<p><strong>ಶಿರಾಳಕೊಪ್ಪ (ಶಿಕಾರಿಪುರ):</strong> ರಕ್ತದಾನದ ಮೂಲಕ ಯುವಜನತೆ ಸಮಾಜದ ಆರೋಗ್ಯ ಕಾಪಾಡಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿ ಡಾ.ಗಿರಿರಾಜ್ ಇಸಳೂರು ಹೇಳಿದರು.</p>.<p>ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿವಿಧ ಸಂಘಟನೆಯ ಸಹಯೋಗದಲ್ಲಿ ಈಚೆಗೆ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.</p>.<p>ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಅದು ದಾನಿಗಳಿಂದ ಮಾತ್ರ ಸಾಕಾರಗೊಳ್ಳುತ್ತದೆ. ಪ್ರತಿ ರಕ್ತದಾನಿಯೂ ಸಮಾಜದಲ್ಲಿ ಒಬ್ಬ ಹೀರೊ ಎಂದರೆ ತಪ್ಪಾಗಲಾರದು ಎಂದು ಮಕ್ಕಳ ತಜ್ಞ ಡಾ.ಮಹಾಲಿಂಗ ಕೊಲ್ಲೆ ಹೇಳಿದರು.</p>.<p>ಮಳೆಗಾಲದಲ್ಲಿ ರಕ್ತ ನಿಧಿಯಲ್ಲಿ ರಕ್ತದ ಕೊರತೆ ಹೆಚ್ಚಾಗುತ್ತದೆ. ಅದಕ್ಕಾಗಿ ಪಟ್ಟಣದ ಸಂಘ ಸಂಸ್ಥೆಗಳು ರಕ್ತದಾನ ಶಿಬಿರ ಆಯೋಜಿಸಲು ಮುಂದಾಗಬೇಕು ಎಂದು ಎಸ್ಐ ಸಂಘಟನೆಯ ಮೊಹಮ್ಮದ್ ಆಸಿಫ್ ಹೇಳಿದರು.</p>.<p>ಎಸ್ಐ, ಓಸಾಲಿಡ್ ಯೂಥ್ ಮೂಮೆಂಟ್, ಮೆಸ್ಕಾಂ, ಪೊಲೀಸ್ ಠಾಣೆ, ಕದಂಬ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚನ್ನಮಲ್ಲಿಕಾರ್ಜುನ ಐಟಿಐ ಕಾಲೇಜು, ಎಸ್ಜೆಪಿ ಐಟಿಐ ಕಾಲೇಜು ಸಹಕಾರದಿಂದ ದಾನಿಗಳಿಂದ ಸಂಗ್ರಹವಾದ 120 ಯೂನಿಟ್ ರಕ್ತವನ್ನು ಮೆಗ್ಗಾನ್ ರಕ್ತ ನಿಧಿಗೆ ನೀಡಲಾಯಿತು. </p>.<p>ಸಾಲಿಡಾರಿಟಿ ಯೂತ್ ಮೂಮೆಂಟ್ ವತಿಯಿಂದ ಆಶಾ ಕಾರ್ಯಕರ್ತರಾದ ಶಿಲ್ಪಾ, ಮುಬಾಶಿರ, ಜಯಮ್ಮ, ಧನಲಕ್ಷ್ಮಿ, ಭಾಗ್ಯ, ನಾಜಿಯಾ, ಲೀಲಾ, ರೂಪಾ ಅವರನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಾಳಕೊಪ್ಪ (ಶಿಕಾರಿಪುರ):</strong> ರಕ್ತದಾನದ ಮೂಲಕ ಯುವಜನತೆ ಸಮಾಜದ ಆರೋಗ್ಯ ಕಾಪಾಡಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿ ಡಾ.ಗಿರಿರಾಜ್ ಇಸಳೂರು ಹೇಳಿದರು.</p>.<p>ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿವಿಧ ಸಂಘಟನೆಯ ಸಹಯೋಗದಲ್ಲಿ ಈಚೆಗೆ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.</p>.<p>ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಅದು ದಾನಿಗಳಿಂದ ಮಾತ್ರ ಸಾಕಾರಗೊಳ್ಳುತ್ತದೆ. ಪ್ರತಿ ರಕ್ತದಾನಿಯೂ ಸಮಾಜದಲ್ಲಿ ಒಬ್ಬ ಹೀರೊ ಎಂದರೆ ತಪ್ಪಾಗಲಾರದು ಎಂದು ಮಕ್ಕಳ ತಜ್ಞ ಡಾ.ಮಹಾಲಿಂಗ ಕೊಲ್ಲೆ ಹೇಳಿದರು.</p>.<p>ಮಳೆಗಾಲದಲ್ಲಿ ರಕ್ತ ನಿಧಿಯಲ್ಲಿ ರಕ್ತದ ಕೊರತೆ ಹೆಚ್ಚಾಗುತ್ತದೆ. ಅದಕ್ಕಾಗಿ ಪಟ್ಟಣದ ಸಂಘ ಸಂಸ್ಥೆಗಳು ರಕ್ತದಾನ ಶಿಬಿರ ಆಯೋಜಿಸಲು ಮುಂದಾಗಬೇಕು ಎಂದು ಎಸ್ಐ ಸಂಘಟನೆಯ ಮೊಹಮ್ಮದ್ ಆಸಿಫ್ ಹೇಳಿದರು.</p>.<p>ಎಸ್ಐ, ಓಸಾಲಿಡ್ ಯೂಥ್ ಮೂಮೆಂಟ್, ಮೆಸ್ಕಾಂ, ಪೊಲೀಸ್ ಠಾಣೆ, ಕದಂಬ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚನ್ನಮಲ್ಲಿಕಾರ್ಜುನ ಐಟಿಐ ಕಾಲೇಜು, ಎಸ್ಜೆಪಿ ಐಟಿಐ ಕಾಲೇಜು ಸಹಕಾರದಿಂದ ದಾನಿಗಳಿಂದ ಸಂಗ್ರಹವಾದ 120 ಯೂನಿಟ್ ರಕ್ತವನ್ನು ಮೆಗ್ಗಾನ್ ರಕ್ತ ನಿಧಿಗೆ ನೀಡಲಾಯಿತು. </p>.<p>ಸಾಲಿಡಾರಿಟಿ ಯೂತ್ ಮೂಮೆಂಟ್ ವತಿಯಿಂದ ಆಶಾ ಕಾರ್ಯಕರ್ತರಾದ ಶಿಲ್ಪಾ, ಮುಬಾಶಿರ, ಜಯಮ್ಮ, ಧನಲಕ್ಷ್ಮಿ, ಭಾಗ್ಯ, ನಾಜಿಯಾ, ಲೀಲಾ, ರೂಪಾ ಅವರನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>