ಶಿವಮೊಗ್ಗದ ಮಲವಗೊಪ್ಪದ ಕಾಡಾ ಕಚೇರಿಯಲ್ಲಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಶನಿವಾರ ಐಸಿಸಿ ಸಭೆ ನಡೆಯಿತು
ಮಳೆಗಾಲ ಸ್ವಲ್ಪ ವಿಳಂಬವಾದರೂ ಅಲ್ಲಿಯವರೆಗೆ ನೀರು ಸಿಗುವಂತೆ ಈಗ ಲಭ್ಯವಿರುವ ನೀರಿನ ವಿತರಣೆಗೆ ಯೋಜನೆ ಹಾಕಿಕೊಳ್ಳಲಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡಲಿದ್ದೇವೆ
–ಡಾ.ಆರ್. ಸೆಲ್ವಮಣಿ ಶಿವಮೊಗ್ಗ ಜಿಲ್ಲಾಧಿಕಾರಿ
ಜಿಲ್ಲೆಯ ರೈತರಿಗೆ ಯಾವುದೇ ಕಾರಣಕ್ಕೂ ಭತ್ತ ಬೆಳೆಯದಂತೆ ಸೂಚನೆ ನೀಡಲಾಗಿದೆ. ಜಲಾಶಯದಲ್ಲಿರುವ ನೀರನ್ನು ಕುಡಿಯಲು ಕಬ್ಬು ಅಡಿಕೆ ತೆಂಗು ಸಂರಕ್ಷಣೆಗೆ ಬಳಸಿಕೊಳ್ಳಬಹುದಾಗಿದೆ
–ಡಾ.ವೆಂಕಟೇಶ್ ಎಂ.ವಿ ದಾವಣಗೆರೆ ಜಿಲ್ಲಾಧಿಕಾರಿ
ರೈತರಿಗೆ ಮೇ 15ರವರೆಗೆ ನೀರು ಬೇಕು. ಹೀಗಾಗಿ ಭದ್ರಾ ಮೇಲ್ದಂಡೆ ಯೋಜನೆಗೆ ಈಗ ಜಲಾಶಯದಲ್ಲಿರುವ ನೀರು ಹರಿಸುವ ಬದಲು ತುಂಗಾ ನದಿಯಿಂದ ನೀರು ತರಲು ಕ್ರಮ ಕೈಗೊಳ್ಳಬೇಕು
–ಎಚ್.ಆರ್.ಬಸವರಾಜಪ್ಪ ರೈತ ಸಂಘ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ
ಐಸಿಸಿ ತೀರ್ಮಾನಕ್ಕೆ ನಮ್ಮ ಒಪ್ಪಿಗೆ ಇದೆ. ಕಟ್ಟಕಡೆಯ ಅಚ್ಚುಕಟ್ಟುದಾರರವರೆಗೆ ನೀರು ನೀಡುವ ವ್ಯವಸ್ಥೆ ಸಮರ್ಪಕವಾಗಿ ಆಗಬೇಕು. ಅಕ್ರಮವಾಗಿ ನೀರೆತ್ತುವುದನ್ನು ನಿಲ್ಲಿಸಲು ಅಧಿಕಾರಿಗಳನ್ನು ನಿಯೋಜಿಸಬೇಕು
–ಕೆ.ಟಿ.ಗಂಗಾಧರ್ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ
ಭದ್ರಾ ಜಲಾಶಯದಲ್ಲಿ ನೀರಿನ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ. 12 ದಿನಗಳಲ್ಲಿ ಕೊನೆಯ ಭಾಗದ ರೈತರಿಗೆ ನೀರು ಸಿಗುವಂತೆ ಮಾಡುವುದು ದೊಡ್ಡ ಸವಾಲು. ಅದರ ಫಲಿತಾಂಶ ಮೊದಲ ಹಂತದಲ್ಲಿ ಗೊತ್ತಾಗಲಿದೆ. ಜಿಲ್ಲಾಡಳಿತ ಆ ಬಗ್ಗೆ ಗಮನಹರಿಸಲಿ
– ತೇಜಸ್ವಿ ಪಟೇಲ್ ರೈತ ಮುಖಂಡ ದಾವಣಗೆರೆ
ಅಕ್ರಮವಾಗಿ ಪಂಪ್ಸೆಟ್ ಹಾಕಿ ನೀರೆತ್ತುವವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡರೆ ಮಾತ್ರ ಕೊನೆಯ ಭಾಗದ ರೈತರಿಗೆ ನೀರು ಸಿಗಲಿದೆ. ಇಲ್ಲದಿದ್ದರೆ ಕಷ್ಟ
–ಎಚ್.ಆರ್.ಲಿಂಗರಾಜ ಶಾಮನೂರು ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ