ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ವಿಜಯದಶಮಿಯ ದಿನ ಪಚ್ಚೆಲಿಂಗ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ'

Last Updated 19 ಅಕ್ಟೋಬರ್ 2020, 14:36 IST
ಅಕ್ಷರ ಗಾತ್ರ

ಸಾಗರ: ತಾಲ್ಲೂಕಿನ ಕೆಳದಿ ಬಂದಗದ್ದೆಯ ರಾಜಗುರು ಹಿರೇಮಠದಲ್ಲಿ ಈ ಬಾರಿ ವಿಜಯದಶಮಿಯ ದಿನ ಪಚ್ಚೆಲಿಂಗ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಬ್ಯಾಂಕ್ ಲಾಕರ್‌ನಲ್ಲಿ ಪಚ್ಚೆಲಿಂಗ ಇಟ್ಟಿದ್ದ ಕಾರಣ 22 ವರ್ಷಗಳಿಂದ ದರ್ಶನಕ್ಕೆ ಅವಕಾಶ ಇರಲಿಲ್ಲ. 1996-97ರಿಂದ ನವರಾತ್ರಿ ಸಮಯದಲ್ಲಿ ದೊರೆಯುತ್ತಿದ್ದ ಅಪರೂಪದ ಪಚ್ಚೆಲಿಂಗ ದರ್ಶನವೂ ನಿಂತು ಹೋಗಿತ್ತು. ಕಳೆದ ವರ್ಷ ವಿಜಯದಶಮಿ ದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಚ್.ಹಾಲಪ್ಪ ಹರತಾಳು ಅವರ ಸಹಕಾರದಿಂದ ಪಚ್ಚೆಲಿಂಗವನ್ನು ಮಠಕ್ಕೆ ತರಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಬಾರಿ ಕೋವಿಡ್ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವ ದೃಷ್ಟಿಯಿಂದ ದರ್ಶನಕ್ಕೆ ವ್ಯವಸ್ಥೆ ಮಾಡಿಲ್ಲ ಎಂದು ಅವರು ಪ್ರಕಟಣೆ ನೀಡಿದ್ದಾರೆ.

ಈ ಲಿಂಗಕ್ಕೆ ಸುಮಾರು 600 ವರ್ಷಗಳ ಇತಿಹಾಸವಿದೆ. ಬಂದಗದ್ದೆ ಹಿರೇಮಠ ಕೆಳದಿ ಸಾಮ್ರಾಜ್ಯದ ರಾಜಗುರುಗಳ ಆಶ್ರಮ. ರಾಣಿ ಚೆನ್ನಮ್ಮಾಜಿ ಸೇರಿ ಕೆಳದಿ ಅರಸರ ರಾಜಗುರುಗಳು ಈ ಮಠಕ್ಕೆ ಸೇರಿದವರು. ಅಪರೂಪದ ಪಚ್ಚೆ ಲಿಂಗವನ್ನು ಕೆಳದಿ ಅರಸರು ಮಠಕ್ಕೆ ನೀಡಿದ್ದರು. ಅಂದಿನಿಂದ ಪ್ರತಿ ವರ್ಷದ ನವರಾತ್ರಿಯೂ ಸೇರಿ ವಿಶೇಷ ಸಮಯದಲ್ಲಿ ಅದಕ್ಕೆ ಪೂಜೆ ಸಲ್ಲಿಸಲಾಗುತ್ತಿತ್ತು. ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT