರಂಡಿಗೆ ತಳ್ಳಿದ ಆರೋಪಿ ಬೈಕ್ನ ಕನ್ನಡಿ ಒಡೆದು ಚೂರುಗಳನ್ನು ನುಂಗಿದ್ದಾನೆ.