‘ಕೊಳಚೆ ನಿರ್ಮೂಲನ ಮಂಡಳಿ ಇನ್ನೆರಡು ತಿಂಗಳಲ್ಲಿ ಹಕ್ಕುಪತ್ರ ಕೊಡುವುದಾಗಿ ಹೇಳುತ್ತಿದೆ. ಆದರೆ ಅದು ಪರಿಚಯ ಪತ್ರವಾಗಬಾರದು. ನಗರದಲ್ಲಿರುವ ಎಲ್ಲ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಕೂಡಲೇ ಶಾಶ್ವತ ಹಕ್ಕುಪತ್ರ ನೀಡಬೇಕು’ ಎಂದು ಮನವಿಯಲ್ಲಿ ಆಗ್ರಹಿಸಿದೆ. ಪ್ರಮುಖರಾದ ನೇತ್ರಾವತಿ ಟಿ., ರೋಹಿತ್, ರವಿಕುಮಾರ್, ಪುಷ್ಪಲತಾ, ಸುರೇಶ್ ಕೋಟೆಗಾರ್, ಮಕ್ಬುಲ್ ಅಹ್ಮದ್, ಪ್ರದೀಪ್ ಇದ್ದರು.