ಶುಕ್ರವಾರ ಸಂಜೆ ಅಡಿಕೆ ತೋಟದಲ್ಲಿ ಮಲ್ಲಿಕಾರ್ಜುನ ಅವರು ಅಡಿಕೆ ಗೊನೆ ಕೀಳುತ್ತಿದ್ದಾಗ ಕಡಜದ ಗೂಡಿಗೆ ಆಕಸ್ಮಿಕವಾಗಿ ಹಾನಿ ಮಾಡಿದ್ದರಿಂದ ಒಮ್ಮೆಲೇ ಕಡಜಗಳು ಗುಂಪಾಗಿ ದಾಳಿ ನಡೆಸಿದ್ದವು. ಅವರು ಕೆಳಗೆ ಬಿದ್ದರು. ಸಮೀಪದಲ್ಲಿದ್ದ ತೋಟದಮಾಲೀಕ ನಂಜಪ್ಪ ಅವರ ಮೇಲೂ ಕಡಜಗಳು ದಾಳಿ ನಡೆಸಿದವು.ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.