ಮಂಗಗಳನ್ನು ಹಿಡಿದು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸುವುದು ಅವೈಜ್ಞಾನಿಕ. ಅರಣ್ಯದಲ್ಲಿಯೇ ಅವುಗಳಿಗೆ ಆಹಾರ ಸಿಗುವಂತೆ ನಿರಂತರ ಕಾರ್ಯಕ್ರಮ ರೂಪಿಸಬೇಕು
ಪರಿಸರ ಪ್ರೇಮಿ, ಕಾಳಿಗುಂಡಿ
ವಾರ್ಷಿಕ ಕೃಷಿ ಉತ್ಪಾದನೆಯಲ್ಲಿ ಶೇ 25ರಿಂದ 30ರಷ್ಟು ಕಾಡು ಮಂಗಗಳು ಸೇರಿದಂತೆ ಪ್ರಾಣಿಗಳ ಪಾಲಾಗುತ್ತಿದೆ. ರೈತರಿಗಾಗುವ ಈ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು
ಸಿ.ಈರಣ್ಣ, ಕೃಷಿಕ, ಕಲ್ಲೂರು
ಮಂಗಗಳಿಂದ ಫಸಲು ನಷ್ಟದ ನಿಖರ ಮೌಲ್ಯಮಾಪನ ಕಷ್ಟ. ಇತರೆ ವನ್ಯಪ್ರಾಣಿಗಳಿಂದಾಗುವ ಬೆಳೆಹಾನಿಗೆ ಖಾತೆ ಜಮೀನಾಗಿದ್ದಲ್ಲಿ ಸರ್ಕಾರದಿಂದ ಪರಿಹಾರ ಪಡೆಯಬಹುದು
ಪವನ್ಕುಮಾರ್ ಎನ್., ಅರಣ್ಯಾಧಿಕಾರಿ, ವನ್ಯಜೀವಿ ವಿಭಾಗ, ಮುಗುಡ್ತಿ