‘ಆಲೂರು, ಹೊಸಕೊಪ್ಪ, ಕಾರಕೋಡ್ಲು, ದೇಮ್ಲಾಪುರ ಸೇರಿ ಅನೇಕ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಮಾರ್ಚ್ ತಿಂಗಳಲ್ಲಿ ಗಡಿಕಾಲುವೆ ನಿರ್ಮಿಸಿದೆ. ಅರಣ್ಯ ಸಂರಕ್ಷಣೆ ಕಾನೂನು ಹಳ್ಳಿಗರ ಜೀವನಕ್ಕೆ ಮಾರಕವಾಗಿದ್ದು, ತಿದ್ದುಪಡಿ ಕುರಿತು ಕೇಂದ್ರ, ರಾಜ್ಯ ಸರ್ಕಾರ ಗಂಭೀರವಾಗಿ ಯೋಚಿಸಬೇಕು. ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಕಾಟ ಹಳ್ಳಿಯಲ್ಲಿ ಹೆಚ್ಚಾಗಿದೆ. ಹಳ್ಳಿಗರು ಬೀದಿಗಿಳಿದರೆ ಅದರ ಪರಿಣಾಮವನ್ನು ಸರ್ಕಾರಎದುರಿಸಬೇಕಾಗುತ್ತದೆ’ ಎಂದರು.