<p><strong>ಸಾಗರ:</strong> ತಾಲ್ಲೂಕಿನ ಕೆಳದಿ ಬಂದಗದ್ದೆಯ ರಾಜಗುರು ಹಿರೇಮಠದಲ್ಲಿ ಈ ಬಾರಿ ವಿಜಯದಶಮಿಯ ದಿನ ಪಚ್ಚೆಲಿಂಗ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.</p>.<p>ಬ್ಯಾಂಕ್ ಲಾಕರ್ನಲ್ಲಿ ಪಚ್ಚೆಲಿಂಗ ಇಟ್ಟಿದ್ದ ಕಾರಣ 22 ವರ್ಷಗಳಿಂದ ದರ್ಶನಕ್ಕೆ ಅವಕಾಶ ಇರಲಿಲ್ಲ. 1996-97ರಿಂದ ನವರಾತ್ರಿ ಸಮಯದಲ್ಲಿ ದೊರೆಯುತ್ತಿದ್ದ ಅಪರೂಪದ ಪಚ್ಚೆಲಿಂಗ ದರ್ಶನವೂ ನಿಂತು ಹೋಗಿತ್ತು. ಕಳೆದ ವರ್ಷ ವಿಜಯದಶಮಿ ದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಚ್.ಹಾಲಪ್ಪ ಹರತಾಳು ಅವರ ಸಹಕಾರದಿಂದ ಪಚ್ಚೆಲಿಂಗವನ್ನು ಮಠಕ್ಕೆ ತರಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಬಾರಿ ಕೋವಿಡ್ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವ ದೃಷ್ಟಿಯಿಂದ ದರ್ಶನಕ್ಕೆ ವ್ಯವಸ್ಥೆ ಮಾಡಿಲ್ಲ ಎಂದು ಅವರು ಪ್ರಕಟಣೆ ನೀಡಿದ್ದಾರೆ.</p>.<p>ಈ ಲಿಂಗಕ್ಕೆ ಸುಮಾರು 600 ವರ್ಷಗಳ ಇತಿಹಾಸವಿದೆ. ಬಂದಗದ್ದೆ ಹಿರೇಮಠ ಕೆಳದಿ ಸಾಮ್ರಾಜ್ಯದ ರಾಜಗುರುಗಳ ಆಶ್ರಮ. ರಾಣಿ ಚೆನ್ನಮ್ಮಾಜಿ ಸೇರಿ ಕೆಳದಿ ಅರಸರ ರಾಜಗುರುಗಳು ಈ ಮಠಕ್ಕೆ ಸೇರಿದವರು. ಅಪರೂಪದ ಪಚ್ಚೆ ಲಿಂಗವನ್ನು ಕೆಳದಿ ಅರಸರು ಮಠಕ್ಕೆ ನೀಡಿದ್ದರು. ಅಂದಿನಿಂದ ಪ್ರತಿ ವರ್ಷದ ನವರಾತ್ರಿಯೂ ಸೇರಿ ವಿಶೇಷ ಸಮಯದಲ್ಲಿ ಅದಕ್ಕೆ ಪೂಜೆ ಸಲ್ಲಿಸಲಾಗುತ್ತಿತ್ತು. ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ:</strong> ತಾಲ್ಲೂಕಿನ ಕೆಳದಿ ಬಂದಗದ್ದೆಯ ರಾಜಗುರು ಹಿರೇಮಠದಲ್ಲಿ ಈ ಬಾರಿ ವಿಜಯದಶಮಿಯ ದಿನ ಪಚ್ಚೆಲಿಂಗ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.</p>.<p>ಬ್ಯಾಂಕ್ ಲಾಕರ್ನಲ್ಲಿ ಪಚ್ಚೆಲಿಂಗ ಇಟ್ಟಿದ್ದ ಕಾರಣ 22 ವರ್ಷಗಳಿಂದ ದರ್ಶನಕ್ಕೆ ಅವಕಾಶ ಇರಲಿಲ್ಲ. 1996-97ರಿಂದ ನವರಾತ್ರಿ ಸಮಯದಲ್ಲಿ ದೊರೆಯುತ್ತಿದ್ದ ಅಪರೂಪದ ಪಚ್ಚೆಲಿಂಗ ದರ್ಶನವೂ ನಿಂತು ಹೋಗಿತ್ತು. ಕಳೆದ ವರ್ಷ ವಿಜಯದಶಮಿ ದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಚ್.ಹಾಲಪ್ಪ ಹರತಾಳು ಅವರ ಸಹಕಾರದಿಂದ ಪಚ್ಚೆಲಿಂಗವನ್ನು ಮಠಕ್ಕೆ ತರಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಬಾರಿ ಕೋವಿಡ್ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವ ದೃಷ್ಟಿಯಿಂದ ದರ್ಶನಕ್ಕೆ ವ್ಯವಸ್ಥೆ ಮಾಡಿಲ್ಲ ಎಂದು ಅವರು ಪ್ರಕಟಣೆ ನೀಡಿದ್ದಾರೆ.</p>.<p>ಈ ಲಿಂಗಕ್ಕೆ ಸುಮಾರು 600 ವರ್ಷಗಳ ಇತಿಹಾಸವಿದೆ. ಬಂದಗದ್ದೆ ಹಿರೇಮಠ ಕೆಳದಿ ಸಾಮ್ರಾಜ್ಯದ ರಾಜಗುರುಗಳ ಆಶ್ರಮ. ರಾಣಿ ಚೆನ್ನಮ್ಮಾಜಿ ಸೇರಿ ಕೆಳದಿ ಅರಸರ ರಾಜಗುರುಗಳು ಈ ಮಠಕ್ಕೆ ಸೇರಿದವರು. ಅಪರೂಪದ ಪಚ್ಚೆ ಲಿಂಗವನ್ನು ಕೆಳದಿ ಅರಸರು ಮಠಕ್ಕೆ ನೀಡಿದ್ದರು. ಅಂದಿನಿಂದ ಪ್ರತಿ ವರ್ಷದ ನವರಾತ್ರಿಯೂ ಸೇರಿ ವಿಶೇಷ ಸಮಯದಲ್ಲಿ ಅದಕ್ಕೆ ಪೂಜೆ ಸಲ್ಲಿಸಲಾಗುತ್ತಿತ್ತು. ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>