ಸಾಗರದಲ್ಲಿ ಮಾರಿಕಾಂಬಾ ದೇವಿಯನ್ನು ತವರುಮನೆಯಿಂದ ಗಂಡನ ಮನೆಗೆ ಕಳುಹಿಸುವ ರಾಜಬೀದಿ ಉತ್ಸವ ಮಂಗಳವಾರ ತಡರಾತ್ರಿ ನಡೆಯಿತು.
ಮಧ್ಯವರ್ತಿಗಳ ಹಾವಳಿ...
ಜಾತ್ರೆಯಲ್ಲಿನ ತಾತ್ಕಾಲಿಕ ವಾಣಿಜ್ಯ ಮಳಿಗಗಳ ಹರಾಜಿನಲ್ಲಿ ಮಧ್ಯವರ್ತಿಗಳ ಹಾವಳಿ ತಡೆಯಲು ಮುಚ್ಚಿದ ಲಕೋಟೆಯಲ್ಲಿ ಟೆಂಡರ್ ಸಲ್ಲಿಸುವ ಪದ್ದತಿಯನ್ನು ಜಾರಿಗೆ ತಂದಿದ್ದರೂ ಮಧ್ಯವರ್ತಿಗಳ ಹಾವಳಿ ನಿಂತಿಲ್ಲ ಎಂದು ವ್ಯಾಪಾರಸ್ಥರು ದೂರುತ್ತಿದ್ದಾರೆ. ಹರಾಜಿನಲ್ಲಿ ಮಳಿಗೆ ಪಡೆದ ಕೆಲವು ಮಧ್ಯವರ್ತಿಗಳು ಜಾತ್ರೆ ಆರಂಭವಾಗಿ ಎರಡು ದಿನ ಕಳೆದರೂ ಗಿರಾಕಿಗಳು ಸಿಗದೆ ಹತಾಶರಾಗಿದ್ದು ಕೆಲವು ಮಳಿಗೆಗಳು ಖಾಲಿ ಉಳಿದಿವೆ.