<p>ಶಿವಮೊಗ್ಗ: ನಿರ್ಬಂಧಗಳನ್ನು ಲೆಕ್ಕಿಸದೆ ಹಬ್ಬದ ದಿನವಾದ ಬುಧವಾರ ಜನರು ಗಾಂಧಿ ಬಜಾರ್ ನಲ್ಲಿ ಹೂವು. ಹಣ್ಣು. ತರಕಾರಿ ಖರೀದಿಸಿದರು. ಎಪಿಎಂಸಿ ತರಕಾರಿ ಮಾರುಕಟ್ಟೆ ಬಂದ್ ಆದ ಕಾರಣ ಗಾಂಧಿ ಬಜಾರ್ ಗೆ ಜನ ಮುಗಿಬಿದ್ದಿದ್ದರು</p>.<p>ಮೀನು ಮಾರುಕಟ್ಟೆ, ಗಾಂಧಿ ಬಜಾರ್ ಮುಖ್ಯರಸ್ತೆ, ಸಿನಿಮಾ ರಸ್ತೆ ಹಾಗೂ ಬಜಾರ್ ನ ಸುತ್ತಮುತ್ತ ತರಕಾರಿ, ದಿನಸಿ ಮತ್ತು ಅಗತ್ಯವಸ್ತಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಬಿ.ಎಚ್ ರಸ್ತೆಯಲ್ಲಿ ಜನರನ್ನ ಚದುರಿಸಲು ಪೊಲೀಸರು ಲಾಠಿ ಬೀಸಿದರು.</p>.<p>ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ ಜನರನ್ನು ತಡೆಯಲು ಬ್ಯಾರಿಕೇಡ್ ನಿರ್ಮಿಸಿದರೂ ಜನರು ಒಳ ಮಾರ್ಗಗಳಿಂದ ಬಜಾರ್ ಪ್ರವೇಶಿಸಿ ಖರೀದಿಸುತ್ತಿದ್ದರು. ಆಟೊರಿಕ್ಷಾಗಳ ಸಂಚಾರವೂ ಕಂಡುಂತು. ಅಗತ್ಯ ವಸ್ತುಗಳ ದರ ಗಗನಕ್ಕೇರಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>