ದೇಶಾಭಿಮಾನಕ್ಕೆ ಹೆಸರಾದ ಆರ್ಎಸ್ಎಸ್ ಸಂಘಟನೆಯ ಅರಿವಿಲ್ಲದೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹಗುರವಾಗಿ ಮಾತನಾಡಿದ್ದಾರೆ. ಆರ್ಎಸ್ಎಸ್ ಎಂದೂ ಜಾತಿವಾದಿ ಸಂಘಟನೆಯಲ್ಲ. ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸುವ ಕಾರ್ಯಕರ್ತರನ್ನು ತಯಾರು ಮಾಡುವ ಸಂಘಟನೆ. ಅಲ್ಲಿ ಎಲ್ಲ ಜಾತಿಯ ಜನರೂ ಒಳಗೊಂಡಿದ್ದಾರೆ. ಈಗಿನ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಅವರೂ ಸಂಘಟನೆಯಲ್ಲೇ ಬೆಳೆದು ಬಂದವರು. ಅಂತಹ ಸಂಘಟನೆ ವಿರುದ್ಧ ಅವಹೇಳನ ಸಲ್ಲದು ಎಂದು ಆಕ್ರೋಶ ವ್ಯಕ್ತಪಡಿಸಿದರು.