ನಾವು ದೀವರಾದ ಬಳಿಕವೇ ಈಡಿಗರ ಜತೆ ಸೇರಿಕೊಂಡಿರುವುದು. ಹೀಗಾಗಿ ಜಾತಿ ಸಮೀಕ್ಷೆಯಲ್ಲಿ ದೀವರು ಎಂದೇ ನಮೂದಿಸೋಣ. ಈಡಿಗ ಎಂಬ ದೊಡ್ಡ ಸಮೂಹದಲ್ಲಿಯೇ ನಾವಿರುವುದರಿಂದ ಅವರೊಂದಿಗೆ ಸೇರಿ ಮುನ್ನಡೆಯೋಣ.
ಡಾ.ಎಸ್.ರಾಮಪ್ಪ ಧರ್ಮದರ್ಶಿ ಶ್ರೀ ಕ್ಷೇತ್ರ ಸಿಗಂದೂರು
ದೀವರು ಮತ್ತು ಈಡಿಗರು ಎಲ್ಲಾ ಒಂದೇ ಎಂಬ ಭಾವನೆ ಶಿವಮೊಗ್ಗ ಜಿಲ್ಲೆಯಲ್ಲಿ ಇದೆ. ಗಣತಿಯಲ್ಲಿ ದೀವರು ಎಂದು ಬರೆಸಿದರೂ ಒಟ್ಟಾರೆಯಾಗಿ ನಾವು ಈಡಿಗ ಪಂಗಡಕ್ಕೆ ಬರುತ್ತೇವೆ. ಉಪ ಜಾತಿಗಳ ನಿಖರ ಮಾಹಿತಿ ಇದ್ದರೆ ಒಳಿತು
ಡಾ.ರಾಜನಂದಿನಿ ಕಾಗೋಡು ಈಡಿಗ ಸಮಾಜದ ಪ್ರಮುಖರು
ಹೊಸನಗರದಲ್ಲಿ ದೀವರ ವಿದ್ಯಾವರ್ಧಕ ಸಂಘ ನೂರು ವರ್ಷಗಳ ಹಿಂದೆಯೇ ಆಗಿತ್ತು. ದೀವರು ಸಮುದಾಯದ ಅಸ್ಮಿತೆಯನ್ನು ಕಾಪಾಡಿಕೊಂಡು. ಮುಖ್ಯ ವಾಹಿನಿಯೊಂದಿಗೆ ಸಾಗೋಣ.
ಬಂಡಿ ರಾಮಚಂದ್ರ ಹೊಸನಗರ ಈಡಿಗ ಸಂಘದ ಅಧ್ಯಕ್ಷರು
ರಾಜ್ಯ ಸಂಘದೊಂದಿಗೆ ಸಮನ್ವಯತೆ ಸಾಧಿಸಿ ಒಟ್ಟು ಸಮುದಾಯವಾಗಿ ಎಲ್ಲರೂ ಕೂಡಿ ಸಮಾಜ ಕಟ್ಟುವ ಕೆಲಸ ಮಾಡೋಣ. ಆ ಮೂಲಕ ಸರ್ಕಾರಿ ಸೌಲಭ್ಯ ಪಡೆಯೋಣ.