ಸೋಮವಾರ ಹರೀಶನಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಸ್ಥಳೀಯ ಯುವಕ ಮಂಜುನಾಥ್ ನದಿಯಲ್ಲಿ ಈಜಲು ತೆರಳಿ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಈಜಿ ಈಜಿ ಸುಸ್ತಾಗಿ ನೀರಿನಲ್ಲಿ ಮುಳುಗುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಕೂಗಿದಾಗ, ಅಲ್ಲೇ ಇದ್ದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಬೋಟಿನ ಮೂಲಕ ತೆರಳಿ ಮಂಜುನಾಥನನ್ನು ರಕ್ಷಣೆ ಮಾಡಿದರು.