<p><strong>ಹೊಸನಗರ:</strong> ‘ಪ್ರತಿಯೊಬ್ಬರೂ ತಮ್ಮ ದುಡಿಮೆಯ ಒಂದು ಭಾಗವನ್ನು ಪರೋಪಕಾರಕ್ಕೆ ದಾನ ಮಾಡಿದಲ್ಲಿ ಮಾತ್ರವೇ ಕಲಿಯುಗದಲ್ಲಿ ಪುಣ್ಯ ಪ್ರಾಪ್ತಿಯಾಗುವುದು’ ಎಂದು ಮೂಲೆಗದ್ದೆ ಸದಾಶಿವ ಶಿವಯೋಗಶ್ರಮದ ಪೀಠಾಧ್ಯಕ್ಷ ಅಭಿನವ ಚನ್ನಬಸವ ಸ್ವಾಮೀಜಿ ತಿಳಿಸಿದರು.</p>.<p>ಪಟ್ಟಣದ ಮಾವಿನಕೊಪ್ಪ ಗ್ರಾಮದಲ್ಲಿ ₹ 3 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಗಂಗಾಧರೇಶ್ವರ ಹಾಗೂ ವಿವಿಧ ಪರಿವಾರ ದೇವರ ನೂತನ ದೇವಸ್ಥಾನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಆಶೀರ್ವಚನ ನೀಡಿದರು.</p>.<p>‘ಪ್ರತಿಯೊಬ್ಬರೂ ತಾವು ಗಳಿಸಿದನ್ನು ಸಕಾರ್ಯಗಳಿಗೆ ಬಳಸಬೇಕು. ಇಡೀ ವಿಶ್ವದಲ್ಲಿ ಭಕ್ತಿಗೆ ಒಲಿಯುವನು ಎಂದರೆ ದೇವರು ಮಾತ್ರವೇ. ಸದಾಚಾರ, ಸದ್ಭಕ್ತಿಯಿಂದಲೇ ದೈವಕೃಪೆ ಪ್ರಾಪ್ತಿಯ ಸನ್ಮಾರ್ಗ’ ಎಂದು ಹೇಳಿದರು.</p>.<p>ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್, ಉದ್ಯಮಿ ಮಹೇಂದ್ರ, ಹಿರಿಯರಾದ ಶ್ರೀನಿವಾಸ್ ಕಾಮತ್, ನಿತಿನ್ ನಾರಾಯಣ್, ಸುರೇಶ ಆಚಾರ್ಯ ಇದ್ದರು. ದೇಗುಲ ನಿರ್ಮಾಣಕ್ಕೆ ದೇಣಿಗೆ ನೀಡಿದ ಅನೇಕರನ್ನು ದೇವಸ್ಥಾನ ಆಡಳಿತ ಸಮಿತಿ ಪರವಾಗಿ ಸ್ವಾಮೀಜಿ ಸನ್ಮಾನಿಸಿದರು.<br /> ಸುಜಾತಾ ಸುರೇಶ ಕಾರ್ಯಕ್ರಮ ನಿರೂಪಿಸಿದರು. ಗೌತಮ್ ಕುಮಾರ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸನಗರ:</strong> ‘ಪ್ರತಿಯೊಬ್ಬರೂ ತಮ್ಮ ದುಡಿಮೆಯ ಒಂದು ಭಾಗವನ್ನು ಪರೋಪಕಾರಕ್ಕೆ ದಾನ ಮಾಡಿದಲ್ಲಿ ಮಾತ್ರವೇ ಕಲಿಯುಗದಲ್ಲಿ ಪುಣ್ಯ ಪ್ರಾಪ್ತಿಯಾಗುವುದು’ ಎಂದು ಮೂಲೆಗದ್ದೆ ಸದಾಶಿವ ಶಿವಯೋಗಶ್ರಮದ ಪೀಠಾಧ್ಯಕ್ಷ ಅಭಿನವ ಚನ್ನಬಸವ ಸ್ವಾಮೀಜಿ ತಿಳಿಸಿದರು.</p>.<p>ಪಟ್ಟಣದ ಮಾವಿನಕೊಪ್ಪ ಗ್ರಾಮದಲ್ಲಿ ₹ 3 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಗಂಗಾಧರೇಶ್ವರ ಹಾಗೂ ವಿವಿಧ ಪರಿವಾರ ದೇವರ ನೂತನ ದೇವಸ್ಥಾನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಆಶೀರ್ವಚನ ನೀಡಿದರು.</p>.<p>‘ಪ್ರತಿಯೊಬ್ಬರೂ ತಾವು ಗಳಿಸಿದನ್ನು ಸಕಾರ್ಯಗಳಿಗೆ ಬಳಸಬೇಕು. ಇಡೀ ವಿಶ್ವದಲ್ಲಿ ಭಕ್ತಿಗೆ ಒಲಿಯುವನು ಎಂದರೆ ದೇವರು ಮಾತ್ರವೇ. ಸದಾಚಾರ, ಸದ್ಭಕ್ತಿಯಿಂದಲೇ ದೈವಕೃಪೆ ಪ್ರಾಪ್ತಿಯ ಸನ್ಮಾರ್ಗ’ ಎಂದು ಹೇಳಿದರು.</p>.<p>ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್, ಉದ್ಯಮಿ ಮಹೇಂದ್ರ, ಹಿರಿಯರಾದ ಶ್ರೀನಿವಾಸ್ ಕಾಮತ್, ನಿತಿನ್ ನಾರಾಯಣ್, ಸುರೇಶ ಆಚಾರ್ಯ ಇದ್ದರು. ದೇಗುಲ ನಿರ್ಮಾಣಕ್ಕೆ ದೇಣಿಗೆ ನೀಡಿದ ಅನೇಕರನ್ನು ದೇವಸ್ಥಾನ ಆಡಳಿತ ಸಮಿತಿ ಪರವಾಗಿ ಸ್ವಾಮೀಜಿ ಸನ್ಮಾನಿಸಿದರು.<br /> ಸುಜಾತಾ ಸುರೇಶ ಕಾರ್ಯಕ್ರಮ ನಿರೂಪಿಸಿದರು. ಗೌತಮ್ ಕುಮಾರ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>