ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಸೊರಬ: ಪ್ರೋತ್ಸಾಹಧನದ ನಿರೀಕ್ಷೆಯಲ್ಲಿ ಮೇದಾರರು

ಜೀವನಕ್ಕೆ ಆಸರೆಯಾಗಿರುವ ಕುಲಕಸಬು.. ಬಿದಿರಿನ ಅಲಭ್ಯತೆಯ ಕೊರಗು...
Published : 7 ಮೇ 2024, 6:13 IST
Last Updated : 7 ಮೇ 2024, 6:13 IST
ಫಾಲೋ ಮಾಡಿ
Comments
ಆರ್ಥಿಕ ಸಂಕಷ್ಟದಲ್ಲಿ ಮೇದಾರ ಕುಟುಂಬ ಬರಗಾಲದಲ್ಲಿ ಹೆಚ್ಚಿದ ಬಿದಿರಿನ ಬೆಲೆ ಸರ್ಕಾರ ನೆರವು ನೀಡಬಹುದೆಂಬ ನಿರೀಕ್ಷೆ
ಸ್ವಂತ ಭೂಮಿ ಇಲ್ಲದೇ ಇದ್ದರೂ ಕುಲಕಸುಬಿನಿಂದ ಗೌರವಯುತ ಜೀವನ ನಡೆಸಲು ಸಾಧ್ಯವಾಗಿದೆ. ಆದರೆ ಸರ್ಕಾರ ದೇಸಿ ಉದ್ಯಮಕ್ಕೆ ಪ್ರೋತ್ಸಾಹ ನೀಡಲು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು.
ವೆಂಕಟೇಶ ಮೇದಾರ ಕುಟುಂಬದ ಸದಸ್ಯ
ಬಿದಿರು ನಾಶ: ಕುಲಕಸುಬಿಗೆ ಆಪತ್ತು
ಐದಾರು ವರ್ಷಗಳಿಂದ ತಾಲ್ಲೂಕಿನಲ್ಲಿ ಬರ ಅವರಿಸಿರುವುದರಿಂದ ಬಿದಿರು ನಾಶವಾಗಿದೆ. ಕಾಡಿನಲ್ಲಿ ಯಥೇಚ್ಛವಾಗಿ ಲಭ್ಯವಿದ್ದ ಶಾವೆ ಬಿದಿರು ಅರಣ್ಯನಾಶದಿಂದ ಸುಲಭವಾಗಿ ದೊರೆಯುತ್ತಿಲ್ಲ. ಕೆಲವು ರೈತರು ತಾವು ಬೆಳೆದ ಶಾವೆ ಬಿದಿರಿಗೆ ದುಪ್ಪಟ್ಟು ದರ ಹೇಳುತ್ತಾರೆ. ದುಬಾರಿ ಹಣ ನೀಡಿ ಬಿದಿರು ಪಡೆದು ತಯಾರಿಸಿದ ಬುಟ್ಟಿಗೆ ಮಾರುಕಟ್ಟೆಯಲ್ಲಿ ₹ 150ಕ್ಕೆ ಮಾರಾಟವಾಗುವುದು ಕಷ್ಟ. ಕಣಜಕ್ಕೆ ಗರಿಷ್ಠ ಬೆಲೆ ಇದ್ದರೂ ರೈತರು ಇಂದು ಕಣಜದಲ್ಲಿ ಭತ್ತ ಸಂಗ್ರಹಿಸಿಡುತ್ತಿಲ್ಲ. ಎಲ್ಲ ಋತುಗಳಲ್ಲೂ ಎಲ್ಲ ವಸ್ತುಗಳಿಗೆ ಬೇಡಿಕೆ ಇರುವುದಿಲ್ಲ.‌ ಇದರಿಂದ ಶ್ರಮಕ್ಕೆ ತಕ್ಕಂತೆ ಆದಾಯವನ್ನೂ ನಿರೀಕ್ಷೆ ಮಾಡುವಂತಿಲ್ಲ. ಮಳೆ ಬಿಸಿಲಿನಲ್ಲಿ ಶ್ರೀಮಂತರ ಹೊಲಗದ್ದೆಗಳಲ್ಲಿ ಕೂಲಿ ಮಾಡುವ ಬದಲು ಮನೆಯಲ್ಲಿಯೇ ಕುಳಿತು ಬುಟ್ಟಿ ಹೆಣೆಯಬಹುದು ಎನ್ನುವ ಸಮಾಧಾನ ಹೊರತುಪಡಿಸಿದರೆ ಆರ್ಥಿಕವಾಗಿ ನೆಮ್ಮದಿ ಕಾಣಲು ಸಾಧ್ಯವಿಲ್ಲ. ಸರ್ಕಾರ ಕುಲಕಸುಬು ಉಳಿಸಲು ಕಚ್ಚಾ ವಸ್ತುಗಳ ‌ಖರೀದಿಗೆ ಪ್ರೋತ್ಸಾಹಧನ ಕಲ್ಪಿಸಿದರೆ ಭವಿಷ್ಯದಲ್ಲಿ ಕುಲಕಸಬಿನ‌ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಲು ಸಾಧ್ಯವಿದೆ‌ ಎನ್ನುತ್ತದೆ ‌ಮೇದಾರ‌ ಕುಟುಂಬ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT