<p><strong>ಶಿವಮೊಗ್ಗ</strong> : ಜಿಲ್ಲೆಯ ಮುಜರಾಯಿ ದೇವಸ್ಥಾನಗಳಲ್ಲಿ ‘ಧಾರ್ಮಿಕ ದತ್ತಿ ಇಲಾಖೆ, ಮುಜರಾಯಿ ದೇವಾಲಯ, ಕರ್ನಾಟಕ ಸರ್ಕಾರ’ ಎಂಬ ನಾಮಫಲಕ ಹಾಗೂ ಸುರಕ್ಷತೆಗೆ ಸಿಸಿ ಟಿವಿ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಲು ಕ್ರಮ ವಹಿಸಿ ಎಂದು ತಹಶೀಲ್ದಾರ್ಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದರು.</p>.<p>ಮುಜರಾಯಿ ‘ಸಿ’ ವರ್ಗದ ದೇವಾಲಯಗಳಲ್ಲಿ ವ್ಯವಸ್ಥಾಪನಾ ಸಮಿತಿ ರಚನೆ, ಜೀರ್ಣೋದ್ದಾರ ಹಾಗೂ ಅರ್ಚಕರ ನೇಮಕಾತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈಚೆಗೆ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>ಭದ್ರಾವತಿಯ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಕಾರ್ಯಕ್ರಮದಲ್ಲಿ ನಡೆದ ಹಣ ದುರುಪಯೋಗದ ಕುರಿತು ತಕ್ಷಣ ವರದಿ ಸಲ್ಲಿಸಲು ತಹಶೀಲ್ದಾರ್ಗಳಿಗೆ ಸೂಚಿಸಿದರು.</p>.<p>ಸೊರಬ ತಾಲ್ಲೂಕಿನ ಚಂದ್ರಗುತ್ತಿಯ ರೇಣುಕಾಂಬ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ದೇವಾಲಯಕ್ಕೆ ಹರಕೆ ರೂಪದಲ್ಲಿ ಬಂದಂತಹ ಸೀರೆಗಳನ್ನು ಶಿಷ್ಟಾಚಾರದ ನೆಪದಲ್ಲಿ ಮನಬಂದಂತೆ ಹಂಚಿಕೆ ಮಾಡುತ್ತಿದ್ದಾರೆ. ಹರಕೆ ರೂಪದಲ್ಲಿ ಸ್ವೀಕೃತವಾದ ಸೀರೆ, ಅಕ್ಕಿ, ಎಣ್ಣೆ ಇತರೆ ವಸ್ತುಗಳ ಬಗ್ಗೆ ಯಾವುದೇ ರಿಜಿಸ್ಟರ್ ನಿರ್ವಹಣೆ ಇಲ್ಲ. ದೇವಾಲಯಕ್ಕೆ ಬರುವ ಭಕ್ತರೊಂದಿಗೆ ಬಹಳ ಒರಟಾಗಿ ವರ್ತಿಸುತ್ತಾರೆ ಎಂದು ಸಭೆಯಲ್ಲಿ ಧಾರ್ಮಿಕ ಪರಿಷತ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆ ಬಗ್ಗೆ ವಿವರವಾದ ವರದಿ ನೀಡುವಂತೆ ಸೊರಬ ತಹಶೀಲ್ದಾರ್ಗೆ ಸೂಚಿಸಲಾಯಿತು.</p>.<p>ಸಾಗರದ ಮಹಾಗಣಪತಿ ದೇವಾಲಯದ 2024-25ನೇ ಸಾಲಿನ ಜಾತ್ರೆಯ ವೇಳೆ ಹೆಚ್ಚುವರಿ ಖರ್ಚು ಕುರಿತು ಹಾಗೂ 2025-26ನೇ ಸಾಲಿನಲ್ಲಿ ಸ್ಟಾಲ್ ಹರಾಜಿನಿಂದ ಸಂಗ್ರಹವಾದ ಮೊತ್ತವನ್ನು ವಿಳಂಬವಾಗಿ ದೇವಾಲಯದ ಖಾತೆಗೆ ಜಮಾ ಮಾಡಿರುವ ಬಗ್ಗೆಯೂ ಸಂಪೂರ್ಣ ವರದಿ ಸಲ್ಲಿಸುವಂತೆ ಡಿಸಿ ಸೂಚನೆ ನೀಡಿದರು.</p>.<p>ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ಜೇನುಕಲ್ಲಮ್ಮ ದೇವಸ್ಥಾನ ಸೇರಿದಂತೆ ‘ಸಿ’ ವರ್ಗದ 27 ದೇವಸ್ಥಾನಗಳಿಗೆ ಇದೇ ವೇಳೆ ವ್ಯವಸ್ಥಾಪನಾ ಸಮಿತಿ ರಚಿಸಲಾಯಿತು.</p>.<p>ಸಭೆಯಲ್ಲಿ ಧಾರ್ಮಿಕ ಪರಿಷತ್ ಸದಸ್ಯರಾದ ನಿವೃತ್ತ ನ್ಯಾಯಾಧೀಶ ಸಿ.ಸೆಲ್ವಕುಮಾರ್, ವಿದುಶಿ ಗೀತಾ ದಾತಾರ್, ಎಂ.ಶಿವಲಿಂಗಪ್ಪ, ವರಲಕ್ಷ್ಮೀ, ಎನ್. ಉಮಾಪತಿ, ಎಸ್.ಡಿ ಪ್ರವೀಣ್ ಕುಮಾರ್ ಹಾಜರಿದ್ದರು.</p>.<p>Quote - ಜಿಲ್ಲೆಯ ಅಧಿಸೂಚಿತ ದೇವಾಲಯಗಳಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇಧಿತ ವಲಯ ಎಂಬ ನಾಮಫಲಕ ಅಳವಡಿಸಿ ಆಯಾ ದೇವಸ್ಥಾನಗಳ ಆಸ್ತಿಯನ್ನು ಸರ್ವೆ ಮಾಡಿಸಿ ತಹಶೀಲ್ದಾರ್ಗಳು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿ ಗುರುದತ್ತ ಹೆಗಡೆ ಶಿವಮೊಗ್ಗ ಜಿಲ್ಲಾಧಿಕಾರಿ</p>.<p><strong>ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ; ವರದಿಗೆ ಸೂಚನೆ</strong> </p><p>ಶಿವಮೊಗ್ಗದ ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯದ ಅರ್ಚಕರು/ನೌಕರರು ಸ್ವ-ಇಚ್ಛೆಯ ಅನುಸಾರ ಸೇವಾದರಗಳ ಮುದ್ರಿಸಿ ಭಕ್ತಾದಿಗಳಿಗೆ ಹಂಚಿಕೆ ಮಾಡಿದ್ದಾರೆ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ದೇವಸ್ಥಾನದಲ್ಲಿ ಅರ್ಚಕರು ಸೇವಾದರ ಪಟ್ಟಿ ಅಳವಡಿಸಿಲ್ಲ. ಸಕ್ಷಮ ಪ್ರಾಧಿಕಾರದಿಂದ ಅನುಮತಿಯನ್ನೂ ಪಡೆಯದೇ ಭಕ್ತಾದಿಗಳಿಗೆ ರಶೀದಿ ನೀಡಿದ್ದಾರೆ. ಇದರಿಂದ ದೇವಾಲಯದ ಆದಾಯ ಕುಂಠಿತವಾಗಿದೆ. ರಥೋತ್ಸವದ ಆಮಂತ್ರಣ ಪತ್ರಿಕೆಯನ್ನು ಅನುಮತಿ ಇಲ್ಲದೆ ಮುದ್ರಿಸಿದ್ದು ಸೇವಾವಿವರದ ಮೊತ್ತವನ್ನು ಸ್ವ- ಇಚ್ಛೆಯಿಂದ ಮುದ್ರಿಸಿದ್ದಾರೆ. ಸಾರ್ವಜನಿಕರಿಂದ ಪಡೆದ ಹಣವನ್ನು ದೇವಸ್ಥಾನದ ಖಾತೆಗೆ ಜಮಾ ಮಾಡದೇ ಲೋಪವೆಸಗಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು. ಆ ಬಗ್ಗೆ ವಿವರವಾದ ವರದಿ ನೀಡಲು ಶಿವಮೊಗ್ಗ ತಹಶೀಲ್ದಾರ್ಗೆ ಡಿಸಿ ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong> : ಜಿಲ್ಲೆಯ ಮುಜರಾಯಿ ದೇವಸ್ಥಾನಗಳಲ್ಲಿ ‘ಧಾರ್ಮಿಕ ದತ್ತಿ ಇಲಾಖೆ, ಮುಜರಾಯಿ ದೇವಾಲಯ, ಕರ್ನಾಟಕ ಸರ್ಕಾರ’ ಎಂಬ ನಾಮಫಲಕ ಹಾಗೂ ಸುರಕ್ಷತೆಗೆ ಸಿಸಿ ಟಿವಿ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಲು ಕ್ರಮ ವಹಿಸಿ ಎಂದು ತಹಶೀಲ್ದಾರ್ಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದರು.</p>.<p>ಮುಜರಾಯಿ ‘ಸಿ’ ವರ್ಗದ ದೇವಾಲಯಗಳಲ್ಲಿ ವ್ಯವಸ್ಥಾಪನಾ ಸಮಿತಿ ರಚನೆ, ಜೀರ್ಣೋದ್ದಾರ ಹಾಗೂ ಅರ್ಚಕರ ನೇಮಕಾತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈಚೆಗೆ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>ಭದ್ರಾವತಿಯ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಕಾರ್ಯಕ್ರಮದಲ್ಲಿ ನಡೆದ ಹಣ ದುರುಪಯೋಗದ ಕುರಿತು ತಕ್ಷಣ ವರದಿ ಸಲ್ಲಿಸಲು ತಹಶೀಲ್ದಾರ್ಗಳಿಗೆ ಸೂಚಿಸಿದರು.</p>.<p>ಸೊರಬ ತಾಲ್ಲೂಕಿನ ಚಂದ್ರಗುತ್ತಿಯ ರೇಣುಕಾಂಬ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ದೇವಾಲಯಕ್ಕೆ ಹರಕೆ ರೂಪದಲ್ಲಿ ಬಂದಂತಹ ಸೀರೆಗಳನ್ನು ಶಿಷ್ಟಾಚಾರದ ನೆಪದಲ್ಲಿ ಮನಬಂದಂತೆ ಹಂಚಿಕೆ ಮಾಡುತ್ತಿದ್ದಾರೆ. ಹರಕೆ ರೂಪದಲ್ಲಿ ಸ್ವೀಕೃತವಾದ ಸೀರೆ, ಅಕ್ಕಿ, ಎಣ್ಣೆ ಇತರೆ ವಸ್ತುಗಳ ಬಗ್ಗೆ ಯಾವುದೇ ರಿಜಿಸ್ಟರ್ ನಿರ್ವಹಣೆ ಇಲ್ಲ. ದೇವಾಲಯಕ್ಕೆ ಬರುವ ಭಕ್ತರೊಂದಿಗೆ ಬಹಳ ಒರಟಾಗಿ ವರ್ತಿಸುತ್ತಾರೆ ಎಂದು ಸಭೆಯಲ್ಲಿ ಧಾರ್ಮಿಕ ಪರಿಷತ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆ ಬಗ್ಗೆ ವಿವರವಾದ ವರದಿ ನೀಡುವಂತೆ ಸೊರಬ ತಹಶೀಲ್ದಾರ್ಗೆ ಸೂಚಿಸಲಾಯಿತು.</p>.<p>ಸಾಗರದ ಮಹಾಗಣಪತಿ ದೇವಾಲಯದ 2024-25ನೇ ಸಾಲಿನ ಜಾತ್ರೆಯ ವೇಳೆ ಹೆಚ್ಚುವರಿ ಖರ್ಚು ಕುರಿತು ಹಾಗೂ 2025-26ನೇ ಸಾಲಿನಲ್ಲಿ ಸ್ಟಾಲ್ ಹರಾಜಿನಿಂದ ಸಂಗ್ರಹವಾದ ಮೊತ್ತವನ್ನು ವಿಳಂಬವಾಗಿ ದೇವಾಲಯದ ಖಾತೆಗೆ ಜಮಾ ಮಾಡಿರುವ ಬಗ್ಗೆಯೂ ಸಂಪೂರ್ಣ ವರದಿ ಸಲ್ಲಿಸುವಂತೆ ಡಿಸಿ ಸೂಚನೆ ನೀಡಿದರು.</p>.<p>ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ಜೇನುಕಲ್ಲಮ್ಮ ದೇವಸ್ಥಾನ ಸೇರಿದಂತೆ ‘ಸಿ’ ವರ್ಗದ 27 ದೇವಸ್ಥಾನಗಳಿಗೆ ಇದೇ ವೇಳೆ ವ್ಯವಸ್ಥಾಪನಾ ಸಮಿತಿ ರಚಿಸಲಾಯಿತು.</p>.<p>ಸಭೆಯಲ್ಲಿ ಧಾರ್ಮಿಕ ಪರಿಷತ್ ಸದಸ್ಯರಾದ ನಿವೃತ್ತ ನ್ಯಾಯಾಧೀಶ ಸಿ.ಸೆಲ್ವಕುಮಾರ್, ವಿದುಶಿ ಗೀತಾ ದಾತಾರ್, ಎಂ.ಶಿವಲಿಂಗಪ್ಪ, ವರಲಕ್ಷ್ಮೀ, ಎನ್. ಉಮಾಪತಿ, ಎಸ್.ಡಿ ಪ್ರವೀಣ್ ಕುಮಾರ್ ಹಾಜರಿದ್ದರು.</p>.<p>Quote - ಜಿಲ್ಲೆಯ ಅಧಿಸೂಚಿತ ದೇವಾಲಯಗಳಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇಧಿತ ವಲಯ ಎಂಬ ನಾಮಫಲಕ ಅಳವಡಿಸಿ ಆಯಾ ದೇವಸ್ಥಾನಗಳ ಆಸ್ತಿಯನ್ನು ಸರ್ವೆ ಮಾಡಿಸಿ ತಹಶೀಲ್ದಾರ್ಗಳು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿ ಗುರುದತ್ತ ಹೆಗಡೆ ಶಿವಮೊಗ್ಗ ಜಿಲ್ಲಾಧಿಕಾರಿ</p>.<p><strong>ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ; ವರದಿಗೆ ಸೂಚನೆ</strong> </p><p>ಶಿವಮೊಗ್ಗದ ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯದ ಅರ್ಚಕರು/ನೌಕರರು ಸ್ವ-ಇಚ್ಛೆಯ ಅನುಸಾರ ಸೇವಾದರಗಳ ಮುದ್ರಿಸಿ ಭಕ್ತಾದಿಗಳಿಗೆ ಹಂಚಿಕೆ ಮಾಡಿದ್ದಾರೆ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ದೇವಸ್ಥಾನದಲ್ಲಿ ಅರ್ಚಕರು ಸೇವಾದರ ಪಟ್ಟಿ ಅಳವಡಿಸಿಲ್ಲ. ಸಕ್ಷಮ ಪ್ರಾಧಿಕಾರದಿಂದ ಅನುಮತಿಯನ್ನೂ ಪಡೆಯದೇ ಭಕ್ತಾದಿಗಳಿಗೆ ರಶೀದಿ ನೀಡಿದ್ದಾರೆ. ಇದರಿಂದ ದೇವಾಲಯದ ಆದಾಯ ಕುಂಠಿತವಾಗಿದೆ. ರಥೋತ್ಸವದ ಆಮಂತ್ರಣ ಪತ್ರಿಕೆಯನ್ನು ಅನುಮತಿ ಇಲ್ಲದೆ ಮುದ್ರಿಸಿದ್ದು ಸೇವಾವಿವರದ ಮೊತ್ತವನ್ನು ಸ್ವ- ಇಚ್ಛೆಯಿಂದ ಮುದ್ರಿಸಿದ್ದಾರೆ. ಸಾರ್ವಜನಿಕರಿಂದ ಪಡೆದ ಹಣವನ್ನು ದೇವಸ್ಥಾನದ ಖಾತೆಗೆ ಜಮಾ ಮಾಡದೇ ಲೋಪವೆಸಗಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು. ಆ ಬಗ್ಗೆ ವಿವರವಾದ ವರದಿ ನೀಡಲು ಶಿವಮೊಗ್ಗ ತಹಶೀಲ್ದಾರ್ಗೆ ಡಿಸಿ ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>