<p><strong>ಭದ್ರಾವತಿ: </strong>ಭದ್ರಾವತಿ ವಿಧಾನಸಭಾ ಕ್ಷೇತ್ರಕ್ಕೆ 2018ರಿಂದ2021ರವರೆಗೆ ಸರ್ಕಾರದಿಂದ ಶಾಸಕರ ನಿಧಿಗೆ ಬರಬೇಕಾದ ₹ 6 ಕೋಟಿಯಲ್ಲಿ ಬಿಡುಗಡೆಯಾಗಿರುವುದು ₹ 4.22 ಕೋಟಿ.</p>.<p>ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ನಂತರ 2018–19ನೇ ಸಾಲಿನಲ್ಲಿ ₹ 1.61 ಕೋಟಿ ಮೊತ್ತ ಬಂದಿದೆ. ಅದರಲ್ಲಿ ರಸ್ತೆ, ಆಟೊನಿಲ್ದಾಣ, ಬಸ್ ತಂಗುದಾಣ, ವಿವಿಧ ಸಮುದಾಯ ಭವನಗಳಿಗೆ ಅನುದಾನ ನೀಡಲಾಗಿದೆ. ಕಾಮಗಾರಿಗಳು ನಡೆದಿವೆ.</p>.<p>2019ರ ಅಂತ್ಯದಲ್ಲಿ ಕೊರೊನಾ ಸಂಕಷ್ಟ ಕಾರಣ ಆ ಸಾಲಿನಲ್ಲಿ ಬಂದ ಮೊತ್ತ ₹ 61 ಲಕ್ಷ. ಅದರಲ್ಲಿ ಅಷ್ಟಾಗಿ ಕಾಮಗಾರಿ ಯೋಜನೆ ರೂಪಿಸಲು ಸಾಧ್ಯವಾಗದಿದ್ದರೂ 2018–19ನೇ ಸಾಲಿನಲ್ಲಿ ಅಪೂರ್ಣವಾಗಿದ್ದ ಕೆಲಸ ಕಾರ್ಯಗಳಿಗೆ ಸದ್ಬಳಕೆ ಮಾಡಲಾಗಿದೆ.</p>.<p>ಕಳೆದ ಸಾಲಿನಲ್ಲಿ ಬಿಡುಗಡೆಯಾದ ಪೂರ್ಣ ಪ್ರಮಾಣದ ₹ 2 ಕೋಟಿ ಅನುದಾನದಲ್ಲಿ ಅರ್ಧದಷ್ಟು ಮೊತ್ತವನ್ನು ಎಂಪಿಎಂ ಕಲ್ಯಾಣ ಮಂದಿರದಲ್ಲಿ ಆರಂಭಿಸಿದ 500 ಬೆಡ್ ಆಸ್ಪತ್ರೆಗೆ ಹಾಗೂ ಆಂಬುಲೆನ್ಸ್, ಆಮ್ಲಜನಕ ಸಂಪರ್ಕ ವ್ಯವಸ್ಥೆಗೆಭರಿಸಲಾಗಿದೆ.</p>.<p class="Subhead"><strong>ಹೆಚ್ಚಿದ ಆಸ್ಪತ್ರೆ ಸೌಲಭ್ಯ: </strong>ಅನುದಾನದ ನೆರವಿನಿಂದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ 50 ಹಾಸಿಗೆಗಳು ಸಂಪೂರ್ಣ ಆಮ್ಲಜನಕ ಸೌಲಭ್ಯ ಹೊಂದಿವೆ. ಸಹಜವಾಗಿಯೇ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿದಂತಾಗಿದೆ. ಎರಡು ಆಂಬುಲೆನ್ಸ್ ಲಭ್ಯವಾಗಿರುವುದು ಮೂಲಸೌಕರ್ಯವನ್ನು ಹೆಚ್ಚಿಸಿದಂತಾಗಿದೆ. ಇದರ ಮೂಲಕ 100 ಹಾಸಿಗೆಗಳ ಆಸ್ಪತ್ರೆ ಹೈಟೆಕ್ ಹಂತವನ್ನು ತಲುಪಿದೆ.</p>.<p>‘ಎಂಪಿಎಂ ಕಲ್ಯಾಣ ಮಂಟಪದಲ್ಲಿ ಆರಂಭಿಸಿದ ಕೋವಿಡ್ ಆಸ್ಪತ್ರೆ ಸೇವೆಗೆ ಸಜ್ಜಾಗಿದೆ. ಅಲ್ಲಿ ಚಿಕಿತ್ಸಾ ಕಾರ್ಯ ನಡೆದಿದೆ. ಮುಂದೆ ಕೊರೊನಾ ಸಂಕಷ್ಟ ಎದುರಾದಲ್ಲಿ ಅದನ್ನು ನಿಭಾಯಿಸುವ ಮಟ್ಟದ ವ್ಯವಸ್ಥೆ ಅಲ್ಲಿದೆ’ ಎನ್ನುತ್ತಾರೆ ವೈದ್ಯಾಧಿಕಾರಿಗಳು.</p>.<p class="Subhead"><strong>ಬೇಡಿಕೆ ಹೆಚ್ಚಿದೆ: </strong>‘ನನ್ನ ಕ್ಷೇತ್ರಕ್ಕೆ ಇಲ್ಲಿಯ ತನಕ ₹ 6 ಕೋಟಿ ಅನುದಾನ ಬರಬೇಕಿತ್ತು. ಬಂದಿರುವ ಮೊತ್ತದಲ್ಲೇ ಅರ್ಧದಷ್ಟನ್ನು ಕೋವಿಡ್ ಸಂಕಷ್ಟಕ್ಕೆ ಬಳಕೆ ಮಾಡಲಾಗಿದೆ. ಉಳಿದ ಆವಶ್ಯಕತೆಗೆ ನಾಗರಿಕರ ಬೇಡಿಕೆ ಹೆಚ್ಚಿದೆ. ಬೇಡಿಕೆಗೆ ತಕ್ಕಂತೆ ಅನುದಾನ ಸಿಗದಿರುವುದು ಹೊರೆ ಹೆಚ್ಚು ಮಾಡಿದೆ’ ಎನ್ನುತ್ತಾರೆ ಶಾಸಕ ಬಿ.ಕೆ. ಸಂಗಮೇಶ್ವರ.</p>.<p>‘ಗ್ರಾಮೀಣ ಭಾಗದಲ್ಲಿ ಚಾನಲ್ ರಸ್ತೆ, ರಿವೀಟ್ಮೆಂಟ್ ಕೆಲಸಕ್ಕೆ ಒತ್ತು ನೀಡಲಾಗಿದೆ. ಇದಲ್ಲದೆ ನಗರದ ಸುಮಾರು 35 ಆಟೊರಿಕ್ಷಾ ನಿಲ್ದಾಣಗಳಿಗೆ ಶೆಲ್ಟರ್ ಕಲ್ಪಿಸುವ ಕೆಲಸ ಮಾಡಲಾಗಿದೆ. ಐದಾರು ಕಡೆ ನಗರ ಬಸ್ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಇದಲ್ಲದೆ ಹಲವು ಸಮುದಾಯ ಭವನ, ಸಂಘ–ಸಂಸ್ಥೆಗಳ ಕಟ್ಟಡಗಳಿಗೆ ₹ 10 ಲಕ್ಷದಿಂದ ₹ 50 ಲಕ್ಷದ ತನಕ ಅನುದಾನ ನೀಡಲಾಗಿದೆ’ ಎಂದು ಅಂಕಿ–ಅಂಶ ತೆರೆದಿಟ್ಟರು.</p>.<p>ಬಂದಿರುವ ಒಟ್ಟು ಮೊತ್ತದಲ್ಲಿ ಕೋವಿಡ್ ಸಮಯದಲ್ಲಿ ಅಗತ್ಯವಿದ್ದ ಆಸ್ಪತ್ರೆ ನೆರವಿಗೆ ಹೆಚ್ಚಿನ ವಿನಿಯೋಗ ಮಾಡಿರುವುದು ಸಹಜವಾಗಿ ಜನರ ಆರೋಗ್ಯಕ್ಕೆ ಒತ್ತು ಕೊಡಲಾಗಿದೆ. ಸಾರ್ವಜನಿಕ ಆಸ್ಪತ್ರೆ ಒಂದಷ್ಟು ಹೈಟೆಕ್ ಹಂತಕ್ಕೆ ತರಲಾಗಿದೆ.</p>.<p class="Briefhead">***</p>.<p class="Briefhead">ಶಾಸಕರ ನಿಧಿಯ ನೆರವು ಕೋರಿ ಸಾಕಷ್ಟು ಜನರು ಮನವಿ ಸಲ್ಲಿಸಿದ್ದಾರೆ. ಒತ್ತಡ ಇದ್ದೇ ಇದೆ. ಇಷ್ಟಾದರೂ ಕೋವಿಡ್ ಸಂಕಷ್ಟದಲ್ಲಿ ಬಳಸಿಕೊಂಡಿದ್ದೇವೆ. ಕೋವಿಡ್ ಕೆಲಸಕ್ಕೆ ವಿನಿಯೋಗ ಮಾಡಿದ ಮೊದಲ ಶಾಸಕ ಎಂಬ ಹೆಮ್ಮೆ ನನಗಿದೆ.</p>.<p><strong>- ಬಿ.ಕೆ.ಸಂಗಮೇಶ್ವರ, ಶಾಸಕ, ಭದ್ರಾವತಿ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ: </strong>ಭದ್ರಾವತಿ ವಿಧಾನಸಭಾ ಕ್ಷೇತ್ರಕ್ಕೆ 2018ರಿಂದ2021ರವರೆಗೆ ಸರ್ಕಾರದಿಂದ ಶಾಸಕರ ನಿಧಿಗೆ ಬರಬೇಕಾದ ₹ 6 ಕೋಟಿಯಲ್ಲಿ ಬಿಡುಗಡೆಯಾಗಿರುವುದು ₹ 4.22 ಕೋಟಿ.</p>.<p>ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ನಂತರ 2018–19ನೇ ಸಾಲಿನಲ್ಲಿ ₹ 1.61 ಕೋಟಿ ಮೊತ್ತ ಬಂದಿದೆ. ಅದರಲ್ಲಿ ರಸ್ತೆ, ಆಟೊನಿಲ್ದಾಣ, ಬಸ್ ತಂಗುದಾಣ, ವಿವಿಧ ಸಮುದಾಯ ಭವನಗಳಿಗೆ ಅನುದಾನ ನೀಡಲಾಗಿದೆ. ಕಾಮಗಾರಿಗಳು ನಡೆದಿವೆ.</p>.<p>2019ರ ಅಂತ್ಯದಲ್ಲಿ ಕೊರೊನಾ ಸಂಕಷ್ಟ ಕಾರಣ ಆ ಸಾಲಿನಲ್ಲಿ ಬಂದ ಮೊತ್ತ ₹ 61 ಲಕ್ಷ. ಅದರಲ್ಲಿ ಅಷ್ಟಾಗಿ ಕಾಮಗಾರಿ ಯೋಜನೆ ರೂಪಿಸಲು ಸಾಧ್ಯವಾಗದಿದ್ದರೂ 2018–19ನೇ ಸಾಲಿನಲ್ಲಿ ಅಪೂರ್ಣವಾಗಿದ್ದ ಕೆಲಸ ಕಾರ್ಯಗಳಿಗೆ ಸದ್ಬಳಕೆ ಮಾಡಲಾಗಿದೆ.</p>.<p>ಕಳೆದ ಸಾಲಿನಲ್ಲಿ ಬಿಡುಗಡೆಯಾದ ಪೂರ್ಣ ಪ್ರಮಾಣದ ₹ 2 ಕೋಟಿ ಅನುದಾನದಲ್ಲಿ ಅರ್ಧದಷ್ಟು ಮೊತ್ತವನ್ನು ಎಂಪಿಎಂ ಕಲ್ಯಾಣ ಮಂದಿರದಲ್ಲಿ ಆರಂಭಿಸಿದ 500 ಬೆಡ್ ಆಸ್ಪತ್ರೆಗೆ ಹಾಗೂ ಆಂಬುಲೆನ್ಸ್, ಆಮ್ಲಜನಕ ಸಂಪರ್ಕ ವ್ಯವಸ್ಥೆಗೆಭರಿಸಲಾಗಿದೆ.</p>.<p class="Subhead"><strong>ಹೆಚ್ಚಿದ ಆಸ್ಪತ್ರೆ ಸೌಲಭ್ಯ: </strong>ಅನುದಾನದ ನೆರವಿನಿಂದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ 50 ಹಾಸಿಗೆಗಳು ಸಂಪೂರ್ಣ ಆಮ್ಲಜನಕ ಸೌಲಭ್ಯ ಹೊಂದಿವೆ. ಸಹಜವಾಗಿಯೇ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿದಂತಾಗಿದೆ. ಎರಡು ಆಂಬುಲೆನ್ಸ್ ಲಭ್ಯವಾಗಿರುವುದು ಮೂಲಸೌಕರ್ಯವನ್ನು ಹೆಚ್ಚಿಸಿದಂತಾಗಿದೆ. ಇದರ ಮೂಲಕ 100 ಹಾಸಿಗೆಗಳ ಆಸ್ಪತ್ರೆ ಹೈಟೆಕ್ ಹಂತವನ್ನು ತಲುಪಿದೆ.</p>.<p>‘ಎಂಪಿಎಂ ಕಲ್ಯಾಣ ಮಂಟಪದಲ್ಲಿ ಆರಂಭಿಸಿದ ಕೋವಿಡ್ ಆಸ್ಪತ್ರೆ ಸೇವೆಗೆ ಸಜ್ಜಾಗಿದೆ. ಅಲ್ಲಿ ಚಿಕಿತ್ಸಾ ಕಾರ್ಯ ನಡೆದಿದೆ. ಮುಂದೆ ಕೊರೊನಾ ಸಂಕಷ್ಟ ಎದುರಾದಲ್ಲಿ ಅದನ್ನು ನಿಭಾಯಿಸುವ ಮಟ್ಟದ ವ್ಯವಸ್ಥೆ ಅಲ್ಲಿದೆ’ ಎನ್ನುತ್ತಾರೆ ವೈದ್ಯಾಧಿಕಾರಿಗಳು.</p>.<p class="Subhead"><strong>ಬೇಡಿಕೆ ಹೆಚ್ಚಿದೆ: </strong>‘ನನ್ನ ಕ್ಷೇತ್ರಕ್ಕೆ ಇಲ್ಲಿಯ ತನಕ ₹ 6 ಕೋಟಿ ಅನುದಾನ ಬರಬೇಕಿತ್ತು. ಬಂದಿರುವ ಮೊತ್ತದಲ್ಲೇ ಅರ್ಧದಷ್ಟನ್ನು ಕೋವಿಡ್ ಸಂಕಷ್ಟಕ್ಕೆ ಬಳಕೆ ಮಾಡಲಾಗಿದೆ. ಉಳಿದ ಆವಶ್ಯಕತೆಗೆ ನಾಗರಿಕರ ಬೇಡಿಕೆ ಹೆಚ್ಚಿದೆ. ಬೇಡಿಕೆಗೆ ತಕ್ಕಂತೆ ಅನುದಾನ ಸಿಗದಿರುವುದು ಹೊರೆ ಹೆಚ್ಚು ಮಾಡಿದೆ’ ಎನ್ನುತ್ತಾರೆ ಶಾಸಕ ಬಿ.ಕೆ. ಸಂಗಮೇಶ್ವರ.</p>.<p>‘ಗ್ರಾಮೀಣ ಭಾಗದಲ್ಲಿ ಚಾನಲ್ ರಸ್ತೆ, ರಿವೀಟ್ಮೆಂಟ್ ಕೆಲಸಕ್ಕೆ ಒತ್ತು ನೀಡಲಾಗಿದೆ. ಇದಲ್ಲದೆ ನಗರದ ಸುಮಾರು 35 ಆಟೊರಿಕ್ಷಾ ನಿಲ್ದಾಣಗಳಿಗೆ ಶೆಲ್ಟರ್ ಕಲ್ಪಿಸುವ ಕೆಲಸ ಮಾಡಲಾಗಿದೆ. ಐದಾರು ಕಡೆ ನಗರ ಬಸ್ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಇದಲ್ಲದೆ ಹಲವು ಸಮುದಾಯ ಭವನ, ಸಂಘ–ಸಂಸ್ಥೆಗಳ ಕಟ್ಟಡಗಳಿಗೆ ₹ 10 ಲಕ್ಷದಿಂದ ₹ 50 ಲಕ್ಷದ ತನಕ ಅನುದಾನ ನೀಡಲಾಗಿದೆ’ ಎಂದು ಅಂಕಿ–ಅಂಶ ತೆರೆದಿಟ್ಟರು.</p>.<p>ಬಂದಿರುವ ಒಟ್ಟು ಮೊತ್ತದಲ್ಲಿ ಕೋವಿಡ್ ಸಮಯದಲ್ಲಿ ಅಗತ್ಯವಿದ್ದ ಆಸ್ಪತ್ರೆ ನೆರವಿಗೆ ಹೆಚ್ಚಿನ ವಿನಿಯೋಗ ಮಾಡಿರುವುದು ಸಹಜವಾಗಿ ಜನರ ಆರೋಗ್ಯಕ್ಕೆ ಒತ್ತು ಕೊಡಲಾಗಿದೆ. ಸಾರ್ವಜನಿಕ ಆಸ್ಪತ್ರೆ ಒಂದಷ್ಟು ಹೈಟೆಕ್ ಹಂತಕ್ಕೆ ತರಲಾಗಿದೆ.</p>.<p class="Briefhead">***</p>.<p class="Briefhead">ಶಾಸಕರ ನಿಧಿಯ ನೆರವು ಕೋರಿ ಸಾಕಷ್ಟು ಜನರು ಮನವಿ ಸಲ್ಲಿಸಿದ್ದಾರೆ. ಒತ್ತಡ ಇದ್ದೇ ಇದೆ. ಇಷ್ಟಾದರೂ ಕೋವಿಡ್ ಸಂಕಷ್ಟದಲ್ಲಿ ಬಳಸಿಕೊಂಡಿದ್ದೇವೆ. ಕೋವಿಡ್ ಕೆಲಸಕ್ಕೆ ವಿನಿಯೋಗ ಮಾಡಿದ ಮೊದಲ ಶಾಸಕ ಎಂಬ ಹೆಮ್ಮೆ ನನಗಿದೆ.</p>.<p><strong>- ಬಿ.ಕೆ.ಸಂಗಮೇಶ್ವರ, ಶಾಸಕ, ಭದ್ರಾವತಿ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>