ಬ್ಯಾಂಕ್ ಲಾಕರ್ನಲ್ಲಿ ಪಚ್ಚೆಲಿಂಗ ಇಟ್ಟಿದ್ದ ಕಾರಣ 22 ವರ್ಷಗಳಿಂದ ದರ್ಶನಕ್ಕೆ ಅವಕಾಶ ಇರಲಿಲ್ಲ. 1996-97ರಿಂದ ನವರಾತ್ರಿ ಸಮಯದಲ್ಲಿ ದೊರೆಯುತ್ತಿದ್ದ ಅಪರೂಪದ ಪಚ್ಚೆಲಿಂಗ ದರ್ಶನವೂ ನಿಂತು ಹೋಗಿತ್ತು. ಕಳೆದ ವರ್ಷ ವಿಜಯದಶಮಿ ದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಚ್.ಹಾಲಪ್ಪ ಹರತಾಳು ಅವರ ಸಹಕಾರದಿಂದ ಪಚ್ಚೆಲಿಂಗವನ್ನು ಮಠಕ್ಕೆ ತರಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಬಾರಿ ಕೋವಿಡ್ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವ ದೃಷ್ಟಿಯಿಂದ ದರ್ಶನಕ್ಕೆ ವ್ಯವಸ್ಥೆ ಮಾಡಿಲ್ಲ ಎಂದು ಅವರು ಪ್ರಕಟಣೆ ನೀಡಿದ್ದಾರೆ.