ಆನವಟ್ಟಿಯಲ್ಲಿ ನಾಟಕ ಪ್ರದರ್ಶನ ಇನ್ನೊಮ್ಮೆ ಆಯೋಜಿಸುವ ಮೊದಲು ಉಡುತಡಿ ಇಲ್ಲವೇ ಬಳ್ಳಿಗಾವಿಯಿಂದ ಪಾದಯಾತ್ರೆ ಮಾಡಲಿದ್ದೇವೆ. ನಾಟಕ ವೀಕ್ಷಣೆಗೆ ಜಿಲ್ಲೆಯ ಎಲ್ಲ ಶಾಸಕರು, ಸಂಸದರನ್ನು ಆಹ್ವಾನಿಸಲಿದ್ದೇವೆ.ಅವರು ಕುಳಿತುಕೊಂಡು ನೋಡಲಿ. ಏನಾದರೂ ಇದ್ದರೆ ಚರ್ಚಿಸಲಿ. ಎಲ್ಲ ರಂಗ ತಂಡದವರು, ಕಲಾವಿದರು ಎಲ್ಲರೂ ಸೇರಿ ಆ ನಾಟಕ ಕುಳಿತು ನೋಡಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಕೊಟ್ರಪ್ಪ ಹೇಳಿದರು.