ಶಿಕಾರಿಪುರ: ವನ್ಯಜೀವಿಯನ್ನು ಬೇಟೆಯಾಡಿದ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ಅಂಬ್ಲಿಗೊಳ್ಳ ಅರಣ್ಯ ವಲಯ ಅಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲ್ಲೂಕಿನ ನಿವಾಸಿಗಳಾದ ಮಂಜಪ್ಪ (60), ಈಶ್ವರಪ್ಪ (38) ಬಂಧಿತರು. ಆರೋಪಿಗಳಿಂದ ನಾಡ ಬಂದೂಕು ಹಾಗೂ ಮೃತವಾಗಿರುವ ಉಡವನ್ನು ವಶಕ್ಕೆ ಪಡೆಯಲಾಗಿದೆ.
ಅಂಬ್ಲಿಗೊಳ ವಲಯ ವ್ಯಾಪ್ತಿ ಡಿಎಫ್ಒ ಸಂತೋಷ್ ಕುಮಾರ್, ಎಸಿಎಫ್ ಸುರೇಶ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರ್ಎಫ್ಒ ಮಾಧವ, ಡಿಆರ್ಎಫ್ಒ ಪ್ರಕಾಶ್, ಚಂದ್ರಪ್ಪ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.