ನಮ್ಮ ನಟಮಿತ್ರರಿಗಾಗಿ ನಿರ್ದೇಶಿಸಿದ 'ಭೀಮಕಥಾನಕ', 'ಸೀತಾ ಚರಿತ'. ಅವರೇ ಬರೆದ ನಾಟಕಗಳು. 'ಸ್ವಪ್ನ ಸಾರಸ್ವತ, ನಾಟಕ ರೂಪಾಂತರ, ಕಾರ್ನಾಡರ 'ಯಯಾತಿ', 'ಮಾಮಾಮೋಶಿ', 'ಹಕ್ಕಿಗೊಂದು ಗೂಡುಕೊಡಿ'. ಅವರು ನಮ್ಮ ತಂಡಕ್ಕೆ ನಿರ್ದೇಶಿಸಿದ ನಾಟಕಗಳು, ಸತ್ಯ ಮತ್ತು ಸೌಂದರ್ಯದ ಹುಡುಕಾಟವೇ ನನ್ನ ನಾಟಕ, ರಂಗಭೂಮಿ, ಅದಕ್ಕೆ ನನ್ನ ಮೊದಲ ಆದ್ಯತೆ ಎನ್ನುವುದು ಅವರ ದಿಟ್ಟ ನಿಲುವಾಗಿತ್ತು. 'ಬುದ್ಧ ಹೇಳಿದ ಕತೆ', 'ಗಿಳಿಯಾದ ಮಂತ್ರವಾದಿ' ಎಂಬ ಮಕ್ಕಳ ನಾಟಕಗಳನ್ನೂ ನಮ್ಮ ತಂಡಕ್ಕೆ ನಿರ್ದೇಶಿಸಿದ್ದರು.