<p><strong>ಸೊರಬ: </strong>ಒಗ್ಗಟ್ಟಿನ ದುಡಿಮೆ, ಕಠಿಣ ಪರಿಶ್ರಮ, ದೃಢ ನಿರ್ಧಾರ, ಕಾಲಕ್ಕೆ ಅನುಗುಣವಾಗಿ ತಾಂತ್ರಿಕತೆ ಅಳವಡಿಸಿಕೊಂಡರೆ ಕೃಷಿಯಲ್ಲೂ ಯಶಸ್ಸು ಸಾಧಿಸಬಹುದು ಎನ್ನುವುದನ್ನು ಈಡೂರು ಗ್ರಾಮದ ಅವಿಭಕ್ತ ಕುಟುಂಬದ ಸದಸ್ಯರು ತೋರಿಸಿಕೊಟ್ಟಿದ್ದಾರೆ.</p>.<p>ಜಾಗತೀಕರಣ ಹಾಗೂ ನಗರೀಕರಣದ ಪ್ರಭಾವದಿಂದ ಇಂದು ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಬದಲಾಗಿವೆ. ಆದರೆ, ತಾಲ್ಲೂಕಿನ ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯ ಈಡೂರು ಗ್ರಾಮದಲ್ಲಿ ಅವಿಭಕ್ತ ಕುಟುಂಬದ ಸದಸ್ಯರು ಒಟ್ಟಾಗಿ ಜೀವನ ನಡೆಸುವ ಜತೆಗೆ<br />ಕೃಷಿ ಕಾರ್ಯದಲ್ಲಿ ಒಗ್ಗಟ್ಟಿನಿಂದ ತೊಡಗಿಕೊಂಡಿರುವ ಪರಿಣಾಮ ಆರ್ಥಿಕ ಅಭಿವೃದ್ಧಿ ಕಾಣುತ್ತಿದ್ದಾರೆ.</p>.<p>42 ಜನ ಇರುವ ಕುಟುಂಬದಲ್ಲಿ ಪ್ರತಿಯೊಬ್ಬ ಸದಸ್ಯರ ನಡುವೆ ಪ್ರೀತಿ, ಸಹಬಾಳ್ವೆ ಇದೆ. ಸಹೋದರರಾದ ಹನುಮಂತಪ್ಪ, ಲಕ್ಷ್ಮಣಪ್ಪ, ಶಿವಾನಂದ, ಶೇಖರ, ಕೃಷ್ಣಪ್ಪ, ಪ್ರಭಾಕರ, ಜಗದೀಶ, ದಯಾನಂದ, ಪರಶುರಾಮ ಒಟ್ಟಿಗೆ ಕೃಷಿಯಲ್ಲಿ ತೊಡಗಿದ್ದಾರೆ. ಆ ಮೂಲಕ ಕೂಲಿಕಾರರ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.</p>.<p>‘ಆಧುನಿಕ ಪದ್ಧತಿ ಅಳವಡಿಸಿದ್ದರಿಂದ ನಮ್ಮ ಕುಟುಂಬಕ್ಕೆ ಕೃಷಿ ಸರಳವೂ, ಸುಲಭವೂ, ಲಾಭದಾಯಕವೂ ಆಗಿದೆ’ ಎನ್ನುತ್ತಾರೆ ಲಕ್ಷ್ಮಣಪ್ಪ.</p>.<p>ಒಟ್ಟು 45 ಎಕರೆ ಜಮೀನಿನಲ್ಲಿ 10 ಎಕರೆ ಅಡಿಕೆ, 3 ಎಕರೆ ಶುಂಠಿ, 5 ಎಕರೆ ಪಪ್ಪಾಯ, 5 ಎಕರೆ ಬಾಳೆ, 1 ಎಕರೆ ಶೇಂಗಾ, 5 ಎಕರೆ ಜೋಳ, 5 ಎಕರೆ ಅನಾನಸ್, 1 ಎಕರೆ ತಾಳೆ ಹಾಗೂ ಉಳಿದ 15 ಎಕರೆ ಜಮೀನಿನಲ್ಲಿ ಭತ್ತ ಬೆಳೆಯುತ್ತಾರೆ. ಅಡಿಕೆ, ಶುಂಠಿ, ಬಾಳೆ ಮಧ್ಯೆದಲ್ಲಿ ತರಕಾರಿ, ಮೆಣಸು ಬೆಳೆಯುತ್ತಿದ್ದಾರೆ. ಕುಟುಂಬದ ಮಹಿಳೆಯರು ಬಿಡುವಿನ ಸಮಯದಲ್ಲಿ ತರಕಾರಿ, ವಿವಿಧ ಬಗೆಯ ಸೊಪ್ಪು ಬೆಳೆದು ಕೃಷಿಯಲ್ಲಿ ಆಸಕ್ತಿ ಹೆಚ್ಚಿಸಿಕೊಂಡಿದ್ದಾರೆ.</p>.<p>ಅಡಿಕೆ ತೋಟದ ನಡುವೆ ಅನಾನಸ್, ಬಾಳೆ ನೆಟ್ಟು ಅಧಿಕ ಲಾಭ ತೆಗೆಯುವಲ್ಲಿ ಈ ಕುಟುಂಬ ಯಶಸ್ವಿಯಾಗಿದೆ.</p>.<p>ಹಸು, ಎಮ್ಮೆ ಸಾಕಾಣಿಕೆ ಮಾಡಲಾಗಿದ್ದು, ಡೇರಿಗೆ ಹಾಲನ್ನೂ ಹಾಕುತ್ತಾರೆ. ಸಗಣಿ ಗೊಬ್ಬರವನ್ನು ಎಲ್ಲ ಬೆಳೆಗೆ ಬಳಸು<br />ವುದರಿಂದ ಅಧಿಕ ಇಳುವರಿ ತೆಗೆಯಲು ಸಾಧ್ಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೊರಬ: </strong>ಒಗ್ಗಟ್ಟಿನ ದುಡಿಮೆ, ಕಠಿಣ ಪರಿಶ್ರಮ, ದೃಢ ನಿರ್ಧಾರ, ಕಾಲಕ್ಕೆ ಅನುಗುಣವಾಗಿ ತಾಂತ್ರಿಕತೆ ಅಳವಡಿಸಿಕೊಂಡರೆ ಕೃಷಿಯಲ್ಲೂ ಯಶಸ್ಸು ಸಾಧಿಸಬಹುದು ಎನ್ನುವುದನ್ನು ಈಡೂರು ಗ್ರಾಮದ ಅವಿಭಕ್ತ ಕುಟುಂಬದ ಸದಸ್ಯರು ತೋರಿಸಿಕೊಟ್ಟಿದ್ದಾರೆ.</p>.<p>ಜಾಗತೀಕರಣ ಹಾಗೂ ನಗರೀಕರಣದ ಪ್ರಭಾವದಿಂದ ಇಂದು ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಬದಲಾಗಿವೆ. ಆದರೆ, ತಾಲ್ಲೂಕಿನ ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯ ಈಡೂರು ಗ್ರಾಮದಲ್ಲಿ ಅವಿಭಕ್ತ ಕುಟುಂಬದ ಸದಸ್ಯರು ಒಟ್ಟಾಗಿ ಜೀವನ ನಡೆಸುವ ಜತೆಗೆ<br />ಕೃಷಿ ಕಾರ್ಯದಲ್ಲಿ ಒಗ್ಗಟ್ಟಿನಿಂದ ತೊಡಗಿಕೊಂಡಿರುವ ಪರಿಣಾಮ ಆರ್ಥಿಕ ಅಭಿವೃದ್ಧಿ ಕಾಣುತ್ತಿದ್ದಾರೆ.</p>.<p>42 ಜನ ಇರುವ ಕುಟುಂಬದಲ್ಲಿ ಪ್ರತಿಯೊಬ್ಬ ಸದಸ್ಯರ ನಡುವೆ ಪ್ರೀತಿ, ಸಹಬಾಳ್ವೆ ಇದೆ. ಸಹೋದರರಾದ ಹನುಮಂತಪ್ಪ, ಲಕ್ಷ್ಮಣಪ್ಪ, ಶಿವಾನಂದ, ಶೇಖರ, ಕೃಷ್ಣಪ್ಪ, ಪ್ರಭಾಕರ, ಜಗದೀಶ, ದಯಾನಂದ, ಪರಶುರಾಮ ಒಟ್ಟಿಗೆ ಕೃಷಿಯಲ್ಲಿ ತೊಡಗಿದ್ದಾರೆ. ಆ ಮೂಲಕ ಕೂಲಿಕಾರರ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.</p>.<p>‘ಆಧುನಿಕ ಪದ್ಧತಿ ಅಳವಡಿಸಿದ್ದರಿಂದ ನಮ್ಮ ಕುಟುಂಬಕ್ಕೆ ಕೃಷಿ ಸರಳವೂ, ಸುಲಭವೂ, ಲಾಭದಾಯಕವೂ ಆಗಿದೆ’ ಎನ್ನುತ್ತಾರೆ ಲಕ್ಷ್ಮಣಪ್ಪ.</p>.<p>ಒಟ್ಟು 45 ಎಕರೆ ಜಮೀನಿನಲ್ಲಿ 10 ಎಕರೆ ಅಡಿಕೆ, 3 ಎಕರೆ ಶುಂಠಿ, 5 ಎಕರೆ ಪಪ್ಪಾಯ, 5 ಎಕರೆ ಬಾಳೆ, 1 ಎಕರೆ ಶೇಂಗಾ, 5 ಎಕರೆ ಜೋಳ, 5 ಎಕರೆ ಅನಾನಸ್, 1 ಎಕರೆ ತಾಳೆ ಹಾಗೂ ಉಳಿದ 15 ಎಕರೆ ಜಮೀನಿನಲ್ಲಿ ಭತ್ತ ಬೆಳೆಯುತ್ತಾರೆ. ಅಡಿಕೆ, ಶುಂಠಿ, ಬಾಳೆ ಮಧ್ಯೆದಲ್ಲಿ ತರಕಾರಿ, ಮೆಣಸು ಬೆಳೆಯುತ್ತಿದ್ದಾರೆ. ಕುಟುಂಬದ ಮಹಿಳೆಯರು ಬಿಡುವಿನ ಸಮಯದಲ್ಲಿ ತರಕಾರಿ, ವಿವಿಧ ಬಗೆಯ ಸೊಪ್ಪು ಬೆಳೆದು ಕೃಷಿಯಲ್ಲಿ ಆಸಕ್ತಿ ಹೆಚ್ಚಿಸಿಕೊಂಡಿದ್ದಾರೆ.</p>.<p>ಅಡಿಕೆ ತೋಟದ ನಡುವೆ ಅನಾನಸ್, ಬಾಳೆ ನೆಟ್ಟು ಅಧಿಕ ಲಾಭ ತೆಗೆಯುವಲ್ಲಿ ಈ ಕುಟುಂಬ ಯಶಸ್ವಿಯಾಗಿದೆ.</p>.<p>ಹಸು, ಎಮ್ಮೆ ಸಾಕಾಣಿಕೆ ಮಾಡಲಾಗಿದ್ದು, ಡೇರಿಗೆ ಹಾಲನ್ನೂ ಹಾಕುತ್ತಾರೆ. ಸಗಣಿ ಗೊಬ್ಬರವನ್ನು ಎಲ್ಲ ಬೆಳೆಗೆ ಬಳಸು<br />ವುದರಿಂದ ಅಧಿಕ ಇಳುವರಿ ತೆಗೆಯಲು ಸಾಧ್ಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>