ಮಲೆನಾಡಿನಲ್ಲಿ ಜನರು ಪೂರ್ವಜರು ಆಚರಿಸಿಕೊಂಡು ಬಂದ ಪದ್ಧತಿಯಂತೆ ಭೂ ರಮೆಯ ಒಡಲು ತುಂಬಿದ ಈ ಹೊತ್ತಿನಲ್ಲಿ
ಬಯಕೆಯನ್ನು ಈಡೇರಿಸಲು ಹೊಲದಲ್ಲಿ ಬೆಳೆದು ನಿಂತ ಫಸಲಿಗೆ ವಿಶೇಷ ಪೂಜೆ ಸಲ್ಲಿಸಿ, ಭೂಮಿ ಹುಣ್ಣಿಮೆ ಆಚರಿಸುವುದು ವಾಡಿಕೆ. ಭೂ ತಾಯಿಗೆ ಪೂಜೆ ಸಲ್ಲಿಸಿದ ರೈತರು ಮಣ್ಣಿನ ಮಕ್ಕಳ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿದರು.