<p><strong>ಶಿವಮೊಗ್ಗ: </strong>ಜಿಲ್ಲೆಯಲ್ಲಿ ಭಾನುವಾರ ಸೋಂಕಿಗೆ ಒಳಗಾಗಿದ್ದ 28 ಜನರು ಗುಣಮುಖರಾಗಿದ್ದಾರೆ. ಅವರನ್ನು ಮೆಗ್ಗಾನ್ ಆರೈಕೆ ಕೇಂದ್ರದಿಂದ ಅವರ ಮನೆಗಳಿಗೆ ಕಳುಹಿಸಿಕೊಡಲಾಯಿತು.</p>.<p>ಮನೆಯಲ್ಲೇ ಕ್ವಾರಂಟೈನ್ನಲ್ಲಿ ಇರುವಂತೆ ಅವರಿಗೆಲ್ಲ ಸೂಚಿಸಲಾಗಿದೆ. ಇದುವರೆಗೂ 146 ಜನರು ಗುಣಮುಖರಾಗಿದ್ದಾರೆ. 242 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>42 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 446ಕ್ಕೇರಿದೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 13 ಜನರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ.</p>.<p>ಬೆಂಗಳೂರು ಸೇರದಿಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಶಿವಮೊಗ್ಗಕ್ಕೆ ಬಂದಿರುವ 6 ಜನರಲ್ಲಿ ಸೋಂಕು ಇರುವುದು ಖಚಿತಪಟ್ಟಿದೆ. ಕೋವಿಡ್ ರೋಗಿಗಳ ಪ್ರಥಮ ಸೋಂಕಿತರ ಪ್ರಥಮ ಸಂಪರ್ಕದಿಂದ 17 ಜನರಿಗೆ ಸೋಂಕು ತಗುಲಿದೆ. ಆರೋಗ್ಯ ಸಮಸ್ಯೆಯ ಕಾರಣ ಚಿಕಿತ್ಸೆಗೆ ದಾಖಲಾಗಿದ್ದ ಐವರ ಗಂಟಲು ದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದು, ಸೋಂಕಿನ ಮೂಲ ಹುಡುಕಲಾಗುತ್ತಿದೆ.</p>.<p><strong>124 ಕಂಟೈನ್ಮೆಂಟ್ ಜೋನ್:</strong></p>.<p>ಜಿಲ್ಲೆಯಲ್ಲಿ 124ಕಂಟೈನ್ಮೆಂಟ್ ಜೋನ್ಗಳನ್ನು ಮಾಡಲಾಗಿದೆ. 14 ದಿನಗಳನ್ನು ಪೂರೈಸಿದ 8 ಜೋನ್ಗಳನ್ನು ತೆರವುಗೊಳಿಸಲಾಗಿದೆ.</p>.<p><strong>ಇಬ್ಬರಿಗೆ ಕೊರೊನಾ ಸೋಂಕು (ಭದ್ರಾವತಿ):</strong></p>.<p>ಇಲ್ಲಿನ ಒಎಸ್ಎಂ ರಸ್ತೆಯ ಎರಡನೇ ತಿರುವಿನ 52 ಮತ್ತು 54 ವರ್ಷದ ಇಬ್ಬರು ಸಹೋದರರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇವರಿಬ್ಬರು ವಾರದ ಹಿಂದೆ ಬೆಂಗಳೂರಿನಿಂದ ಬಂದಿದ್ದರು ಒಎಸ್ಎಂ ರಸ್ತೆಯ ಎರಡು ಬೀದಿಗಳನ್ನು ಸೀಲ್ ಡೌನ್ ಮಾಡಲಾಗಿದೆ.</p>.<p><strong>ಬೆಂಗಳೂರಿನಿಂದ ಬಂದಿದ್ದ ವ್ಯಕ್ತಿಗೆ ಸೋಂಕು (ತೀರ್ಥಹಳ್ಳಿ):</strong></p>.<p>ಬೆಂಗಳೂರಿನನಿಂದ ಮೂರು ದಿನದ ಹಿಂದೆ ಸೊಪ್ಪುಗುಡ್ಡೆ ಬಡಾವಣೆಯ ಸಂಬಂಧಿಕರ ಮನೆಗೆ ಬಂದಿದ್ದ 40 ವರ್ಷದ<br />ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ಭಾನುವಾರ ದೃಢಪಟ್ಟಿದೆ.</p>.<p>ಎರಡು ದಿನದ ಹಿಂದೆ ಜ್ವರ ಕಾಣಿಸಿಕೊಂಡಿದ್ದರಿಂದ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಕೊರೊನಾ ಸೋಂಕು ಪತ್ತೆ ಹಿನ್ನೆಲೆ ಈ ಬಡಾವಣೆ ಸೀಲ್ಡೌನ್ ಮಾಡಲಾಗಿದೆ. ಸುತ್ತಮುತ್ತಲಿನ ಪ್ರದೇಶವನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ.</p>.<p><strong>ಮೂವರಲ್ಲಿ ಒಬ್ಬರಿಗೆ ಪಾಸಿಟಿವ್ (ಹೊಸನಗರ):</strong></p>.<p>ಬೆಂಗಳೂರಿನಿಂದ ಬೈಸೆ ಗ್ರಾಮ ಸಮೀಪದಕೆರೆಗದ್ದೆಗೆ ಬಂದಿದ್ದ ಮೂವರಲ್ಲಿ 39 ವರ್ಷದ ಒಬ್ಬರಿಗೆ ಪಾಸಿಟಿವ್ ಬಂದಿದೆ.ಉಳಿದ ಇಬ್ಬರಲ್ಲಿ ಸೋಂಕು ಕಂಡುಬಂದಿಲ್ಲ.</p>.<p>ಕೆರೆಗದ್ದೆಗೆ ಸಾಗುವ ಮಾರ್ಗದಲ್ಲಿ ಮುನ್ನೆಚ್ಚರಿಕಾ ಫಲಕ ಹಾಕಲಾಗಿದೆ. ಅಲ್ಲದೆ ಸೋಂಕಿತರ ಮನೆಯ ಸುತ್ತಮುತ್ತ ಔಷಧ ಸಿಂಪಡಿಸಲಾಗಿದೆ.ಕೆರೆಗದ್ದೆಯಲ್ಲಿ ಬಂದ ಪಾಸಿಟಿವ್ ಸೇರಿದಂತೆ ಮೂಡುಗೊಪ್ಪ ಗ್ರಾಮ ಪಂಚಾಯಿತಿವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ ಮೂರಕ್ಕೇರಿದೆ. ಈ ಹಿಂದೆ ಹಿಲ್ಕುಂಜಿ ಗ್ರಾಮದಲ್ಲಿ ಬೆಂಗಳೂರಿನಿಂದ ಬಂದ ಮಗಳು ಮತ್ತು ಅಳಿಯನಿಗೆ ಸೋಂಕು ಪತ್ತೆಯಾಗಿತ್ತು.</p>.<p><strong>ಮೂವರಿಗೆಕೊರೊನಾ ಸೋಂಕು (ಶಿಕಾರಿಪುರ):</strong></p>.<p>ಶಿಕಾರಿಪುರ ತಾಲ್ಲೂಕಿನಲ್ಲಿ 3 ಮಂದಿಗೆ ಕೊರೊನಾ ಸೊಂಕು ತಗುಲಿರುವುದು ಭಾನುವಾರ ದೃಢಪಟ್ಟಿದೆ. ತಾಲ್ಲೂಕಿನ ನಂದಿಹಳ್ಳಿ ಗ್ರಾಮದ 30 ವರ್ಷದ ಪುರುಷನಿಗೆ, 44 ವರ್ಷದ ಮಹಿಳೆಗೆ ಹಾಗೂ ಮುಳುಕೊಪ್ಪ ಗ್ರಾಮದ 29 ವರ್ಷದ ಮಹಿಳೆಗೆ ಕೊರೊನಾ ಸೊಂಕು ತಗುಲಿರುವುದು ದೃಢಪಟ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ: </strong>ಜಿಲ್ಲೆಯಲ್ಲಿ ಭಾನುವಾರ ಸೋಂಕಿಗೆ ಒಳಗಾಗಿದ್ದ 28 ಜನರು ಗುಣಮುಖರಾಗಿದ್ದಾರೆ. ಅವರನ್ನು ಮೆಗ್ಗಾನ್ ಆರೈಕೆ ಕೇಂದ್ರದಿಂದ ಅವರ ಮನೆಗಳಿಗೆ ಕಳುಹಿಸಿಕೊಡಲಾಯಿತು.</p>.<p>ಮನೆಯಲ್ಲೇ ಕ್ವಾರಂಟೈನ್ನಲ್ಲಿ ಇರುವಂತೆ ಅವರಿಗೆಲ್ಲ ಸೂಚಿಸಲಾಗಿದೆ. ಇದುವರೆಗೂ 146 ಜನರು ಗುಣಮುಖರಾಗಿದ್ದಾರೆ. 242 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>42 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 446ಕ್ಕೇರಿದೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 13 ಜನರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ.</p>.<p>ಬೆಂಗಳೂರು ಸೇರದಿಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಶಿವಮೊಗ್ಗಕ್ಕೆ ಬಂದಿರುವ 6 ಜನರಲ್ಲಿ ಸೋಂಕು ಇರುವುದು ಖಚಿತಪಟ್ಟಿದೆ. ಕೋವಿಡ್ ರೋಗಿಗಳ ಪ್ರಥಮ ಸೋಂಕಿತರ ಪ್ರಥಮ ಸಂಪರ್ಕದಿಂದ 17 ಜನರಿಗೆ ಸೋಂಕು ತಗುಲಿದೆ. ಆರೋಗ್ಯ ಸಮಸ್ಯೆಯ ಕಾರಣ ಚಿಕಿತ್ಸೆಗೆ ದಾಖಲಾಗಿದ್ದ ಐವರ ಗಂಟಲು ದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದು, ಸೋಂಕಿನ ಮೂಲ ಹುಡುಕಲಾಗುತ್ತಿದೆ.</p>.<p><strong>124 ಕಂಟೈನ್ಮೆಂಟ್ ಜೋನ್:</strong></p>.<p>ಜಿಲ್ಲೆಯಲ್ಲಿ 124ಕಂಟೈನ್ಮೆಂಟ್ ಜೋನ್ಗಳನ್ನು ಮಾಡಲಾಗಿದೆ. 14 ದಿನಗಳನ್ನು ಪೂರೈಸಿದ 8 ಜೋನ್ಗಳನ್ನು ತೆರವುಗೊಳಿಸಲಾಗಿದೆ.</p>.<p><strong>ಇಬ್ಬರಿಗೆ ಕೊರೊನಾ ಸೋಂಕು (ಭದ್ರಾವತಿ):</strong></p>.<p>ಇಲ್ಲಿನ ಒಎಸ್ಎಂ ರಸ್ತೆಯ ಎರಡನೇ ತಿರುವಿನ 52 ಮತ್ತು 54 ವರ್ಷದ ಇಬ್ಬರು ಸಹೋದರರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇವರಿಬ್ಬರು ವಾರದ ಹಿಂದೆ ಬೆಂಗಳೂರಿನಿಂದ ಬಂದಿದ್ದರು ಒಎಸ್ಎಂ ರಸ್ತೆಯ ಎರಡು ಬೀದಿಗಳನ್ನು ಸೀಲ್ ಡೌನ್ ಮಾಡಲಾಗಿದೆ.</p>.<p><strong>ಬೆಂಗಳೂರಿನಿಂದ ಬಂದಿದ್ದ ವ್ಯಕ್ತಿಗೆ ಸೋಂಕು (ತೀರ್ಥಹಳ್ಳಿ):</strong></p>.<p>ಬೆಂಗಳೂರಿನನಿಂದ ಮೂರು ದಿನದ ಹಿಂದೆ ಸೊಪ್ಪುಗುಡ್ಡೆ ಬಡಾವಣೆಯ ಸಂಬಂಧಿಕರ ಮನೆಗೆ ಬಂದಿದ್ದ 40 ವರ್ಷದ<br />ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ಭಾನುವಾರ ದೃಢಪಟ್ಟಿದೆ.</p>.<p>ಎರಡು ದಿನದ ಹಿಂದೆ ಜ್ವರ ಕಾಣಿಸಿಕೊಂಡಿದ್ದರಿಂದ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಕೊರೊನಾ ಸೋಂಕು ಪತ್ತೆ ಹಿನ್ನೆಲೆ ಈ ಬಡಾವಣೆ ಸೀಲ್ಡೌನ್ ಮಾಡಲಾಗಿದೆ. ಸುತ್ತಮುತ್ತಲಿನ ಪ್ರದೇಶವನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ.</p>.<p><strong>ಮೂವರಲ್ಲಿ ಒಬ್ಬರಿಗೆ ಪಾಸಿಟಿವ್ (ಹೊಸನಗರ):</strong></p>.<p>ಬೆಂಗಳೂರಿನಿಂದ ಬೈಸೆ ಗ್ರಾಮ ಸಮೀಪದಕೆರೆಗದ್ದೆಗೆ ಬಂದಿದ್ದ ಮೂವರಲ್ಲಿ 39 ವರ್ಷದ ಒಬ್ಬರಿಗೆ ಪಾಸಿಟಿವ್ ಬಂದಿದೆ.ಉಳಿದ ಇಬ್ಬರಲ್ಲಿ ಸೋಂಕು ಕಂಡುಬಂದಿಲ್ಲ.</p>.<p>ಕೆರೆಗದ್ದೆಗೆ ಸಾಗುವ ಮಾರ್ಗದಲ್ಲಿ ಮುನ್ನೆಚ್ಚರಿಕಾ ಫಲಕ ಹಾಕಲಾಗಿದೆ. ಅಲ್ಲದೆ ಸೋಂಕಿತರ ಮನೆಯ ಸುತ್ತಮುತ್ತ ಔಷಧ ಸಿಂಪಡಿಸಲಾಗಿದೆ.ಕೆರೆಗದ್ದೆಯಲ್ಲಿ ಬಂದ ಪಾಸಿಟಿವ್ ಸೇರಿದಂತೆ ಮೂಡುಗೊಪ್ಪ ಗ್ರಾಮ ಪಂಚಾಯಿತಿವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ ಮೂರಕ್ಕೇರಿದೆ. ಈ ಹಿಂದೆ ಹಿಲ್ಕುಂಜಿ ಗ್ರಾಮದಲ್ಲಿ ಬೆಂಗಳೂರಿನಿಂದ ಬಂದ ಮಗಳು ಮತ್ತು ಅಳಿಯನಿಗೆ ಸೋಂಕು ಪತ್ತೆಯಾಗಿತ್ತು.</p>.<p><strong>ಮೂವರಿಗೆಕೊರೊನಾ ಸೋಂಕು (ಶಿಕಾರಿಪುರ):</strong></p>.<p>ಶಿಕಾರಿಪುರ ತಾಲ್ಲೂಕಿನಲ್ಲಿ 3 ಮಂದಿಗೆ ಕೊರೊನಾ ಸೊಂಕು ತಗುಲಿರುವುದು ಭಾನುವಾರ ದೃಢಪಟ್ಟಿದೆ. ತಾಲ್ಲೂಕಿನ ನಂದಿಹಳ್ಳಿ ಗ್ರಾಮದ 30 ವರ್ಷದ ಪುರುಷನಿಗೆ, 44 ವರ್ಷದ ಮಹಿಳೆಗೆ ಹಾಗೂ ಮುಳುಕೊಪ್ಪ ಗ್ರಾಮದ 29 ವರ್ಷದ ಮಹಿಳೆಗೆ ಕೊರೊನಾ ಸೊಂಕು ತಗುಲಿರುವುದು ದೃಢಪಟ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>